ಜೇಟ್ಲಿ ಬಗ್ಗೆ ಅವಹೇಳನ ಪದ ಬಳಕೆಗೆ ಕೇಜ್ರಿಯದ್ದೇ ಕುಮ್ಮಕ್ಕು: ಜೇಠ್ಮಲಾನಿ
ಜೇಟ್ಲಿ ವಿರುದ್ಧ ಅವಹೇಳನಕಾರಿ ಪದ ಬಳಕೆಗೆ ಕೇಜ್ರಿವಾಲ್ ಅವರದ್ದೇ ಕುಮ್ಮಕ್ಕು. ಇತ್ತೀಚೆಗೆ, ವಿಚಾರಣೆ ವೇಳೆ ಜೇಟ್ಲಿ ಅವರನ್ನು ದಗಾಕೋರ ಎಂದಿದ್ದ ಜೇಠ್ಮಲಾನಿ. ಆನಂತರ, ಸ್ಪಷ್ಟನೆ ನೀಡಿ ಕೇಜ್ರಿವಾಲ್ ಕಡೆ ಬೆರಳು ಮಾಡಿದ ಹಿರಿಯ ವಕೀಲ. ಆದರೆ, ಜೇಠ
ನವದೆಹಲಿ, ಜುಲೈ 29: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ವಿಚಾರಣೆ ನಡೆಸುವ ವೇಳೆ ಅವರ ವಿರುದ್ಧ ಅವಹೇಳನಕಾರಿ ಪದಗಗಳನ್ನು ಬಳಸಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ತಮಗೆ ಸೂಚಿಸಿದ್ದರೆಂದು ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಪುನರುಚ್ಛರಿಸಿದ್ದಾರೆ.
2 ಕೋಟಿ ವಕೀಲಿಕೆ ಶುಲ್ಕಕ್ಕೆ ಕೇಜ್ರಿವಾಲ್ ಗೆ ಜೇಠ್ಮಲಾನಿ ಪತ್ರ
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜೇಟ್ಲಿ ಅವರ ವಿಚಾರಣೆ ನಡೆಸುವ ವೇಳೆ ಅವರನ್ನು ಹೀನಾಯವಾಗಿ ಬೈಯ್ಯಬೇಕು ಎಂದು ಕೇಜ್ರಿವಾಲ್ ಅವರೇ ಸೂಚಿಸಿದ್ದರು. ಅವರ ಸೂಚನೆಯ ಮೇರೆಗೆ ನಾನು ಹಾಗೆ ನಡೆದುಕೊಂಡೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ'' ಎಂದಿದ್ದಾರೆ.
ಕೇಜ್ರಿವಾಲ್ ವಿರುದ್ಧ ಅರುಣ್ ಜೇಟ್ಲಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದ ಹಿನ್ನೆಲೆಯಲ್ಲಿ, ಕೇಜ್ರಿವಾಲ್ ವಿರುದ್ಧ ವಕೀಲರಾಗಿದ್ದ ರಾಮ್ ಜೇಠ್ಮಲಾನಿ ಇತ್ತೀಚೆಗೆ ಅರುಣ್ ಜೇಟ್ಲಿ ಅವರನ್ನು ವಿಚಾರಣೆ ಮಾಡುವಾಗ ದಗಾಕೋರ ಎಂದು ಆರೋಪಿಸಿದ್ದರು. ಹಾಗಾಗಿ, ಜೇಟ್ಲಿ ಅವರು ಜೇಠ್ಮಲಾನಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
'ಕೇಜ್ರಿವಾಲ್ ಬಡ ಕಕ್ಷೀದಾರ ಅಂದುಕೊಂಡು ಪುಕ್ಕಟೆ ವಾದ ಮಾಡ್ತೀನಿ'
ಇದರಿಂದ ಎಚ್ಚೆತ್ತ, ರಾಮ್ ಜೇಠ್ಮಲಾನಿ ಅವರು ಅರವಿಂದ್ ಕೇಜ್ರಿವಾಲ್ ಅವರೇ ತಮಗೆ ಅಂಥ ಪದಗಳನ್ನು ಬಳಸಲು ಸೂಚಿಸಿದ್ದರೆಂದು ತಿಳಿಸಿದ್ದರು. ಆದರೆ, ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ ಕೇಜ್ರಿವಾಲ್, ತಾವು ಅಂತ ಯಾವುದೇ ಸೂಚನೆ ನೀಡಿಲ್ಲವೆಂದು ತಿಳಿಸಿದ್ದರು.
ಇದರಿಂದ ರೊಚ್ಚಿಗೆದ್ದ ಜೇಠ್ಮಲಾನಿ, ಕೇಜ್ರಿವಾಲ್ ಅವರ ವಕೀಲಿಕೆಯಿಂದ ಹಿಂದೆ ಸರಿದಿದ್ದಾರಲ್ಲದೆ, ತಮಗೆ ಕೇಜ್ರಿವಾಲ್ ಅವರಿಂದ ಸಲ್ಲಬೇಕಿರುವ 2 ಕೋಟಿ ರು. ವಕೀಲಿಗೆ ಶುಲ್ಕವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.