ಡಿಸೆಂಬರ್ 8ಕ್ಕೆ ಭಾರತ ಬಂದ್: ನೀವು ತಿಳಿಯಬೇಕಾದ ಅಂಶಗಳು
ನವದೆಹಲಿ, ಡಿಸೆಂಬರ್ 07: ಕೇಂದ್ರ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿಯಲ್ಲಿ ವಾರಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಭಾರತ ಬಂದ್ಗೆ ಕರೆ ನೀಡಿದ್ದಾರೆ.
ಡಿಸೆಂಬರ್ 8 ರಂದು ಭಾರತ ಬಂದ್ ನಡೆಯಲಿದೆ. ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಬೆಂಬಲ ನೀಡಿವೆ.
ಡಿಸೆಂಬರ್ 8ರ ಭಾರತ್ ಬಂದ್; ಏನಿರುತ್ತೆ, ಏನಿರಲ್ಲ?
ಈಗಾಗಲೇ ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ 5 ಸುತ್ತಿನ ಮಾತುಕತೆಗಳು ಮುಗಿದಿದ್ದು, ಸಂಧಾನ ವಿಫಲವಾಗಿದೆ. ಡಿಸೆಂಬರ್ 9 ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
*ದೆಹಲಿಯಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾಗವನ್ನು ಸೂಚಿಸಲಾಗಿದೆ.
*ಘಾಜಿಪುರ್ ಗಡಿಯಲ್ಲಿರುವ ಎನ್ಎಚ್24 ನ್ನು ಬಂದ್ ಮಾಡಲಾಗಿದೆ. ದೆಹಲಿಗೆ ಬರುವವರು ಅಪ್ಸರಾ, ಭೋಪ್ರಾ, ಡಿಎನ್ಡಿ ಮಾರ್ಗವಾಗಿ ಬರಲು ಸೂಚಿಸಲಾಗಿದೆ.
ಟಿಕ್ರಿ ಹಾಗೂ ಝರೋಡಾ ಹೆದ್ದಾರಿಯಲ್ಲೂ ಕೂಡ ರೈತರು ಪ್ರತಿಭಟಿಸುತ್ತಿದ್ದು, ಕೇವಲ ಲಘು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.
*ಸಿಂಘು, ಆಚಂಡಿ, ಲಾಂಪರ್, ಪಿಯಾವೋ ಮನಿಯಾರಿ, ಮಂಗೇಶ್ ಗಡಿಯನ್ನು ಮುಚ್ಚಲಾಗಿದೆ. ಎನ್ಎಚ್ 44 ಎರಡೂ ಕಡೆ ಬಂದ್ ಮಾಡಲಾಗಿದೆ.
*ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಡಿಎಂಕೆ, ಶಿವಸೇನೆ, ಕಮಲ್ ಹಾಸನ್ರ ಎಂಎನ್ಎಂ, ಎಡಪಕ್ಷಗಳು, ಟಿಎಂಸಿ, ಟಿಆರ್ಎಸ್ ಬಂದ್ಗೆ ಬೆಂಬಲ ಸೂಚಿಸವೆ.
*ಕೇಂದ್ರ ಸರ್ಕಾರವು ರೈತರ ಒಳಿತಿಗಾಗಿ ಮಸೂದೆಯನ್ನು ಜಾರಿಮಾಡಿದೆ. ಅದನ್ನು ಹಿಂತೆಗೆದುಕೊಳ್ಳುವ ಮಾತೇ ಇಲ್ಲ ಎಂದು ಸಚಿವ ಕೈಲಾಶ್ ಚೌಧರಿ ತಿಳಿಸಿದ್ದಾರೆ. ಈ ಮಸೂದೆಯಿಂದ ರೈತರು ಸ್ವಾತಂತ್ರ್ಯ ದೊರೆಯಲಿದೆ. ಅವರು ಬೆಳೆದಿರುವ ಪದಾರ್ಥಗಳನ್ನು ಅವರೇ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆಯನ್ನೂ ಕೂಡ ಕಲ್ಪಿಸಲಾಗಿದೆ.