ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸನಾತನ ಸಂಸ್ಥೆ ಸದಸ್ಯನ ಮನೆ ಮೇಲೆ ದಾಳಿ, 8 ಬಾಂಬ್ ವಶ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 10: ಸನಾತನ ಸಂಸ್ಥೆಗೆ ಸೇರಿದ ಸದಸ್ಯರೊಬ್ಬನನ್ನು ಬಂಧಿಸಿ, ಆತನ ಮನೆ ಮೇಲೆ ದಾಳಿ ನಡೆಸಿದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವು 8 ಕಚ್ಚಾ ಬಾಂಬ್ ಗಳನ್ನು ವಶಪಡಿಸಿಕೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.

ಆದರೆ, ಆತ ಹಿಂದು ಕಾರ್ಯಕರ್ತನಲ್ಲ, ಸನಾತನ ಸಂಸ್ಥೆಗೆ ಸೇರಿದ ಸದಸ್ಯನಲ್ಲ ಎಂದು ಸನಾತನ ಸಂಸ್ಥೆ ಪರ ವಕೀಲ ಸಂಜೀವ್ ಪುನೇಲಿಕರ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ 3 ಶಂಕಿತ ಭಯೋತ್ಪಾದಕರ ಸೆರೆ, ಸ್ಫೋಟಕ ವಶಕ್ಕೆಮಹಾರಾಷ್ಟ್ರದಲ್ಲಿ 3 ಶಂಕಿತ ಭಯೋತ್ಪಾದಕರ ಸೆರೆ, ಸ್ಫೋಟಕ ವಶಕ್ಕೆ

ಪಲ್ ಘರ್ ಜಿಲ್ಲೆಯ ನಲ್ಲಾಸೊಪಾರದ ನಿವಾಸಿಯಾಗಿರುವ ವೈಭವ್ ರೌತ್ ಎಂಬಾತ 'ಹಿಂದೂ ಗೋವಂಶ ರಕ್ಷ ಸಮಿತಿ' ಯ ಸದಸ್ಯನಾಗಿದ್ದಾನೆ. ಆತನ ಮನೆ, ಅಂಗಡಿ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತಗಳು, ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ATS seizes explosives from right-wing members residence in Maharashtra

ಈ ದಾಳಿಯೊಂದು ಹಿಂದೂ ಸಂಘಟನೆಗಳ ಮೇಲೆ ದೌರ್ಜನ್ಯವಾಗಿದೆ. ಸುಳ್ಳು ಕೇಸುಗಳನ್ನು ಹಾಕಲಾಗುತ್ತದೆ. ಮಾಲೆಂಗಾವ್ ಪ್ರಕರಣದಲ್ಲಿ ಇದು ಸಾಬೀತಾಗಿದೆ. ಸನಾತನ ಸಂಸ್ಥೆಯ ಅನೇಕ ಮುಗ್ದರನ್ನು ಬಂಧಿಸಲಾಗಿದೆ ಎಂದು ಸಂಸ್ಥೆಯ ಘನಾವತ್ ಪ್ರತಿಕ್ರಿಯಿಸಿದ್ದಾರೆ.

English summary
The Maharashtra Anti-Terrorism Squad (ATS) arrested a member of a right-wing Hindu outfit and seized huge quantity of explosives from his residence at Nallasopara in Palghar district of the state, police said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X