ಭ್ರಷ್ಟಾಚಾರ: ಸೇನಾಧಿಕಾರಿಗಳು ಸೇರಿ 23 ಮಂದಿ ವಿರುದ್ಧ ಸಿಬಿಐ ತನಿಖೆ
ನವದೆಹಲಿ, ಮಾರ್ಚ್ 15: ಸೇನಾ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಸೇನಾಧಿಕಾರಿಗಳು ಸೇರಿ 23 ಮಂದಿ ಸಿಬಿಐ ತನಿಖೆ ಎದುರಿಸಲಿದ್ದಾರೆ ಎನ್ನುವ ಕುರಿತು ಮಾಹಿತಿ ಲಭ್ಯವಾಗಿದೆ.
ಪಂಜಾಬ್ನ ಕಪುರ್ತಲ ಜಿಲ್ಲೆಯ ಸೇವಾ ಆಯ್ಕೆ ಕೇಂದ್ರವೊಂದರಲ್ಲಿ ನಡೆಯುತ್ತಿರುವ ಸೇನಾ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆರೋಪ ಕೇಳಿಬಂದಿತ್ತು.
ತನ್ನ ಮಾಜಿ ಮುಖ್ಯಸ್ಥ ರಾಕೇಶ್ ಆಸ್ತಾನಾಗೆ ಎಲ್ಲ ಆರೋಪಗಳಿಂದಲೂ ಕ್ಲೀನ್ ಚಿಟ್ ನೀಡಿದ ಸಿಬಿಐ
ಕಿರಿಯ ಅಧಿಕಾರಿಯೊಬ್ಬರ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಇಂಡಿಯನ್ ಆರ್ಮಿ ಹೆಡ್ಕ್ವಾಟರ್ಸ್ಗೆ ಬಂದ ದೂರಿನ ಮೇರೆಗೆ ತನಿಖೆ ನಡೆಸಲಾಗಿತ್ತು. ಸೇನೆಯ ಅಧಿಕಾರಿಗಳೊಂದಿಗೆ ಹಲವು ನಾಗರಿಕರು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಬಂದಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಲಾಗಿದೆ.
ಇದೀಗ ಸೇನೆಯ 23 ಅಧಿಕಾರಿಗಳು ಸಿಬಿಐ ತನಿಖೆ ಎದುರಿಸಲಿದ್ದಾರೆ, ಸೇನಾ ಗುಪ್ತಚರ ಸಂಸ್ಥೆಯ ಪೂರ್ವಾಭಾವಿ ಕಾರ್ಯಾಚರಣೆಯ ಆಧಾರದ ಮೇಲೆ, ಆರ್ಮಿ ಸರ್ವೀಸಸ್ ಸೆಲೆಕ್ಷನ್ ಸೆಂಟರ್ ಒಂದರಲ್ಲಿ ಆಯ್ಕೆಯ ಕಾರ್ಯವಿಧಾನಗಳಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ದೆಹಲಿ, ಲಕ್ನೋ, ಜೈಪುರ, ಗುವಾಹಟಿ, ಕಪುರ್ತಲಾ, ಭತಿಂಡಾ, ಕೈಥಾಲ್, ಪಲ್ವಾಲ್, ಬರೇಲಿ, ಗೋರಖ್ಪುರ, ವಿಶಾಖಪಟ್ಟಣಂ ಸೇರಿದಂತೆ ಹಲವೆಡೆ ತನಿಖೆ ನಡೆಸಲಾಗುತ್ತಿದೆ.