ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಗೆಲುವು ಬಡವರಿಗೆ, ಅಲ್ಪಸಂಖ್ಯಾತರಿಗೆ ಅರ್ಪಣೆ: ಅಖಿಲೇಶ್

|
Google Oneindia Kannada News

ಲಕ್ನೋ, ಮಾರ್ಚ್ 15: "ಉಪಚುನಾವಣೆಯ ನಮ್ಮ ಗೆಲುವನ್ನು ನಾವು ಬಡವರಿಗೆ, ಅಲ್ಪಸಂಖ್ಯಾತರಿಗೆ ಅರ್ಪಿಸುತ್ತೇವೆ" ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಿನ್ನೆ ಹೊರಬಿದ್ದ ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಈ ಗೆಲುವು ಬಡವರು, ಕಾರ್ಮಿಕರು, ರೈತರು, ಯುವಕರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಗೆಲುವು... ಇದೊಂದು ಮಹಾನ್ ವಿಜಯ" ಎಂದು ಹೆಮ್ಮೆಯಿಂದ ಬಣ್ಣಿಸಿದರು.

ಸೈಕಲ್ ಗೆ 'ಆನೆ' ಬಲ, ಉತ್ತರ ಪ್ರದೇಶದಲ್ಲಿ ಕಮಲ ಅಪ್ಪಚ್ಚಿಸೈಕಲ್ ಗೆ 'ಆನೆ' ಬಲ, ಉತ್ತರ ಪ್ರದೇಶದಲ್ಲಿ ಕಮಲ ಅಪ್ಪಚ್ಚಿ

ಗೋರಖ್ ಪುರ ಕ್ಷೇತ್ರದಲ್ಲಿ ಗೆದ್ದ ಪ್ರವೀಣ್ ನಿಶಾದ್ ಮತ್ತು ಫುಲ್ಪುರದಲ್ಲಿ ಗೆದ್ದ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, ಸಂಸತ್ತಿನಲ್ಲಿ ಇವರು ಸಾರ್ವಜನಿಕರ ಧ್ವನಿಯಾಗಲಿದ್ದಾರೆ ಎಂದರು.

Akhilesh dedicates bypoll victory to poor, minorities

"ಫುಲ್ಪುರದಲ್ಲಿ ಕಮಲ ಬಾಡಿದೆ. ಇಲ್ಲಿನ ಜನರಿಗೆ ನಾನು ಆಭಾರಿ. ದುರಹಂಕಾರ ಮತ್ತು ಸಭ್ಯವಲ್ಲದ ಭಾಷೆಗಳಿಗೆ ಇಲ್ಲಿನ ಜನರು ಸರಿಯಾದ ಉತ್ತರ ನೀಡಿದ್ದಾರೆ" ಎಂದು ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಉಪಚುನಾವಣೆಯಲ್ಲಿ ಗೆಲ್ಲುವುದಕ್ಕೆ ಕಾರಣವಾದ ಎಲ್ಲ ಕಾರ್ಯಕರ್ತರಿಗೂ ಅವರು ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು.
ಫುಲ್ಪುರ್ ನಲ್ಲಿ ಸಮಾಜವಾದಿ ಪಕ್ಷದ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್, 3,37,683 ಮತಗಳನ್ನು ಪಡೆದು, ಬಿಜೆಪಿಯ ಕೌಶಲೇಂದ್ರ ಸಿಂಗ್ ಪಟೇಲ್(2,80,535) ಅವರನ್ನು 59,613 ಮತಗಳ ಅಂತರದಿಂದ ಸೋಲಿಸಿದರು.

ಯೋಗಿ ಆದಿತ್ಯನಾಥ್ ಕ್ಷೇತ್ರವಾದ ಗೋರಖ್ ಪುರದಲ್ಲಿ ಎಸ್ಪಿಯ ಪ್ರವೀಣ್ ಕುಮಾರ್ ನಿಶಾದ್, ಬಿಜೆಪಿಯ ಉಪೇಂದ್ರ ದತ್ ಶುಕ್ಲಾ ಅವರನ್ನು ಸೋಲಿಸಿದ್ದರು.

English summary
Samajwadi Party (SP) president Akhilesh Yadav on Thursday termed the party's victory on the two Lok Sabha seats in Uttara Pradesh by elections as the victory of the poor, the youth and the minorities. "This victory is the victory of the citizens who are poor, are labourers, farmers, the youth, the minorities, and the women, and it is a huge victory," Yadav told press in lucknow
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X