ಪಂಜಾಬ್ ಎಎಪಿ ಮುಖ್ಯಸ್ಥ ಸ್ಥಾನ ತೊರೆದ ಭಗವಂತ್
ಅಮೃತ್ ಸರ್, ಮಾರ್ಚ್ 16: ಆಮ್ ಆದ್ಮಿ ಪಕ್ಷ(ಎಎಪಿ)ದ ಪಂಜಾಬ್ ವಿಭಾಗದ ಮುಖ್ಯಸ್ಥರಾಗಿದ್ದ ಭಗವಂತ್ ಮಾನ್ ಅವರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಕಂದಾಯ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಬಳಿ ಕ್ಷಮೆಯಾಚಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
'ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡಿರಬಹುದು. ನಾನು ಪಂಜಾಬಿನ ಆಮ್ ಆದ್ಮಿಯಾಗಿ ಮುಂದುವರೆಯುತ್ತೇನೆ. ಆದರೆ, ಡ್ರಗ್ಸ್ ಮಾಫಿಯಾ, ಭ್ರಷ್ಟಚಾರದ ವಿರುದ್ಧ ನನ್ನ ಹೋರಾಟ ಜಾರಿಯಲ್ಲಿರಲಿದೆ' ಎಂದಿದ್ದಾರೆ.
ಸಂಸತ್ ಭದ್ರತಾ ಲೋಪ ವಿಡಿಯೋ: ಸಂಸದ ಮಾನ್ ಕ್ಷಮೆ
ಡ್ರಗ್ಸ್ ಮಾಫಿಯಾಕ್ಕೆ ಬ್ರಿಕಮ್ ಸಿಂಗ್ ಕುಮ್ಮುಕ್ಕು ನೀಡುತ್ತಿದ್ದಾರೆ. ಡ್ರಗ್ ದೊರೆ ಎಂದು ಆರೋಪಿಸಿದ್ದ ಅರವಿಂದ್ ಕೇಜ್ರಿವಾಲ್ ಅವರು ನಂತರ ಕ್ಷಮೆಯಾಚಿಸಿದ್ದರು. ನಂತರ, ಅರವಿಂದ್ ವಿರುದ್ಧ ಹಾಕಿದ್ದ ಮಾನನಷ್ಟ ಮೊಕದ್ದಮೆಯನ್ನು ಬಿಕ್ರಮ್ ಅವರು ಹಿಂತೆಗೆದುಕೊಂಡಿದ್ದರು.
ਮੈਂ ਆਮ ਆਦਮੀ ਪਾਰਟੀ ਪੰਜਾਬ ਦੀ ਪ੍ਰਧਾਨਗੀ ਦੇ ਅਹੁਦੇ ਤੋਂ ਅਸਤੀਫ਼ਾ ਦੇ ਰਿਹਾ ਹਾਂ ..
— Bhagwant Mann (@BhagwantMann) March 16, 2018
I m resigning as a president of AAP Punjab ...but my fight against drug mafia and all kind of corruption in Punjab will continue as an “Aam Aadmi “ of Punjab
I fail to understand the timing of Kejrewal’ apology when STF of PB has stated to the High Court today that there’s substantial evidence to proceed against Bikram Majitha on the issue of drugs-khaira @ZeeNews @News18India @thetribunechd
— Sukhpal Singh Khaira (@SukhpalKhaira) March 15, 2018
2017ರಲ್ಲಿ ಎಎಪಿ ಪಂಜಾಬ್ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು.ಅರವಿಂದ್ ಅವರು ನಡೆದುಕೊಂಡ ರೀತಿಯಿಂದ ಪಂಜಾಬಿನ ಎಎಪಿ ಸದಸ್ಯರೆಲ್ಲರೂ ನೊಂದಿದ್ದಾರೆ. ಬ್ರಿಕಮ್ ವಿರುದ್ಧ ಹೈಕೋರ್ಟಿಗೆ ರಾಜ್ಯಸರ್ಕಾರದ ಎಸ್ ಟಿಎಫ್ ವರದಿ ಸಲ್ಲಿಸಿದೆ. ಇದಕ್ಕಿಂತ ಸಾಕ್ಷಿಬೇಕಾ? ಎಂದು ಭಗವಂತ್ ಪ್ರಶ್ನಿಸಿದ್ದಾರೆ.