ಕರ್ನಾಟಕ ಪ್ರವಾಸಿಗರಿಗೆ ತಿರುಪತಿ ತ್ವರಿತ ದರ್ಶನ ಸಹಿತ ಹೊಸ ಪ್ಯಾಕೇಜ್
Recommended Video
ಬೆಂಗಳೂರು, ಜೂನ್ 22: ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆಯು ಕರ್ನಾಟಕದ ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರಿನಿಂದ ತಿರುಪತಿಗೆ ಎರಡು ಹೊಸ ಮಲ್ಟಿ ಆಕ್ಸೆಲ್ ವೋಲ್ವೊ ಬಸ್ ಸಂಚಾರ ಆರಂಭಿಸಿದೆ.
ಬಸ್ಗಳು ಪ್ರತಿನಿತ್ಯ ಬೆಂಗಳೂರಿನಿಂದ ತಿರುಪತಿಗೆ ಸಂಚರಿಸಲಿದೆ. ಪ್ಯಾಕೇಜ್ ಪ್ರವಾಸ ಮಾದರಿಯಲ್ಲಿ ಟಿಕೆಟ್ ಲಭ್ಯವಿದೆ. ವಯಸ್ಕರಿಗೆ 2,050 ಮತ್ತು ಮಕ್ಕಳಿಗೆ 1,750 ರೂ. ದರ ನಿಗದಿಪಡಿಸಲಾಗಿದೆ. ಇದು 300 ರೂ. ದರದ ಶೀಘ್ರ ದರ್ಶನ ಟಿಕೆಟ್ ಒಳಗೊಂಡಿದೆ.
ತಿರುಪತಿ: ಉಚಿತ ದರ್ಶನ ಬುಕ್ಕಿಂಗ್ ಕೂಡ ಇನ್ನು ಆನ್ಲೈನ್ನಲ್ಲಿ
ನಿಗಮಕ್ಕೆ ನಿತ್ಯ 2,500 ದರ್ಶನ ಟಿಕೆಟ್ಗಳಿದ್ದು ಟಿಟಿಡಿ ಒದಗಿಸಲಿದೆ. ಯಾವುದೇ ಅಡೆತಡೆ ಇಲ್ಲದೆ ತಿಮ್ಮಪ್ಪನ ದರ್ಶನ ಪಡೆಯಲು ಇದು ಸಹಕಾರಿಯಾಗಲಿದೆ.
ವಾರಾಂತ್ಯದಲ್ಲಿ ಟಿಕೆಟ್ ದರ ವಯಸ್ಕರಿಗೆ 2,450 ರೂ. ಹಾಗೂ ಮಕ್ಕಳಿಗೆ 2,170 ರೂ. ನಿಗದಿಪಡಿಸಲಾಗಿದೆ. ಪ್ರಯಾಣ ದರದಲ್ಲಿ ಬೆಳಗಿನ ತಿಂಡಿ ವ್ಯವಸ್ಥೆ ಒದಗಿಸಲಾಗುತ್ತದೆ. ನಿತ್ಯ ರಾತ್ರಿ 9ಗಂಟೆಗೆ ಬೆಂಗಳೂರಿನಿಂದ ಬಸ್ ಹೊರಡಲಿದೆ. ಎಪಿಟಿಡಿಸಿ ಪ್ರವಾಸ ಪ್ಯಾಕೇಜ್ಗಳಿಂದ ಮೇ ತಿಂಗಳಲ್ಲಿ 3 ಕೋಟಿ ರೂ. ಆದಾಯ ಗಳಿಸಿದೆ. ಪ್ರಸಕ್ತ ವರ್ಷದಲ್ಲಿ 25 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ಸುದರ್ಶನ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.