ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿ ಮುಂಗಾರು ಕ್ಷೀಣ, ಜೂನ್ 08ಕ್ಕೆ ರಾಜ್ಯಕ್ಕೆ ಪ್ರವೇಶ

|
Google Oneindia Kannada News

ನವದೆಹಲಿ, ಮೇ 14: ಈ ಬಾರಿಯ ಮಳೆಗಾಲ ಸಾಮಾನ್ಯವಾಗಿರಲಿದ್ದು, ಮುಂಗಾರು ಮಾರುತ ಜೂನ್ 04ಕ್ಕೆ ಕೇರಳವನ್ನು ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ಹೇಳಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮೇ 22 ಕ್ಕೆ ಮುಂಗಾರು ಮಾರುತವು ಅಂಡಮಾನ್ ನಿಕೋಬಾರ್‌ಗೆ ಪ್ರವೇಶಿಸಲಿದೆ, ನಂತರ ಕೇರಳಕ್ಕೆ ಬರಲಿದ್ದು, ಜೂನ್ 7-8 ರ ಸುಮಾರಿಗೆ ಕರ್ನಾಟಕ ಪ್ರವೇಶಿಸುವ ನಿರೀಕ್ಷೆ ಇದೆ. ಜೂನ್ 29 ರ ವೇಳೆಗೆ ದೆಹಲಿಯು ಮುಂಗಾರಿನಲ್ಲಿ ನೆನಯಲಿದೆ.

ಪೂರ್ವ ಮುಂಗಾರು ಮಳೆ ಕ್ಷೀಣ : ರೈತರಿಗೆ ಕೆಲವು ಸಲಹೆಗಳು ಪೂರ್ವ ಮುಂಗಾರು ಮಳೆ ಕ್ಷೀಣ : ರೈತರಿಗೆ ಕೆಲವು ಸಲಹೆಗಳು

ದಕ್ಷಿಣ, ಪೂರ್ವ, ಉತ್ತರ, ಪಶ್ಚಿಮ ಭಾರತದೆಲ್ಲೆಡೆ ಈ ಮಾರುತ ಪರಿಣಾಮ ಬೀರಲಿದ್ದು, ಎಲ್ಲೆಡೆ ಈ ಬಾರಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆ ಆಗಲಿದೆ ಎಂದು ಸ್ಕೈಮೇಟ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. ಕೃಷಿಗೆ ಮುಂಗಾರು ಮಾರುತ ಅತ್ಯಂತ ಅವಶ್ಯಕವಾಗಿದ್ದು, ಸ್ಕೈಮೆಟ್‌ನ ಈ ವರದಿ ರೈತರಲ್ಲಿ ಆತಂಕ ತರುವಂತಿದೆ.

Below normal mansoon this time in India, Mansoon will arrive on June 04

ಕಳೆದ ವರ್ಷದ ಮುಂಗಾರಿಗೆ ಹೋಲಿಸಿದಲ್ಲಿ 50-70% ಪ್ರತಿಶತವಷ್ಟೆ ಈ ಬಾರಿ ಮಳೆ ಬೀಳಲಿದೆ ಎಂದು ಸ್ಕೈಮೆಟ್ ಹೇಳಿದೆ. ಉತ್ತರ ಕೆಲವು ಭಾಗಗಳಲ್ಲಿ 50% ಕ್ಕಿಂತಲೂ ಕಡಿಮೆ ವಾಡಿಕೆ ಮಳೆ ಆಗಲಿದೆ.

ಮಂಗಳವಾರ ದೇಶದ 10 ಹಾಟೆಸ್ಟ್ ನಗರಗಳು ಯಾವುವು?ಮಂಗಳವಾರ ದೇಶದ 10 ಹಾಟೆಸ್ಟ್ ನಗರಗಳು ಯಾವುವು?

ಈಗಾಗಲೇ ಬರದಿಂದ ತತ್ತರಿಸಿರುವ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶಗಳು, ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿತ್ತು, ಆದರೆ ಸ್ಕೈಮೆಟ್‌ನ ಈ ಹವಾಮಾನ ವರದಿ ಬರ ಇನ್ನಷ್ಟು ತೀವ್ರವಾಗುವ ಮುನ್ಸೂಚನೆಯನ್ನು ನೀಡಿದೆ.

ಕರಾವಳಿ ಕರ್ನಾಟಕಕ್ಕೆ ಹೋಲಿಸಿದಲ್ಲಿ, ಉತ್ತರ ಕರ್ನಾಟಕದಲ್ಲಿ ಕಡಿಮೆ ಮಳೆ ಆಗಲಿದೆ. ಈ ಬಾರಿ ಮುಂಗಾರು ಕ್ಷೀಣಿಸಲು ಎಲ್ ನಿನೋ ಪ್ರಭಾವದಿಂದಾಗಿ ಈ ಬಾರಿ ಮಳೆ ಕಡಿಮೆ ಆಗಲಿದೆ ಎಂದು ಸ್ಕೈಮೆಟ್ ಹವಾಮಾನ ಮುನ್ಸೂಚನೆ ಸಂಸ್ಥೆಯ ಮುಖ್ಯಸ್ಥ ಯತೀಶ್ ಸಿಂಗ್ ಹೇಳಿದ್ದಾರೆ.

English summary
Monsoon will hit Kerala on June 04th, Skymet saying that this year India will see below normal monsoon. Monsoon may hit Karnataka on June 7 or 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X