ಬದರಿನಾಥ ಧಾಮ: ವೇದ ಘೋಷಗಳ ಮಧ್ಯೆ ಭಕ್ತರಿಗಾಗಿ ತೆರೆದ ಪುರಾತನ ಯಾತ್ರಾಸ್ಥಳ
ಬದರಿನಾಥ ಧಾಮ ಮೇ 8: ಉತ್ತರಾಖಂಡದ ಬದರಿನಾಥ ಧಾಮ ಆರು ತಿಂಗಳ ನಂತರ ಇಂದು ತೆರೆದಿದೆ. ಧಾರ್ಮಿಕ ವಿಧಿಗಳು ಮತ್ತು ಪಠಣಗಳೊಂದಿಗೆ ಭಕ್ತರಿಗೆ ಬದರಿನಾಥ ಬಾಗಿಲನ್ನು ತೆರೆಯಲಾಗಿದೆ. ಈ ವೇಳೆ ಬದರಿನಾಥ ಧಾಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದು ದೇವಾಲಯವನ್ನು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಲಾಗಿದೆ.
ಕೇದರನಾಥ ಯಾತ್ರಾರ್ಥಿಗಳ ದೈನಂದಿನ ಮಿತಿ, ಪಾಲಿಸಬೇಕಾದ ಕೋವಿಡ್ ನಿಯಮಗಳು ಇಲ್ಲಿವೆ
ಅಲಕನಂದಾ ನದಿಯ ದಡದಲ್ಲಿ ಚಮೋಲಿ ಜಿಲ್ಲೆಯ ಗರ್ವಾಲ್ ಬೆಟ್ಟದ ಹಳಿಗಳಲ್ಲಿ ನೆಲೆಗೊಂಡಿರುವ ಬದರಿನಾಥ ದೇವಾಲಯವು ವಿಷ್ಣುವಿಗೆ ಸಮರ್ಪಿತವಾಗಿದೆ. ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥಗಳನ್ನು ಒಳಗೊಂಡಿರುವ 'ಚಾರ್ ಧಾಮ್' ಎಂದು ಕರೆಯಲ್ಪಡುವ ನಾಲ್ಕು ಪುರಾತನ ಯಾತ್ರಾ ಸ್ಥಳಗಳಲ್ಲಿ ಈ ದೇವಾಲಯವು ಒಂದಾಗಿದೆ. ಇದು ಉತ್ತರಾಖಂಡದ ಬದರಿನಾಥ ಪಟ್ಟಣದಲ್ಲಿದೆ. ಇದು ಪ್ರತಿ ವರ್ಷ ಆರು ತಿಂಗಳವರೆಗೆ ತೆರೆದಿರುತ್ತದೆ (ಏಪ್ರಿಲ್ ಅಂತ್ಯ ಮತ್ತು ನವೆಂಬರ್ ಆರಂಭದ ನಡುವೆ).
#WATCH | Uttarakhand: The doors of Badrinath Dham opened for devotees with rituals and chanting and the tunes of army band with a large number of devotees present in Badrinath Dham. pic.twitter.com/LiCTexcbJu
— ANI UP/Uttarakhand (@ANINewsUP) May 8, 2022
ಶುಕ್ರವಾರ ಬೆಳಗ್ಗೆ ಕೇದಾರನಾಥ ದೇವಾಲಯವು ಯಾತ್ರಾರ್ಥಿಗಳಿಗಾಗಿ ತನ್ನ ಬಾಗಿಲು ತೆರೆಯಿತು. ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ತೆರೆಯುವುದರೊಂದಿಗೆ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಮೇ 3 ರಂದು ವಾರ್ಷಿಕ ಚಾರ್ಧಾಮ್ ಯಾತ್ರೆ ಪ್ರಾರಂಭವಾಯಿತು. ಬದರಿನಾಥ ದೇವಾಲಯವನ್ನು ಇಂದು (ಮೇ 8) ತೆರೆಯಲಾಗಿದೆ.
#WATCH Devotees sing and dance as the portals of Shri Badrinath Dham, Uttarakhand open today pic.twitter.com/E3eBLsCYUE
— ANI UP/Uttarakhand (@ANINewsUP) May 8, 2022
ಈ ತಿಂಗಳ ಆರಂಭದಲ್ಲಿ ರಾಜ್ಯ ಸರ್ಕಾರವು ಚಾರ್ ಧಾಮ್ಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಿದೆ. ಪ್ರತಿದಿನ ಒಟ್ಟು 15,000 ಯಾತ್ರಾರ್ಥಿಗಳಿಗೆ ಬದರಿನಾಥ, 12,000 ಕೇದಾರನಾಥ, 7,000 ಗಂಗೋತ್ರಿ ಮತ್ತು 4,000 ಯಮುನೋತ್ರಿಯಲ್ಲಿ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. 45 ದಿನಗಳ ಕಾಲ ಈ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಯಾತ್ರಾರ್ಥಿಗಳು COVID-19 ಪರೀಕ್ಷಾ ವರದಿ ಅಥವಾ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಲ್ಲ. ಚಾರ್ ಧಾಮ್ಗಳು ದೇಶ ಮತ್ತು ವಿದೇಶಗಳಿಂದ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತರನ್ನು ಸೆಳೆಯುತ್ತವೆ.