ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇದಾರದ ನಂತರ ಬದಿರನಾಥ ದೇಗುಲವೂ ದರ್ಶನಕ್ಕೆ ಲಭ್ಯ

|
Google Oneindia Kannada News

ನವದೆಹಲಿ, ಮೇ 10: ಹಿಮಪಾತದ ವಿರಾಮದ ನಂತರ ಬದರಿನಾಥ ದೇಗುಲವು ಮತ್ತೆ ತೆರೆಯಲಾಗಿದೆ. ಹಿಂದುಗಳ ಪವಿತ್ರ ಚಾರ್ ಧಾಮ್ ಯಾತ್ರಾ ಸ್ಥಳವಾದ ಕೇದಾರನಾಥ ಇತ್ತೀಚೆಗೆ ಭಕ್ತರ ದರ್ಶನಕ್ಕೆ ಬಾಗಿಲು ತೆಗೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಹಿಮಾಲಯದ ತಪ್ಪಲಿನಲ್ಲಿರುವ ಬದಿರನಾಥ ದೇಗುಲದ ಬಾಗಿಲುಗಳು ಶುಕ್ರವಾರದಂದು 4.15ಕ್ಕೆ ಭಕ್ತರಿಗೆ ತೆರೆಯಲಾಯಿತು ಎಂದು ಪ್ರಧಾನ ಅರ್ಚಕ ಈಶ್ವರಿ ಪ್ರಸಾದ್ ನಂಬೂದರಿ ಅವರು ತಿಳಿಸಿದರು.

Badrinath reopens after winter break

ಸಮುದ್ರಮಟ್ಟದಿಂದ ಅತಿ ಎತ್ತರದಲ್ಲಿರುವ ಈ ದೇಗುಲವು ಹಿಮಾವೃತವಾಗುವುದರಿಂದ ಭಕ್ತಾದಿಗಳಿಗೆ ದರ್ಶನ ಭಾಗ್ಯವಿರಲಿಲ್ಲ. ಸುಮಾರು 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಈ ಅವಧಿಯಲ್ಲಿ ದರ್ಶನ ಪಡೆಯಲಿದ್ದಾರೆ.

'ಉತ್ತರಾಖಂಡದಲ್ಲಿ ಬಂಡೆ ಉರುಳೋದು, ತೊಂದರೆ ಆಗೋದು ಮಾಮೂಲು''ಉತ್ತರಾಖಂಡದಲ್ಲಿ ಬಂಡೆ ಉರುಳೋದು, ತೊಂದರೆ ಆಗೋದು ಮಾಮೂಲು'

ಚಾರ್ ಧಾಮ್ ಯಾತ್ರೆಗಳ ಪೈಕಿ ಗಂಗೋತ್ರಿ,ಯಮುನೋತ್ರಿ, ಬದರಿನಾಥ ಹಾಗೂ ಕೇದಾರನಾಥ್ ಯಾತ್ರೆಯನ್ನು ಭಕ್ತರು ಈ ಅವಧಿಯಲ್ಲಿ ಕೈಗೊಳ್ಳುತ್ತಾರೆ. ಅದಿಗುರು ಶಂಕರಾಚಾರ್ಯರು ಸ್ಥಾಪಿಸಿದ್ದಾರೆ ಎನ್ನಲಾದ 12ನೇ ಶತಮಾನದ ಕೇದಾರನಾಥ್ ದೇಗುಲವು ಗುರುವಾರದಿಂದ ಭಕ್ತರ ದರ್ಶನಕ್ಕೆ ಲಭ್ಯವಾಗಿದೆ.

1200 ವರ್ಷದ ಹಿಂದೆ ಕೇದಾರನಾಥ ಸೃಷ್ಟಿ ಹೇಗಾಯ್ತು?1200 ವರ್ಷದ ಹಿಂದೆ ಕೇದಾರನಾಥ ಸೃಷ್ಟಿ ಹೇಗಾಯ್ತು?

ಸಮುದ್ರಮಟ್ಟದಿಂದ 3,500 ಮೀಟರ್ ಎತ್ತರವಿರುವ ಕೇದಾರನಾಥ್ ದೇಗುಲವು 2013ರಲ್ಲಿ ಮೇಘ ಸ್ಫೋಟ, ಹಿಮ ಪಾತ, ಪ್ರವಾಹದಿಂದ ತತ್ತರಿಸಿತ್ತು.

ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?

ಆದರೆ, ಮಂದಾಕಿನಿ ತಟದ ಈ ದೇಗುಲಕ್ಕೆ ಯಾವುದೆ ಹಾನಿಯಾಗಿರಲಿಲ್ಲ, ಪ್ರತಿ ವರ್ಷ ವೈಶಾಖ ಮಾಸ(ಏಪ್ರಿಲ್-ಮೇ)ದಲ್ಲಿ ದೇಗುಲದ ಬಾಗಿಲು ತೆಗೆಯಲಾಗುತ್ತದೆ, ಕಾರ್ತಿಕ (ಅಕ್ಟೋಬರ್-ನವೆಂಬರ್) ಮಾಸದಲ್ಲಿ ಬಾಗಿಲು ಹಾಕಲಾಗುತ್ತದೆ.

English summary
The portals of the Badrinath shrine were reopened for devotees early on Friday after the winter break.A visit to the Kedarnath temple is an integral part of the famous Char Dham Yatra in Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X