ದಿನಕರನ್ ಶಾಸಕರು ತಂಗಿದ್ದ ಕೂರ್ಗ್ ರೆಸಾರ್ಟ್ ಮೇಲೆ ಪೊಲೀಸ್ ದಾಳಿ
ಕೊಡಗು, ಸೆಪ್ಟೆಂಬರ್ 12: ಎಐಎಡಿಎಂಕೆಯ ಉಪ ಮಹಾಕಾರ್ಯದರ್ಶಿ ಟಿಟಿವಿ ದಿನಕರನ್ ಬೆಂಬಲಿತ ಶಾಸಕರು ತಂಗಿದ್ದ ಪ್ಯಾಡಿಂಗ್ಟನ್ ರೆಸಾರ್ಟ್ ಮೇಲೆ ತಮಿಳುನಾಡು ಪೊಲೀಸರು ಸೋಮವಾರ ಮಧ್ಯಾಹ್ನ ರೈಡ್ ಮಾಡಿದ್ದಾರೆ.
ಎಐಎಡಿಎಂಕೆಯಲ್ಲಿ ದಿನಕರನ್ ಆರ್ಭಟ; ಹಲವರ ಸ್ಥಾನಗಳಿಗೆ ಕುತ್ತು
ಸುಮಾರು 200ಕ್ಕೂ ಹೆಚ್ಚು ಜನರು ರೆಸಾರ್ಟ್ ಅನ್ನು ಸುತ್ತುವರಿದಿದ್ದು, ಶಾಸಕರನ್ನು ಬಂಧಿಸಲು ಮುಂದಾಗಿರುವುದಾಗಿ ಸ್ಥಳೀಯ ಮೂಲಗಳು ಮಾಹಿತಿ ನೀಡಿದೆ.
ಚೆನ್ನೈನಲ್ಲಿ ಸೋಮವಾರ ನಡೆದ ಎಐಎಡಿಎಂಕೆ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಶಿಕಲಾ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಯಿತು. ಇದರ ಬೆನ್ನಲ್ಲೇ ಕೊಡಗಿನಲ್ಲಿರುವ ರೆಸಾರ್ಟ್ ನ ಮೇಲೆ ಪೊಲೀಸ್ ದಾಳಿಯಾಗಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
Tamil Nadu policemen reach Paddington Resort in Karnataka's Kodagu, where TTV Dhinakaran faction MLAs are staying pic.twitter.com/te3d3xFRI1
— ANI (@ANI) September 12, 2017
ಕೆಲ ದಿನಗಳ ಹಿಂದೆ, ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಸರ್ಕಾರವನ್ನು ಉರುಳಿಸುವುದಾಗಿ ಪಣ ತೊಟ್ಟಿದ್ದ ಟಿಟಿವಿ ದಿನಕರನ್ (ಶಶಿಕಲಾ ಸಂಬಂಧಿ) ಅವರನ್ನು ಬೆಂಬಲಿಸುವ ಸುಮಾರು 17 ಶಾಸಕರು, ರೆಸಾರ್ಟ್ ರಾಜಕೀಯ ಆರಂಭಿಸಿದ್ದರು.
ಶಶಿಕಲಾ ವಿರೋಧಿಯಾಗಿರುವ ಪನ್ನೀರ್ ಸೆಲ್ವಂ ಅವರೊಂದಿಗೆ ಪಳನಿಸ್ವಾಮಿ ಕೈಜೋಡಿಸಿದ್ದರಿಂದಾಗಿ ಪಕ್ಷಕ್ಕೆ ಅಪಚಾರವಾಗಿದ್ದು, ಪಳನಿಸ್ವಾಮಿಗೆ ತಾವು ನೀಡಿರುವ ಬೆಂಬಲವನ್ನು ಹಿಂಪಡೆಯುವುದಾಗಿ ಈ ಶಾಸಕರು ತಮಿಳುನಾಡು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ಹೀಗೆ ಆರಂಭಗೊಂಡಿದ್ದ ರೆಸಾರ್ಟ್ ರಾಜಕೀಯ, ಆರಂಭದಲ್ಲಿ ಅವರು ಮಹಾಬಲಿಪುರಂ ನ ರೆಸಾರ್ಟ್ ನಲ್ಲಿ ಮುಂದುವರಿದಿತ್ತು. ಇತ್ತೀಚೆಗೆ, ಅದು ಕೊಡಗಿನಲ್ಲಿರುವ ಪ್ಯಾಡಿಂಗ್ಟನ್ ರೆಸಾರ್ಟ್ ಗೆ ಶಿಫ್ಟ್ ಆಗಿತ್ತೆಂದು ಹೇಳಲಾಗಿತ್ತು.