ಅಸ್ಸಾಂ ಚಹಾ ಕಾರ್ಮಿಕರ ಕಲ್ಯಾಣಕ್ಕೆ ಸಾವಿರಾರು ಕೋಟಿ ರು
ಗುವಾಹತಿ, ಫೆಬ್ರವರಿ 5: ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮೋದಿ ಅವರು ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಮಂಡಿಸಿದ ಪ್ರಸ್ತಾವನೆಯಂತೆ ವಿಶೇಷ ಯೋಜನೆ ಮೂಲಕ ಸಾವಿರಾರು ಕೋಟಿ ರು ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕೆ ವಿನಿಯೋಗವಾಗಲಿದೆ.
ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಸಮಾಜದ ದುರ್ಬಲ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ರಕ್ಷಣೆಗೆ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಕೇಂದ್ರ ಬಜೆಟ್ 2021-22 ಮಂಡನೆಯಲ್ಲಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರು ವಾರಗಳ ಸಂಪೂರ್ಣ ಲಾಕ್ಡೌನ್ ಘೋಷಿಸಿದ 48 ಗಂಟೆಗಳಲ್ಲಿ ಪ್ರಧಾನ ಮಂತ್ರಿಯವರು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಘೋಷಿಸಿದ್ದಾರೆ ಹಾಗೂ ರೂ .2.76 ಲಕ್ಷ ಕೋಟಿ ಮೌಲ್ಯದ, ಪಿಎಂಜಿಕೆವೈ ಯೋಜನೆಯು 800 ದಶಲಕ್ಷ ಜನರಿಗೆ ಉಚಿತ ಆಹಾರ ಧಾನ್ಯ, 80 ದಶಲಕ್ಷ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ, ಮತ್ತು 400 ದಶಲಕ್ಷ ರೈತರು, ಮಹಿಳೆಯರು, ವೃದ್ಧರು, ಬಡವರು ಮತ್ತು ನಿರ್ಗತಿಕರಿಗೆ ನೇರವಾಗಿ ಹಣವನ್ನು ತಲುಪಿಸಲಾಯಿತು ಎಂದು ತಿಳಿಸಿದ್ದಾರೆ
ಅಭಿವೃದ್ಧಿ ಮಂತ್ರ ಜಪಿಸುತ್ತಾ ಅಸ್ಸಾಂನತ್ತ ಮೋದಿ ಪ್ರಯಾಣ
ದುರ್ಬಲ ವರ್ಗದವರಿಗೆ ಕೈಗೊಂಡ ಕ್ರಮಗಳ ಅನುಸಾರವಾಗಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತ್ತು ಮಹಿಳೆಯರಿಗಾಗಿ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ ಸಾಲದ ಹರಿವನ್ನು ಮತ್ತಷ್ಟು ಸುಗಮಗೊಳಿಸಲು, ನಿರ್ಧಿಷ್ಠ ಹಣದ ಅಗತ್ಯವನ್ನು 25% ರಿಂದ 15% ಕ್ಕೆ ಇಳಿಸಲು ಉದ್ದೇಶಿಸಲಾಗಿದೆ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳ ಸಾಲಗಳನ್ನು ಸಹ ಸೇರಿಸಲಾಗುವುದು ಎಂದು ಹಣಕಾಸು ಸಚಿವೆ ಹೇಳಿದರು.
ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಚಹಾ ಕಾರ್ಮಿಕರ ವಿಶೇಷವಾಗಿ ಮಹಿಳೆಯರು ಮತ್ತು ಅವರ ಮಕ್ಕಳ ಕಲ್ಯಾಣಕ್ಕಾಗಿ 1,000 ಕೋಟಿ ರೂ. ಗಳನ್ನು ಒದಗಿಸಲಾಗುವುದು, ಇದಕ್ಕಾಗಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ನಿರ್ಮಲಾ ಪ್ರಸ್ತಾಪಿಸಿದರು.
ಏಕಲವ್ಯ
ಮಾದರಿ
ವಸತಿ
ಶಾಲೆ
ನಿರ್ಮಾಣ
ಬುಡಕಟ್ಟು
ಪ್ರದೇಶಗಳಲ್ಲಿ
750
ಏಕಲವ್ಯ
ಮಾದರಿ
ವಸತಿ
ಶಾಲೆಗಳನ್ನು
ಸ್ಥಾಪಿಸುವ
ಗುರಿಯನ್ನು
ನಿಗದಿಪಡಿಸಲಾಗಿದೆ
ಎಂದು
ನಿರ್ಮಲಾ
ಸೀತಾರಾಮನ್
ತಿಳಿಸಿದರು.
ಅಂಥ
ಪ್ರತಿಯೊಂದು
ಶಾಲೆಯ
ಘಟಕದ
ವೆಚ್ಚವನ್ನು
ರೂ
.20
ಕೋಟಿಯಿಂದ
ರೂ
.38
ಕೋಟಿಗೆ
ಮತ್ತು
ಗುಡ್ಡಗಾಡು
ಪ್ರದೇಶಗಳಿಗೆ
ರೂ.48
ಕೋಟಿಯಷ್ಟು
ಹೆಚ್ಚಿಸಲು
ಪ್ರಸ್ತಾಪಿಸಿದರು.
ಇದರಿಂದಾಗಿ
ಬುಡಕಟ್ಟು
ವಿದ್ಯಾರ್ಥಿಗಳಿಗೆ
ದೃಢವಾದ
ಮೂಲಸೌಕರ್ಯ
ಸೌಲಭ್ಯಗಳನ್ನು
ರಚಿಸಲು
ಇದು
ಅನುಕೂಲವಾಗುತ್ತದೆ.
ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆಯನ್ನು ಪರಿಷ್ಕರಿಸಲಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ನೆರವು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಒಟ್ಟು 35,219 ಕೋಟಿ ರೂಪಾಯಿಗಳನ್ನು 2025-2026ರವರೆಗೆ 6 ವರ್ಷಗಳ ಕಾಲ ನೀಡಲಾಗುವುದು, ಇದರಿಂದಾಗಿ 4 ಕೋಟಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.(ವಿತ್ತ ಸಚಿವಾಲಯ)