ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿಗಿ ಭದ್ರತೆ ನಡುವೆ ಎಂದಿನಂತೆ ಅಮರನಾಥ ಯಾತ್ರೆ ಆರಂಭ

By ವಿಕಾಸ್ ನಂಜಪ್ಪ
|
Google Oneindia Kannada News

ಜಮ್ಮು ಮತ್ತು ಕಾಶ್ಮೀರ, ಜುಲೈ 11: ಉಗ್ರರ ದಾಳಿ ಹಿನ್ನಲೆಯಲ್ಲಿ ಭಿಗಿ ಭದ್ರತೆ ನಡುವೆ ಜಮ್ಮುವಿನಿಂದ ಅಮರನಾಥ ಯಾತ್ರೆ ಇಂದು ಮತ್ತೆ ಆರಂಭವಾಗಲಿದೆ. "ವೇಳಾಪಟ್ಟಿಯಂತೆ ಅಮರನಾಥ ಯಾತ್ರೆ ಮುಂದುವರಿಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ," ಎಂದು ವಿಭಾಗಿಯ ಕಮಾಂಡರ್ ಮಂದೀಪ್ ಭಂಡಾರಿ ಹೇಳಿದ್ದಾರೆ.

ಉಗ್ರರ ದಾಳಿ ಬಗ್ಗೆ ಐಬಿ ನೀಡಿತ್ತು ಮಹತ್ವದ ಸುಳಿವುಉಗ್ರರ ದಾಳಿ ಬಗ್ಗೆ ಐಬಿ ನೀಡಿತ್ತು ಮಹತ್ವದ ಸುಳಿವು

ಇನ್ನು ಅಮರನಾಥ ಯಾತ್ರೆಯಲ್ಲಿ ಮಡಿದವರ ಮೃತ ದೇಹಗಳನ್ನು ವಿಮಾನದ ಮೂಲಕ ದೆಹಲಿಗೆ ತರಲಾಗುವುದು. ಅಮರನಾಥದಿಂದ ಶ್ರೀನಗರಕ್ಕೆ ಶವಗಳನ್ನು ಕೊಂಡೊಯ್ದು ಅಲ್ಲಿಂದ ವಿಮಾನಗಳ ಮೂಲಕ ಅವು ದೆಹಲಿಗೆ ಬರಲಿವೆ ಎಂದು ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಹೇಳಿದ್ದಾರೆ.

Amarnath yatra to resume as normal today

ಇದಕ್ಕಾಗಿ ಗಡಿ ಭದ್ರತಾ ಪಡೆಯ ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ. ಮೃತರು ಮತ್ತು ಗಾಯಗೊಂಡವರನ್ನು ಈ ವಿಮಾನ ದೆಹಲಿಗೆ ಕರೆ ತರಲಿದೆ.

ಗುಜರಾತ್ ನೋಂದಣಿಯ ಬಸ್ ಮೇಲೆ ಸೋಮವಾರ ಉಗ್ರರು ದಾಳಿ ನಡೆಸಿದ್ದರು. ಇದರಲ್ಲಿ 7 ಜನ ಸಾವನ್ನಪ್ಪಿ 32ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

English summary
The Amarnath yatris who came under terrorist fire will be airlifted to to Delhi today. Those who died in the attack will be shifted to Srinagar following which they will be airlifted to Delhi, Deputy Chief Minister of Jammu and Kashmir, Nirmal Singh informed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X