ಶುಕ್ರವಾರ ದೇಶದಲ್ಲಿ ಅತ್ಯಂತ ಗರಿಷ್ಠ ಉಷ್ಣಾಂಶ ಇರುವ ರಾಜ್ಯ ಯಾವುದು?
ಬೆಂಗಳೂರು, ಜೂನ್ 21: ವಾಯು ಚಂಡಮಾರುತದಿಂದ ಮುಂಗಾರು ನಿಧಾನಗತಿಯಲ್ಲಿ ದೇಶವನ್ನು ಆವರಿಸಿಕೊಳ್ಳುತ್ತಿದೆ. ಹೀಗಾಗಿ ಸಾಕಷ್ಟು ಭಾಗಗಳಲ್ಲಿ ಬಿಸಿಲು ಮುಂದುವರೆದಿದೆ.
ಆಂಧ್ರಪ್ರದೇಶದಲ್ಲಿ ಗರಿಷ್ಠ ಅಂದರೆ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.ವಾಯುಭಾರ ಕುಸಿತದಿಂದಾಗಿ ಅಸ್ಸಾಂ, ಒಡಿಶಾ, ಗುಜರಾತ್ , ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಸ್ವಲ್ಪ ಮಳೆಯಾಗಿದ್ದರೂ ಕೂಡ ಉಳಿದಂತೆ ಸಾಕಷ್ಟು ಕಡೆಗಳಲ್ಲಿ ಮಳೆಯೇ ಇಲ್ಲ. ಬೆಂಗಳೂರು ಸೇರಿದಂತೆ ಹಲವೆಡೆ ಮೋಡಕವಿದ ವಾತಾವರಣ ಮುಂದುವರೆದಿದ್ದು ಉಷ್ಣಾಂಶ ಕೊಂಚ ಕಡಿಮೆಯಾಗಿದೆ.
ಬಿಸಿಲಿನ ಧಗೆಗೆ ಬೇಸಿಗೆ ರಜೆ ವಿಸ್ತರಣೆ
ಆಂಧ್ರಪ್ರದೇಶ, ಮಹಾರಾಷ್ಟ್ರ, ಹಾಲಂಕಿ, ರಾಜಸ್ಥಾನ, ತೆಲಂಗಾಣದಲ್ಲಿ ಬಿಸಿಲು ಮುಂದುವರೆದಿದೆ. ಆಂಧ್ರಪ್ರದೇಶದಲ್ಲಿ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ನಷ್ಟಿದೆ .2017ರಲ್ಲಿ ಮುಂಗಾರು ಜೂನ್ 18-20ರಕ್ಕೆ ಪ್ರವೇಶಿಸಿತ್ತು, 2013ರಲ್ಲಿ ಜೂನ್ 16ರೊಳಗೆ ಇಡೀ ಭಾರತವನ್ನೇ ಮುಂಗಾರು ಆವರಿಸಿಕೊಂಡಿತ್ತು.
ವಾಯು ಚಂಡಮಾರುತದಿಂದ ಕೇವಲ ಗುಜರಾತ್ ನ ಕರಾವಳಿ ಭಾಗದಲ್ಲಿ ಮಾತ್ರ ಮಳೆಯಾಗಿತ್ತು. ಜೂನ್ 29ರ ಸುಮಾರಿಗೆ ದೆಹಲಿಯನ್ನು ತಲುಪಲಿದೆ. ಈ ಬಾರಿ ಸಾಮಾನ್ಯ ಮುಂಗಾರಾಗಿದ್ದು ಶೇ.96ರಷ್ಟು ಮಳೆಯಾಗಲಿದೆ.
ಬಿಸಿಲ ಝಲ ತಾಳಲಾರದೆ ಕಾರಿಗೆಲ್ಲ ಸಗಣಿ ಮೆತ್ತಿದ ಯುವಕ
ರೆಂಟಾಚಿಂತಾಲಾ-ಆಂಧ್ರಪ್ರದೇಶ-43
ಡಿಗ್ರಿ
ಸೆಲ್ಸಿಯಸ್
ಬಿಕಾನೇರ್-ರಾಜಸ್ಥಾನ-42.7
ಡಿಗ್ರಿ
ಸೆಲ್ಸಿಯಸ್
ಚುರು-ರಾಜಸ್ಥಾನ-42.4
ಡಿಗ್ರಿ
ಸೆಲ್ಸಿಯಸ್
ಬ್ರಹ್ಮಪುರಿ-ಮಹಾರಾಷ್ಟ್ರ-42.3
ಡಿಗ್ರಿ
ಸೆಲ್ಸಿಯಸ್
ತಿರುತ್ತಣಿ-ತಮಿಳುನಾಡು-42.2
ಡಿಗ್ರಿ
ಸೆಲ್ಸಿಯಸ್
ಚಂದ್ರಪುರ-ಮಹಾರಾಷ್ಟ್ರ-42
ಡಿಗ್ರಿ
ಸೆಲ್ಸಿಯಸ್
ಶ್ರೀ
ಗಂಗಾನಗರ-ರಾಜಸ್ಥಾನ-42
ಡಿಗ್ರಿ
ಸೆಲ್ಸಿಯಸ್
ವರ್ಧಾ-ಮಹಾರಾಷ್ಟ್ರ-42
ಡಿಗ್ರಿ
ಸೆಲ್ಸಿಯಸ್
ಫಲೋದಿ-ರಾಜಸ್ಥಾನ-41.8ಡಿಗ್ರಿ
ಸೆಲ್ಸಿಯಸ್
ವಿಜಯವಾಡ-ಆಂಧ್ರಪ್ರದೇಶ-41.5
ಡಿಗ್ರಿ
ಸೆಲ್ಸಿಯಸ್