ಅಮರ್ ನಾಥ್ ಯಾತ್ರಾರ್ಥಿಗಳ ಬಗ್ಗೆ ವಿಚಾರಿಸಲು ಹೆಲ್ಪ್ ಲೈನ್ ಸಂಖ್ಯೆಗಳು
ಅಮರನಾಥ್ ಯಾತ್ರಾರ್ಥಿಗಳ ಮೇಲೆ ಉಗ್ರ ದಾಳಿ ನಡೆದಿದೆ. ರಾಜ್ಯದಿಂದ ಈ ಯಾತ್ರೆಗೆ ಹೋಗಿದ್ದವರ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳ ಬಯಸುವವರಿಗಾಗಿ ಹೆಲ್ಪ್ ಲೈನ್ ಸಂಖ್ಯೆಗಳನ್ನು ಇಲ್ಲಿ ಕೊಡಲಾಗಿದೆ.
ಶ್ರೀನಗರ, ಜುಲೈ 10: ಅಮರ್ ನಾಥ ಯಾತ್ರಾರ್ಥಿಗಳ ಮೇಲೆ ಸೋಮವಾರ ರಾತ್ರಿ ಉಗ್ರರ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಒಟ್ಟು 6 ಜನರು ಮೃತಪಟ್ಟು 9 ಜನರು ಗಾಯಗೊಂಡಿದ್ದಾರೆ.
ಯಾತ್ರಾರ್ಥಿಗಳ ಮೇಲೆ ದಾಳಿ: ಕಂಬನಿ ಮಿಡಿದ ಬಾಲಿವುಡ್, ಕ್ರಿಕೆಟ್ ಲೋಕ
ಈ ಬಾರಿಯ ಅಮರ್ ನಾಥ ಯಾತ್ರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದರು. ಅತಿ ಉತ್ಸಾಹದಿಂದ ತಂಡೋಪತಂಡವಾಗಿ ಯಾತ್ರಾರ್ಥಿಗಳು ಅಮರ್ ನಾಥ್ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಇಂಥ ಸಂದರ್ಭದಲ್ಲೇ ಉಗ್ರರು ತಮ್ಮ ಕುಕೃತ್ಯವನ್ನು ತೋರಿದ್ದಾರೆ.
ಅಮರ್ ನಾಥ್ ಯಾತ್ರಾರ್ಥಿಗಳ ಮೇಲೆ ದಾಳಿ ಖಂಡಿಸಿದ ಮೋದಿ, ಜೇಟ್ಲಿ
ಕರ್ನಾಟಕದಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಈ ಯಾತ್ರೆಗೆ ಹೋಗಿದ್ದು, ಅವರ ಬಗ್ಗೆ ಮಾಹಿತಿ ಪಡೆಯಲಿಚ್ಛಿಸುವವರು ಈ ಕೆಳಕಂಡ ಸಂಖ್ಯೆಗಳಿಗೆ ಸಂಪರ್ಕಿಸಬಹುದು.
- ಶ್ರೀ ಅಮರ್ ನಾಥ್ ಜೀ ಶ್ರಿನ್ ಬೋರ್ಡ್ (91-194-2501679 ಮತ್ತು +91-9469722210)
- ಶ್ರೀ ಅಮರ್ ನಾಥ್ ಜೀ ಶ್ರಿನ್ ಬೋರ್ಡ್, ಶಿವ್ ಪೋರಾ (+91-194-2468250)
- ಶ್ರೀ ಅಮರ್ ನಾಥ್ ಜೀ ಶ್ರಿನ್ ಬೋರ್ಡ್, ತಾಲಾಬ್ ಟಿಲ್ಲೊ (+91-191-2555662)
#WATCH: Scenes from the hospital in J&K's Anantnag where injured #AmarnathYatra pilgrims have been admitted post terror attack pic.twitter.com/Kdn54adES5
— ANI (@ANI_news) July 10, 2017