ಅಯೋಧ್ಯಾ ಭೂ ವಿವಾದ ವಿಚಾರಣೆ ಆಗಸ್ಟ್ 02ಕ್ಕೆ ಮುಂದೂಡಿಕೆ
ನವದೆಹಲಿ, ಜುಲೈ 18: ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿರುವ ಸಂಧಾನಕಾರರು ತಮ್ಮ ವರದಿಯನ್ನು ಇಂದು ಕೋರ್ಟಿಗೆ ಸಲ್ಲಿಸಿದ್ದಾರೆ.
ಸಂಧಾನ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆ ಸಮಿತಿ ಹೆಚ್ಚಿನ ಪ್ರಗತಿ ಸಾಧಿಸಿಲ್ಲ ಎಂದು ಸುಪ್ರೀಂಕೋರ್ಟಿಗೆ ಅರ್ಜಿದಾರರು ತಿಳಿಸಿದ ಬಳಿಕ, ಸಂಧಾನಕಾರರ ಪ್ರಗತಿ ವರದಿ ಬಂದ ನಂತರ ಮುಂದಿನ ವಿಚಾರಣೆ ನಡೆಸುವಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ನೇತೃತ್ವದ ನ್ಯಾಯಪೀಠವು ಈ ಮುಂಚೆ ತಿಳಿಸಿತ್ತು.
25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್
ಅದರಂತೆ, ಇಂದು ವರದಿ ಸ್ವೀಕರಿಸಿದ ನ್ಯಾಯಪೀಠವು, ಮುಂದಿನ ವಿಚಾರಣೆಯನ್ನು ಆಗಸ್ಟ್ 02ಕ್ಕೆ ಮುಂದೂಡಿದೆ. ಆದರೆ, ಜುಲೈ 31ರ ತನಕ ಸಂಧಾನಕಾರರು ತಮ್ಮ ಸಂಧಾನಸಭೆಗಳನ್ನು ನಡೆಸಬಹುದು ಎಂದು ಸೂಚಿಸಲಾಗಿದೆ.
ಸುಪ್ರೀಂ ನೇಮಿಸಿರುವ ಮೂವರು ಸಂಧಾನಕಾರರು ಯಾರು?
ಜಸ್ಟೀಸ್ ಬೊಬ್ಡೆ ಅವರಲ್ಲದೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು, ಸಂಧಾನ ಪ್ರಗತಿ ವರದಿಯನ್ನು ಪರಿಶೀಲಿಸಿ, ವಿಚಾರಣೆಯನ್ನು ಮುಂದೂಡಿದ್ದಾರೆ.
ಆಗಸ್ಟ್ 15ರೊಳಗೆ ಪರಿಹಾರ ಕಂಡುಕೊಳ್ಳುವಂತೆ ಸೂಚನೆ
ಈ
ಪ್ರಕರಣವನ್ನು
ಮಾತುಕತೆಯ
ಮೂಲಕ
ಆಗಸ್ಟ್
15ರೊಳಗೆ
ಪರಿಹಾರ
ಕಂಡುಕೊಳ್ಳುವಂತೆ
ಸುಪ್ರೀಂಕೋರ್ಟ್
ನ್ಯಾಯಪೀಠವು
ಮಧ್ಯಸ್ಥಿಕೆ
ಸಂಧಾನಕಾರರಿಗೆ
ಸೂಚಿಸಲಾಗಿತ್ತು.
ಆದರೆ,
ಸಂಧಾನ
ಪ್ರಕ್ರಿಯೆ
ವಿಳಂಬವಾಗಿದ್ದು,
ಸರಿಯಾದ
ಮಾರ್ಗದಲ್ಲಿ
ಸಾಗುತ್ತಿಲ್ಲ,
ಕೋರ್ಟ್
ಮೂಲಕವೇ
ನ್ಯಾಯ
ಪಡೆಯುವುದೊಂದೇ
ಪರಿಹಾರ
ಎಂದು
ಅರ್ಜಿದಾರ
ಗೋಪಾಲ್
ಸಿಂಗ್
ವಿಶಾರದ್
ಹೇಳಿದ್ದರು.
ಈ
ಬಗ್ಗೆ
ಪ್ರತಿಕ್ರಿಯಿಸಿರುವ
ಹಿರಿಯ
ವಕೀಲ
ರಾಜೀವ್
ಧವನ್,
'ಮಧ್ಯಸ್ಥಿಕೆ
ವಹಿಸಿಕೊಂಡು
ಸಂಧಾನ
ನಡೆಸುವುದು
ಗಂಭೀರವಾದ
ವಿಷಯ,
ಸಂಧಾನ
ಪ್ರಕ್ರಿಯೆ
ಬಗ್ಗೆ
ಬಂದಿರುವ
ಅರ್ಜಿ
ಕಳವಳಕಾರಿಯಾಗಿದ್ದು,
ಸಂಧಾನವನ್ನು
ರದ್ದುಪಡಿಸುವಂಥ
ಹೇಳಿಕೆಗಳನ್ನು
ಪಕ್ಷಗಳು
ನೀಡುತ್ತಿರುವುದು
ಅಸಮಾಧಾನ
ತಂದಿದೆ'
ಎಂದರು.
ಸಂಧಾನ ಪ್ರಗತಿ ವರದಿಯನ್ನು ಪರಿಶೀಲನೆ
ಜಸ್ಟೀಸ್
ಬೊಬ್ಡೆ
ಅವರಲ್ಲದೆ,
ಮುಖ್ಯ
ನ್ಯಾಯಮೂರ್ತಿ
ರಂಜನ್
ಗೊಗೊಯ್,
ಜಸ್ಟೀಸ್
ಚಂದ್ರಚೂಡ್,
ಜಸ್ಟೀಸ್
ಭೂಷಣ್,
ಜಸ್ಟೀಸ್
ಅಬ್ದುಲ್
ನಜೀರ್
ಅವರನ್ನೊಳಗೊಂಡ
ನ್ಯಾಯಪೀಠವು,
ಸಂಧಾನ
ಪ್ರಗತಿ
ವರದಿಯನ್ನು
ಪರಿಶೀಲಿಸಿ,
ವಿಚಾರಣೆಯನ್ನು
ಮುಂದೂಡಿದ್ದಾರೆ.
ನ್ಯಾ.ಇಬ್ರಾಹಿಂ
ಖಾಲಿಫುಲ್ಲಾ,
ರವಿಶಂಕರ್
ಗುರೂಜಿ,
ಶ್ರೀರಾಮ್
ಪಂಚು
ಅವರನ್ನೊಳಗೊಂಡ
ತ್ರಿಸದಸ್ಯ
ಸಮಿತಿಯನ್ನು
ಸುಪ್ರೀಂ
ಕೋರ್ಟ್
ನೇಮಿಸಿದ್ದು,
ಸಂಧಾನ
ಪ್ರಕ್ರಿಯೆಯನ್ನು
4
ವಾರದೊಳಗೆ
ಆರಂಭಿಸಿ,
8
ತಿಂಗಳೊಳಗೆ
ಮುಗಿಸಿ
ಎಂದು
ಸುಪ್ರೀಂಕೋರ್ಟ್
ಸೂಚಿಸಿತ್ತು.
ಆದರೆ,
ಹೆಚ್ಚಿನ
ಕಾಲಾವಕಾಶ
ಕೋರಿದ್ದರಿಂದ
ಆಗಸ್ಟ್
15ರ
ತನಕ
ಅವಕಾಶ
ನೀಡಲಾಗಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ. 2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದೆ.
ಮೂವರು ಸಂಧಾನಕಾರರು
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತಂತೆ ಜಸ್ಟೀಸ್ ಬೊಬ್ಡೆ ಅವರಲ್ಲದೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು ಮೇ 09, 2019ರಂದು ತೀರ್ಪು ನೀಡಿ, ನ್ಯಾ.ಇಬ್ರಾಹಿಂ ಖಾಲಿಫುಲ್ಲಾ, ಶ್ರೀರವಿಶಂಕರ್ ಗುರೂಜಿ, ಶ್ರೀರಾಮ್ ಪಂಚು ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದೆ
ನ್ಯಾ.ಇಬ್ರಾಹಿಂ ಖಾಲಿಫುಲ್ಲಾ, ಶ್ರೀ ರವಿಶಂಕರ್ ಗುರೂಜಿ, ಶ್ರೀರಾಮ್ ಪಂಚು ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದೆ.