ಭೂ ಸೇನೆಯ ನೆರವು ಪಡೆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ನವದೆಹಲಿ, ಮೇ 23: ಅಪನಗದೀಕರಣ ಆಗಿ 6 ತಿಂಗಳುಗಳೇ ಕಳೆದರೂ ಈಗಲೂ ಇರುವ ಕರೆನ್ಸಿ ನೋಟುಗಳ ಕೊರತೆಯನ್ನು ತಪ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ತ್ವರಿತ ಗತಿಯಲ್ಲಿ ನೋಟು ಮುದ್ರಣಕ್ಕೆ ಮುಂದಾಗಿದೆ.
ತ್ವರಿತ ಗತಿಯಲ್ಲಿ ನೋಟುಗಳನ್ನು ಮುದ್ರಿಸುವುದು, ಮುದ್ರಣಗೊಂಡ ನೋಟುಗಳನ್ನು ತ್ವರಿತವಾಗಿ ಆರ್ ಸಿಬಿಐನ ಕೇಂದ್ರ ಕಚೇರಿಗಳಿಗೆ ಹಾಗೂ ಸಂಬಂಧಪಟ್ಟ ಇತರ ಶಾಖೆಗಳಿಗೆ ತಲುಪಿಸುವ ಅತ್ಯಂತ ಜವಾಬ್ದಾರಿಯುತ ಕೆಲಸಕ್ಕೆ ಆರ್ ಬಿಐ ಕೈ ಹಾಕಿದೆ.[ನೋಟುಗಳಿಗೆ ಹೊಸ ಭದ್ರತಾ ಅಂಶ: ಕೇಂದ್ರ ಸರ್ಕಾರ ಆಶ್ವಾಸನೆ]
ತನ್ನ ಈ ಕಾರ್ಯಕ್ಕೆ ಬಿಗಿಭದ್ರತೆಯ ಅವಶ್ಯಕತೆಯನ್ನು ಮನಗಂಡಿರುವ ಆರ್ ಬಿಐ, ಭಾರತೀಯ ಸೇನೆಯ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ 500ಕ್ಕೂ ಹೆಚ್ಚು ಸೈನಿಕರು ಆರ್ ಬಿಐನ ನೋಟು ಮುದ್ರಣ ಕೇಂದ್ರಗಳು ಹಾಗೂ ಅಲ್ಲಿಂದ ಮುದ್ರಿತ ನೋಟುಗಳನ್ನು ಹೆಲಿಕಾಪ್ಟರ್ ಗಳ ಮೂಲಕ ಸಾಗಿಸಿ ರಿಸರ್ವ್ ಬ್ಯಾಂಕ್ ಗಳ ಕೇಂದ್ರ ಕಚೇರಿಗಳಿಗೆ ತಲುಪಿಸುವ ಸಂದರ್ಭದಲ್ಲಿ ಆರ್ ಬಿಐ ಸಿಬ್ಬಂದಿಗೆ ಬೆಂಗಾವಲಾಗಿ ಇರಲಿದ್ದಾರೆ.[ಮಾ. 25ರಿಂದ ಏ. 1ರವರೆಗೆ ಬ್ಯಾಂಕುಗಳಿಗೆ ರಜೆ ಇಲ್ಲ]
ಅಪನಗದೀಕರಣ ಜಾರಿಗೊಂಡಾಗಲೂ ಇದೇ ರೀತಿ ಸೇನೆಯ ನೆರವನ್ನು ಆರ್ ಬಿಐ ಪಡೆದಿತ್ತು.