ಬಾಹುಬಲಿ ನಿರ್ದೇಶಕ ರಾಜಮೌಳಿ ಹಾಗೂ ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು
ಹೈದರಾಬಾದ್, ಜುಲೈ 30: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ. ಈ ವಿಚಾರವನ್ನು ಖುದ್ದು ಬಾಹುಬಲಿ ನಿರ್ದೇಶಕ ರಾಜಮೌಳಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜಮೌಳಿ, ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಕೆಲ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ನಂತರ ದಿನಗಳಲ್ಲಿ ಔಷಧಿಯಿಂದ ಜ್ವರವು ಕಡಿಮೆಯಾದರೂ ಕೋವಿಡ್-19 ಟೆಸ್ಟ್ ಮಾಡಿಸಿದ್ದೆವು.
ಅಮಿತಾಬ್ ಬಚ್ಚನ್ಗೆ ಕೊರೊನಾ ನೆಗೆಟಿವ್ ವರದಿ ನಿಜನಾ?
ಇನ್ನು
ನಮ್ಮಲ್ಲಿ
ಯಾವುದೇ
ಕೊರೊನಾ
ಲಕ್ಷಣಗಳು
ಕಂಡು
ಬರಲಿಲ್ಲ
ಎಂದಿರುವ
ರಾಜಮೌಳಿ,
ಅದಾಗ್ಯೂ
ಸರ್ಕಾರದ
ಸೂಚನೆಯಂತೆ
ಎಲ್ಲಾ
ಸುರಕ್ಷತಾ
ಮುನ್ನೆಚ್ಚರಿಕೆಗಳನ್ನು
ಅನುಸರಿಸುತ್ತಿದ್ದೇವೆ
ಎಂದಿದ್ದಾರೆ.
ಇದೀಗ
ಅದರ
ಫಲಿತಾಂಶ
ಬಂದಿದ್ದು,
ಕೊರೊನಾ
ಸೋಂಕು
ತಗುಲಿರುವುದು
ದೃಢ
ಆಗಿದೆ.
ಹೀಗಾಗಿ
ನಾವೆಲ್ಲರೂ
ವೈದ್ಯರ
ಸಲಹೆಯಂತೆ
ಹೋಮ್
ಕ್ವಾರಂಟೈನ್ನಲ್ಲಿರುವುದಾಗಿ
ತಿಳಿಸಿದ್ದಾರೆ.
ಈಗ ಹೈದಾರಾಬಾದ್ನಲ್ಲಿ ನೆಲೆಸಿರುವ ಎಸ್ಎಸ್ ರಾಜಮೌಳಿ, ಮತ್ತೆ ಬಿಗ್ ಬಜೆಟ್ ಚಿತ್ರ ಆರ್ಆರ್ಆರ್ ಕೆಲಸವನ್ನು ಪುನರಾರಂಭಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇದೇ ವೇಳೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿದ್ದು, ಹೀಗಾಗಿ ಸಿನಿಮಾ ಕೆಲಸಗಳು ಮತ್ತಷ್ಟು ಮುಂದಕ್ಕೆ ಹೋಗಲಿದೆ.
My family members and I developed a slight fever few days ago. It subsided by itself but we got tested nevertheless. The result has shown a mild COVID positive today. We have home quarantined as prescribed by the doctors.
— rajamouli ss (@ssrajamouli) July 29, 2020
ದೇಹದಲ್ಲಿ ಪ್ರತಿಕಾಯಗಳು ಅಭಿವೃದ್ಧಿಹೊಂದಲು ಕಾಯುತ್ತಿದ್ದೇನೆ. ಶೀಘ್ರವೇ ಪ್ಲಾಸ್ಮಾ ದಾನ ಮಾಡಲಿದ್ದೇನೆ ಎಂದು ರಾಜಮೌಳಿ ತಿಳಿಸಿದ್ದಾರೆ.
ಈ ಸಿನಿಮಾದಲ್ಲಿ ಟಾಲಿವುಡ್ ಸೂಪರ್ಸ್ಟಾರ್ಗಳಾದ ಜೂ.ಎನ್ಟಿಆರ್ ಮತ್ತು ರಾಮ್ ಚರಣ್ ತೇಜ ಇದೇ ಮೊದಲ ಬಾರಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
450 ಕೋಟಿ ರೂ.ಗಳ ಬಜೆಟ್ ನಿರ್ಮಾಣವಾಗುತ್ತಿರುವ ಈ ಚಿತ್ರವು ಭಾರತದ ಅತ್ಯಂತ ದುಬಾರಿಯ ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಎಲ್ಲವೂ ಅಂದು ಕೊಂಡಂತೆ ಮುಂದುವರೆದರೆ 2021 ರ ಜನವರಿ 8 ರಂದು ಆರ್ಆರ್ಆರ್ ಬಿಡುಗಡೆಯಾಗಲಿದೆ. ಆದರೆ 2021ಕ್ಕೆ ಬಿಡುಗಡೆಯಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.