ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ ಮತ್ತು ಕಂದಹಾರ್ ವಿಮಾನ ಅಪಹರಣದ ನೆನೆಪು

By Gururaj
|
Google Oneindia Kannada News

ನವದೆಹಲಿ, ಆಗಸ್ಟ್ 16 : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನರಾಗಿದ್ದಾರೆ. ವಾಜಪೇಯಿ ಅವರ ಬಗ್ಗೆ ಮಾತನಾಡುವಾಗ ಕಂದಹಾರ್ ವಿಮಾನ ಹೈಜಾಕ್ ಘಟನೆಯನ್ನು ನೆನಪಿಸಿಕೊಳ್ಳಬೇಕು.

1999ರ ಡಿಸೆಂಬರ್ 24ರಂದು ನಡೆದ ಘಟನೆ ಭಾರತದ ಇತಿಹಾಸದ ಪುಟವನ್ನು ಸೇರಿದೆ. ವಿಮಾನ ಅಪಹರಣದ ಸಮಯದಲ್ಲಿ ವಾಜಪೇಯಿ ಅವರು ತೋರಿದ ದಿಟ್ಟತನ, ಗಟ್ಟಿ ನಿರ್ಧಾರವನ್ನು ಇಂದಿಗೂ ಮರೆಯಲಾಗದು.

ವಾಜಪೇಯಿ ಅಂತಿಮ ದರ್ಶನ, ಅಂತ್ಯಕ್ರಿಯೆಯ ವಿವರಗಳುವಾಜಪೇಯಿ ಅಂತಿಮ ದರ್ಶನ, ಅಂತ್ಯಕ್ರಿಯೆಯ ವಿವರಗಳು

ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಆಗಮಿಸಬೇಕಿದ್ದ 176 ಪ್ರಯಾಣಿಕರಿದ್ದ ವಿಮಾನವನ್ನು ತಾಲಿಬಾನ್ ಉಗ್ರರು ಅಪಹರಣ ಮಾಡಿದ್ದರು. ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ತಲುಪಬೇಕಿದ್ದ ವಿಮಾನವನ್ನು ಅಫ್ಘಾನಿಸ್ತಾನದ ಕಂದಹಾರ್‌ಗೆ ತೆಗೆದುಕೊಂಡು ಹೋದರು.

Atal Bihari Vajpayee death

ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಉಗ್ರರ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದರು. ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಇದು ಬಹುದೊಡ್ಡ ಸವಾಲು ಆಗಿತ್ತು.

ಅಟಲ್ ಬಿಹಾರಿ ವಾಜಪೇಯಿ ಬದುಕಿನ ಹೆಜ್ಜೆಗುರುತುಗಳುಅಟಲ್ ಬಿಹಾರಿ ವಾಜಪೇಯಿ ಬದುಕಿನ ಹೆಜ್ಜೆಗುರುತುಗಳು

ತಾಲಿಬಾನ್ ಉಗ್ರರು ಇಟ್ಟಿದ್ದ ಬೇಡಿಕೆಗಳಲ್ಲಿ ಉಗ್ರ ಮೌಲಾನಾ ಮಸೂದ್ ಅಝರ್ ಬಿಡುಗಡೆ ಪ್ರಮುಖವಾಗಿತ್ತು. ವಾಜಪೇಯಿ ಸರ್ಕಾರಕ್ಕೆ ಆಲೋಚನೆ ಮಾಡಲು ಸಮಯಾವಕಾಶ ಇರಲಿಲ್ಲ. ದೇಶವೇ ಪ್ರಧಾನಿಗಳ ನಿರ್ಧಾರಕ್ಕಾಗಿ ಕಾದು ನೋಡುತ್ತಿತ್ತು.

ಪ್ರಧಾನಿ ವಾಜಪೇಯಿ ಅವರು ಉಗ್ರರ ಜೊತೆ ಮಾತುಕತೆಗೆ ಮುಂದಾದರು. ಸಂಪುಟದಲ್ಲಿ ವಿದೇಶಾಂಗ ವ್ಯವಹಾರ ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರನ್ನು ಮಾತುಕತೆ ಕಳುಹಿಸಿದರು. ಉಗ್ರರ ಬೇಡಿಕೆಯಂತೆ ನಡೆದುಕೊಂಡ ಸರ್ಕಾರ 176 ಪ್ರಯಾಣಿಕರು ಪಾಣ ಉಳಿಸಿತ್ತು.

ಈ ಘಟನೆ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಆದರೆ, ಪ್ರಯಾಣಿಕರ ಸುರಕ್ಷತೆ ದೇಶದ ಪ್ರಧಾನ ಆದ್ಯತೆ ಆಗಿತ್ತು. ಇಂತಹ ಕಠಿಣ ಸಂದರ್ಭದಲ್ಲಿ ಅಟಜೀ ಅವರು ತೆಗೆದುಕೊಂಡ ನಿರ್ಧಾರ ಹಲವರ ಮುಚ್ಚುಗೆಗೂ ಕಾರಣವಾಯಿತು.

English summary
Former Prime Minister Atal Bihari Vajpayee (93) breathed his last on Thursday, 16 August, 2018. We have to remember Kandahar flight Hijacking incident during Atal Bihari Vajpayee term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X