ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ಓದಿ: ಏರ್ ಇಂಡಿಯಾ ಪ್ರಯಾಣಿಕರಿಗೆ Covid-19 ಹೊಸ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಆಗಸ್ಟ್ 22: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ವಿಮಾನ ಪ್ರಯಾಣಕ್ಕೆ ಯೋಜನೆ ಹಾಕಿಕೊಂಡಿದ್ದೀರಾ. ಅಂತರ್-ರಾಜ್ಯ ಪ್ರಯಾಣಕ್ಕೆ ನಿರ್ಧರಿಸುವ ಮೊದಲು ಕೊವಿಡ್-19 ಮಾರ್ಗಸೂಚಿಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಏಕೆಂದರೆ ಏರ್ ಇಂಡಿಯಾ ವಿಮಾನಯಾನವು ಪ್ರತಿಯೊಂದು ರಾಜ್ಯಗಳಿಗೆ ಭಿನ್ನ-ವಿಭಿನ್ನ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಯಥಾರೀತಿ ಏರಿಳಿತ ಕಂಡು ಬರುತ್ತಿದೆ. ಒಂದು ದಿನದಲ್ಲಿ 30,948 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 38,487 ಸೋಂಕಿತರು ಗುಣಮುಖರಾಗಿದ್ದು, 403 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,24,24,234ಕ್ಕೆ ಏರಿಕೆಯಾಗಿದ್ದು, ಈವರೆಗೂ 3,16,36,469 ಮಂದಿ ಗುಣಮುಖರಾಗಿದ್ದಾರೆ. ಇದರ ಹೊರತಾಗಿ 4,34,367 ಜನರು ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,53,398ರಷ್ಟಿದೆ.

ವಿಮಾನದಲ್ಲಿ ಆಹಾರವಿಲ್ಲ, ಔಷಧಿಯಿಲ್ಲ; ಹೈಕೋರ್ಟ್ ಮೆಟ್ಟಿಲೇರಿದ ದಂಪತಿವಿಮಾನದಲ್ಲಿ ಆಹಾರವಿಲ್ಲ, ಔಷಧಿಯಿಲ್ಲ; ಹೈಕೋರ್ಟ್ ಮೆಟ್ಟಿಲೇರಿದ ದಂಪತಿ

ಭಾರತದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಳಿತದ ನಡುವೆ ಕಟ್ಟುನಿಟ್ಟಿನ ಮಾರ್ಗಸೂಚಿಗಳ ಪಾಲನೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯವಾರು ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳಿಂದ ಮಾರ್ಗಸೂಚಿಗಳನ್ನು ಕಳುಹಿಸಲಾಗಿದೆ. ಈ ಮಾರ್ಗಸೂಚಿಗಳ ಅನ್ವಯ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ರಾಜ್ಯವಾರು ಪ್ರತ್ಯೇಕ ಕ್ವಾರೆಂಟೈನ್ ಮತ್ತು ನಿಯಮಗಳನ್ನು ನಿಗದಿಗೊಳಿಸಿದೆ. ಈ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ಅಂಡಮಾನ್

ಅಂಡಮಾನ್

* ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾನ್ಯತೆ ಪಡೆದಿರುವ ಪ್ರಯೋಗಾಲಯಗಳಲ್ಲಿ 48 ಗಂಟೆಗಳ ಹಿಂದೆ ನಡೆಸಿದ RT-PCR ತಪಾಸಣೆಯ ನೆಗೆಟಿವ್ ವರದಿ ಕಡ್ಡಾಯವಾಗಿದ್ದು, ಯಾವುದೇ ರೀತಿ ಲಿಖಿತ ರೂಪದ ವರದಿ ಪುರಷ್ಕೃತವಾಗಿರುವುದಿಲ್ಲ. ಈ ವರದಿ ಜೊತೆಗೆ ಪ್ರಯಾಣ ಆರಂಭಿಸುವ ವೇಳೆಯಲ್ಲಿ ಪ್ರಯಾಣಿಕರನ್ನು ರಾಪಿಡ್ ಆಂಟಿಜೆನಿಕ್ ಪರೀಕ್ಷೆಗೊಳಪಡಿಸುವುದು.

* ಪ್ರಯಾಣಿಕರು RT-PCR ನೆಗೆಟಿವ್ ವರದಿ ಹೊಂದಿದ ಹೊರತಾಗಿಯೂ 7 ದಿನಗಳ ಕ್ವಾರೆಂಟೈನ್ ಕಡ್ಡಾಯ. ಸ್ವರಾಜ್ ದ್ವೀಪ, ಶಾಹೀದ್ ದ್ವೀಪ ಮತ್ತು ಸಣ್ಣ ಅಂಡಮಾನ್ ಪ್ರದೇಶಕ್ಕೆ ಭೇಟಿ ನೀಡುವ ಪ್ರಯಾಣಿಕರು ನೆಗೆಟಿವ್ ವರದಿ ಹೊಂದಿದ್ದರೂ 10 ದಿನಗಳು ಗೃಹ ದಿಗ್ಬಂಧನಕ್ಕೆ ಒಳಗಾಗುವುದು ಕಡ್ಡಾಯವಾಗಿರುತ್ತದೆ.

* ಯಾವುದೇ ಪ್ರಯಾಣಿಕರು ತಮ್ಮ ಕ್ವಾರೆಂಟೈನ್ ಅವಧಿಯಲ್ಲಿ ನಿಮಯಗಳನ್ನು ಉಲ್ಲಂಘಿಸಿದರೆ ಪ್ರತಿ ಬಾರಿ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ.

ಗೋವಾ

ಗೋವಾ

* ಗೋವಾ ಪ್ರವೇಶಕ್ಕೆ 72 ಗಂಟೆಗಳ ಹಿಂದೆ ಪರೀಕ್ಷಿಸಿ ಪಡೆಯಲಾಗಿರುವ ಕೊವಿಡ್-19 ನೆಗೆಟಿವ್ ವರದಿ ಕಡ್ಡಾಯ

* ತುರ್ತು ವೈದ್ಯಕೀಯ ಪರೀಕ್ಷೆಗೆ ಆಗಮಿಸುವವರು ಅಗತ್ಯ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸುವುದು

* ವ್ಯಾಪಾರ ಮತ್ತು ಉದ್ಯೋಗದ ಉದ್ದೇಶದಿಂದ ಗೋವಾ ಪ್ರವೇಶಿಸುವ ವ್ಯಕ್ತಿಗಳು ಹಾಗೂ ಸಾಂಕ್ರಾಮಿಕ ಸಂಬಂಧಿತ ಅಥವಾ ಅಂತಹ ಇತರ ಸಮಸ್ಯೆಗಳಿಂದ ಗೋವಾದ ಹೊರಗೆ ಸಿಲುಕಿರುವ ಗೋವಾದ ನಿವಾಸಿಗಳು ಎರಡೂ ಡೋಸ್ ಲಸಿಕೆ ತೆಗೆದುಕೊಂಡು 14 ದಿನಗಳ ನಂತರದಲ್ಲಿ ಸೋಂಕಿನ ಲಕ್ಷಣಗಳಿಲ್ಲದಿದ್ದರೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು.

ಏರ್ ಇಂಡಿಯಾ ವಿಮಾನದಲ್ಲಿ 318 ಆಮ್ಲಜನಕ ಸಾಂದ್ರಕಗಳ ಆಮದುಏರ್ ಇಂಡಿಯಾ ವಿಮಾನದಲ್ಲಿ 318 ಆಮ್ಲಜನಕ ಸಾಂದ್ರಕಗಳ ಆಮದು

ಆಂಧ್ರ ಪ್ರದೇಶ

ಆಂಧ್ರ ಪ್ರದೇಶ

* ಕೊವಿಡ್-19 ಸೋಂಕಿನ ಲಕ್ಷಣಗಳಿಲ್ಲದ ಪ್ರತಿಯೊಬ್ಬರು 14 ದಿನ ಗೃಹ ದಿಗ್ಬಂಧನದಲ್ಲಿ ಇರಬೇಕು

* ಎಲ್ಲಾ ಪ್ರಯಾಣಿಕರು ಸ್ವಯಂಪ್ರೇರಿತರಾಗಿ ಸ್ಪಂದನ ವೆಬ್‌ಸೈಟ್ www.spandana.ap.gov.in ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು

ಅಸ್ಸಾಂ

ಅಸ್ಸಾಂ

* ಪ್ರಯಾಣ ಆರಂಭಿಸುವ ಅಥವಾ ಪ್ರವೇಶಿಸುವ ಸಂದರ್ಭದಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ರಾಪಿಡ್ ಆಂಟಿಜೆನಿಕ್ ಪರೀಕ್ಷೆ ಕಡ್ಡಾಯ.

* ಕೊವಿಡ್-19 ಸೋಂಕು ತಗುಲಿದ ಪ್ರಯಾಣಿಕರಿಗೆ ಗೃಹ ದಿಗ್ಬಂಧನ ಅಥವಾ ಆಸ್ಪತ್ರೆಗೆ ದಾಖಲಿಸುವುದು

* RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಹೊಂದಿರುವ ಪ್ರಯಾಣಿಕರು ಅಧಿಕೃತ ಘೋಷಣೆವರೆಗೂ ಹೋಮ್ ಕ್ವಾರೆಂಟೈನ್ ನಲ್ಲಿ ಇರುವುದು

* ರಾಜ್ಯವನ್ನು ಪ್ರವೇಶಿಸಿದ ಪ್ರತಿಯೊಬ್ಬ ಪ್ರಯಾಣಿಕರು ನೆಗೆಟಿವ್ ವರದಿ ಹೊಂದಿರುವುದರ ಹೊರತಾಗಿಯೂ 7 ದಿನ ಗೃಹ ದಿಗ್ಬಂಧನದಲ್ಲಿ ಇರುವುದು ಕಡ್ಡಾಯ

* ಎರಡು ಡೋಸ್ ಲಸಿಕೆ ಪಡೆದ ಪ್ರಯಾಣಿಕರು ಸೇರಿದಂತೆ ಎಲ್ಲರಿಗೂ ರಾಪಿಡ್ ಆಂಟಿಜೆನಿಕ್ ಪರೀಕ್ಷೆ ಕಡ್ಡಾಯವಾಗಿದೆ.

* ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಿಗೆ ಹೋಗುವ ಪ್ರಯಾಣಿಕರಿಗೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.

* ವೈದ್ಯಕೀಯ ಕಾರಣಗಳಿಗಾಗಿ ಪ್ರಯಾಣಿಸುವ ಸರ್ಕಾರಿ ಅಧಿಕಾರಿಗಳು ಮತ್ತು ಪ್ರಯಾಣಿಕರಿಗೆ ಅಥವಾ ಕುಟುಂಬವನ್ನು ಕಳೆದುಕೊಂಡವರಿಗೆ ಕಡ್ಡಾಯ ಕ್ವಾರೆಂಟೈನ್ ನಿಯಮದಿಂದ ವಿನಾಯಿತಿ ನೀಡಲಾಗಿದೆ.

* ಪ್ರಯಾಣಿಕರ RT-PCR ಪರೀಕ್ಷೆಗೆ 500 ರೂಪಾಯಿ ದರವನ್ನು ನಿಗದಿಗೊಳಿಸಲಾಗಿದೆ.

ಜೂನ್ 23ರಿಂದ ಭಾರತಕ್ಕೆ ದುಬೈ ಎಮಿರೇಟ್ಸ್ ವಿಮಾನ ಹಾರಾಟಜೂನ್ 23ರಿಂದ ಭಾರತಕ್ಕೆ ದುಬೈ ಎಮಿರೇಟ್ಸ್ ವಿಮಾನ ಹಾರಾಟ

ಬಿಹಾರ

ಬಿಹಾರ

* ಪ್ರಯಾಣಿಕರ ಆಗಮಿಸಿದ ಸಂದರ್ಭದಲ್ಲಿ ಥರ್ಮಲ್ ಸ್ಕ್ರೀನಿಂಗ್

* ಬಿಹಾರ ಸರ್ಕಾರದ ಆರೋಗ್ಯ ಇಲಾಖೆಯು ಪಾಟ್ನಾಗೆ ಬರುವ ದೇಶೀಯ ಪ್ರಯಾಣಿಕರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದೆ. ದೇಶೀಯ ನಿಲ್ದಾಣಗಳಿಂದ ಪಾಟ್ನಾಗೆ ಬರುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಯೂ ಕಡ್ಡಾಯವಲ್ಲ.

* ಪ್ರಯಾಣಿಕರಿಗೆ 10 ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯವಾಗಿದೆ

* ಎಲ್ಲಾ ಪ್ರಯಾಣಿಕರಿಗೆ ಕೊವಿಡ್ -19 ಪರೀಕ್ಷೆ ನಡೆಸಲಾಗುವುದು ಮತ್ತು ಪಾಸಿಟಿವ್ ಎಂದು ಕಂಡುಬಂದಲ್ಲಿ ಆರೋಗ್ಯ ಇಲಾಖೆಯಿಂದ ನೀಡಲಾದ ಎಸ್‌ಒಪಿ ಪಾಲನೆ ಮಾಡುವಂತೆ ನಿರ್ದೇಶಿಸಲಾಗುವುದು,

* ಮಧ್ಯಪ್ರದೇಶ, ದೆಹಲಿ ಮತ್ತು ಎನ್‌ಸಿಆರ್, ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್‌ನಿಂದ ಆಗಮಿಸುವ ಗಯಾ ಪ್ರಯಾಣಿಕರಿಗೆ ಐಸಿಎಂಆರ್ ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದ ಲಸಿಕೆ ಪ್ರಮಾಣಪತ್ರ/ಆರ್‌ಟಿ- ಪಿಸಿಆರ್/ಆರ್‌ಎಟಿ ನೆಗೆಟಿವ್ ವರದಿ ಕಡ್ಡಾಯ.

* 72 ಗಂಟೆಗಳ ಹಿಂದೆ ನಡೆಸಿದ RT-PCR ವರದಿಯ ನೆಗೆಟಿವ್ ವರದಿ ಹಾಗೂ 14 ದಿನಗಳ ಹಿಂದೆ ಎರಡೂ ಡೋಸ್ ಲಸಿಕೆ ಪಡೆದಿರುವ ಪ್ರಮಾಣಪತ್ರ.

* ಪ್ರಯಾಣಿಕರು ಆಗಮಿಸಿದ ವೇಳೆ ಉಚಿತವಾಗಿ ರಾಪಿಡ್ ಆಂಟಿಜೆನಿಕ್ ಪರೀಕ್ಷೆ.

ಛತ್ತೀಸ್ ಗಢ

ಛತ್ತೀಸ್ ಗಢ

* ಪ್ರಯಾಣಿಕರು 96 ಗಂಟೆಗಳ ಹಿಂದೆ ಐಸಿಎಂಆರ್ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ನಡೆಸಿದ RT-PCR ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರಬೇಕು.

* ಐಸಿಎಂಆರ್ ಐಡಿ ಅಥವಾ ಎಸ್‌ಆರ್‌ಎಫ್ ಐಡಿ theಣಾತ್ಮಕ ವರದಿಗಳಲ್ಲಿ ಕಡ್ಡಾಯವಾಗಿದೆ, ಇಲ್ಲದಿದ್ದರೆ ಕೋವಿಡ್ ಪರೀಕ್ಷೆಯನ್ನು ಆಗಮನದ ನಂತರ ಮಾಡಲಾಗುತ್ತದೆ.

* ಕೊವಿಡ್-19 ನೆಗೆಟಿವ್ ವರದಿಯಲ್ಲಿ ಐಸಿಎಂಆರ್ ಅಥವಾ ಎಸ್ಆರ್ಎಫ್ ಮುದ್ರೆ ಕಡ್ಡಾಯವಾಗಿರುತ್ತದೆ. ಪ್ರಯಾಣಿಕರು ಆಗಮಿಸಿದ ವೇಳೆ ಈ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದಿದ್ದರೆ ಈ ವರದಿ ಬರುವವರೆಗೂ ಗೃಹ ದಿಗ್ಬಂಧನದಲ್ಲಿ ಇರಬೇಕಾಗುವುದು.

ದೆಹಲಿ

ದೆಹಲಿ

* ಪ್ರಯಾಣಿಕರು ಆಗಮಿಸಿದ ಸಂದರ್ಭದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು

* 14 ದಿನಗಳವರೆಗೂ ಪ್ರಯಾಣಿಕರು ಕ್ವಾರೆಂಟೈನ್ ನಲ್ಲಿ ಇರಬೇಕು

* ಎಲ್ಲಾ ಸಾಂವಿಧಾನಿಕ ಮತ್ತು ಸರ್ಕಾರಿ ಪದಾಧಿಕಾರಿಗಳು ಮತ್ತು ಅವರ ಸಿಬ್ಬಂದಿ ಲಕ್ಷಣರಹಿತರಾಗಿದ್ದರೆ ಅವರಿಗೆ ಕ್ಯಾರೆಂಟೈನ್ ನಿಂದ ವಿನಾಯಿತಿ ನೀಡಲಾಗಿದೆ.

ಗುಜರಾತ್

ಗುಜರಾತ್

* ಪ್ರಯಾಣಿಕರು ಆಗಮಿಸಿದ ಸಂದರ್ಭದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು

* ಗುಜರಾತಿನಲ್ಲಿ ಯಾವುದೇ ಆರೋಗ್ಯವಂತ ವ್ಯಕ್ತಿಯು ಪ್ರಯಾಣಿಸುವುದಕ್ಕೆ RT-PCR ವರದಿ ಕಡ್ಡಾಯವಲ್ಲ

* ಸೂರತ್‌ಗೆ ಆಗಮಿಸುವ ಪ್ರಯಾಣಿಕರು SMC ಕೋವಿಡ್ -19 ಟ್ರ್ಯಾಕರ್ ಆಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ: https://play.google.com/store/apps/details?id=in.smc.covidout ಅಥವಾ http: //www.suratmunicipal.gov.in/EServices/Covid19SelfReporting

ಹರಿಯಾಣ

ಹರಿಯಾಣ

* ಪ್ರಯಾಣಿಕರು ಆಗಮಿಸಿದ ಸಂದರ್ಭದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು

* ಹರಿಯಾಣ ಪ್ರವೇಶಿಸಿದ ಸೋಂಕಿನ ಲಕ್ಷಣವಿಲ್ಲದ ಪ್ರತಿಯೊಬ್ಬ ಪ್ರಯಾಣಿಕರು 14 ದಿನಗಳವರೆಗೂ ಗೃಹ ದಿಗ್ಬಂಧನಕ್ಕೆ ಒಳಗಾಗುವುದು ಕಡ್ಡಾಯ

ಉತ್ತರಾಖಂಡ

ಉತ್ತರಾಖಂಡ

* ಮಹಾರಾಷ್ಟ್ರ, ಕೇರಳ ಮತ್ತು ಗುಜರಾತ್‌ನಿಂದ ಆಗಮಿಸುವ ಪ್ರಯಾಣಿಕರಿಗೆ ಉಚಿತವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಎಲ್ಲಾ ಪ್ರಯಾಣಿಕರು 72 ಗಂಟೆಗಳ ಹಿಂದೆ ಪಡೆದಿರುವ RT-PCR/True NAT/CBNAAT/Antigen ಪರೀಕ್ಷೆಯ ನೆಗಟಿವ್ ವರದಿಯನ್ನು ಹೊಂದಿದ್ದರೆ ಅಂಥವರಿಗೆ ಗೃಹ ದಿಗ್ಬಂಧನದಿಂದ ವಿನಾಯಿತಿ ನೀಡಲಾಗುತ್ತದೆ.

* ಎರಡೂ ಡೋಸ್ ಲಸಿಕೆ ಪಡೆದುಕೊಂಡಿರುವ ವ್ಯಕ್ತಿಯು 15 ದಿನಗಳ ನಂತರದಲ್ಲಿ ರಾಜ್ಯ ಪ್ರವೇಶಿಸಲು ಮೇಲಿನ ಯಾವುದೇ ದಾಖಲೆಗಳ ಅಗತ್ಯ ಇರುವುದಿಲ್ಲ

* ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ 7 ದಿನಗಳ ಗೃಹ ದಿಗ್ಬಂಧನ

* ಉತ್ತರಾಖಂಡಕ್ಕೆ ಆಗಮಿಸುವ ಪ್ರಯಾಣಿಕರು ಕನಿಷ್ಠ 7 ದಿನಗಳವರೆಗೂ ರಾಜ್ಯದಲ್ಲಿ ತಂಗುವುದು ಕಡ್ಡಾಯ.

* ರಾಜ್ಯ ಮತ್ತು ಕೇಂದ್ರದ ಸರ್ಕಾರಿ ಅಧಿಕಾರಿ, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನ ನ್ಯಾಯಾಧೀಶರು ಮತ್ತು ಇತರ ನ್ಯಾಯಾಂಗ ಅಧಿಕಾರಿಗಳು, ಸಂಸದರು ಮತ್ತು ಉತ್ತರಾಖಂಡದ ಶಾಸಕರು ಮತ್ತು ಸಹಾಯಕ ಸಿಬ್ಬಂದಿಗೆ ಕ್ಯಾರೆಂಟೈನ್ ನಿಂದ ವಿನಾಯಿತಿ ನೀಡಲಾಗಿದೆ.

* ಎಲ್ಲಾ ಪ್ರಯಾಣಿಕರು ರಾಜ್ಯ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. : http://smartcitydehradun.uk.gov.in ಮತ್ತು ಸರ್ಕಾರಿ ಏಜೆನ್ಸಿಗಳ ಎಸ್‌ಒಪಿಗಳನ್ನು ಅನುಸರಿಸಿ.

ರಾಜಸ್ಥಾನ

ರಾಜಸ್ಥಾನ

* ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದಿರುವ ಪ್ರಯಾಣಿಕರು ರಾಜಸ್ಥಾನ ಪ್ರವೇಶಿಸುವುದಕ್ಕೆ ಯಾವುದೇ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಅಗತ್ಯವಿಲ್ಲ. ಹಾಗೂ ಹೋಮ್ ಕ್ವಾರೆಂಟೈನ್ ಮತ್ತು ಸಾಂಸ್ಥಿತ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ.

* ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳದ ಪ್ರಯಾಣಿಕರು ರಾಜಸ್ಥಾನಕ್ಕೆ ತೆರಳುವ ಸಂದರ್ಭದಲ್ಲಿ 72 ಗಂಟೆಗಳ ಹಿಂದೆ ನಡೆಸಿದ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿರುತ್ತದೆ.

* ಯಾವುದೇ ವರದಿಯನ್ನು ತೆಗೆದುಕೊಂಡು ಹೋಗದ ಪ್ರಯಾಣಿಕರಿಗೆ ಕಡ್ಡಾಯವಾಗಿ 15 ದಿನ ಕ್ವಾರೆಂಟೈನ್ ವಿಧಿಸಲಾಗುತ್ತದೆ

* ವ್ಯಾಪಾರಿ ಉದ್ದೇಶಕ್ಕಾಗಿ ಜೈಪುರ್ ಮತ್ತು ರಾಜಸ್ಥಾನದ ಬೇರೆ ಯಾವುದೇ ಪ್ರದೇಶಕ್ಕೆ ತೆರಳುವ ಪ್ರಯಾಣಿಕರು ತಾವೇ ತಮ್ಮ ಕ್ವಾರೆಂಟೈನ್ ವ್ಯವಸ್ಥೆಯನ್ನು ಮಾಡಿಕೊಳ್ಳತಕ್ಕದ್ದು.

* ರಾಜಸ್ಥಾನಕ್ಕೆ ಆಗಮಿಸುವ ಎಲ್ಲಾ "ಸಶಸ್ತ್ರ ಪಡೆಗಳ ಸಿಬ್ಬಂದಿ"ಗೆ 72 ಗಂಟೆಗಳ ಹಿಂದೆ ನಡೆಸಿದ RT-PCR ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯವಲ್ಲ.

ತಮಿಳುನಾಡು

ತಮಿಳುನಾಡು

* ಮಹಾರಾಷ್ಟ್ರ ಮತ್ತು ಕೇರಳದಿಂದ ಆಗಮಿಸುವ ಪ್ರಯಾಣಿಕರು ಸೋಂಕಿನ ಲಕ್ಷಣಗಳನ್ನು ಹೊಂದಿರಬಾರದು. ತಮಿಳುನಾಡಿಗೆ ಆಗಮಿಸುವವರು 72 ಗಂಟೆಗಳ ಹಿಂದೆ ನಡೆಸಿದ RT-PCR ಪರೀಕ್ಷೆಯ ನೆಗೆಟಿವ್ ವರದಿ ಜೊತೆಗೆ ಇ-ಪಾಸ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ.

* ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರು 7 ದಿನಗಳ ಹೋಮ್ ಕ್ವಾರೆಂಟೈನ್ ಜೊತೆಗೆ 7 ದಿನ ಸ್ವಯಂ ಪರಿವೀಕ್ಷಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

* ಪ್ರಯಾಣಿಕರು ತಮ್ಮ ಪ್ರಯಾಣದ ಮೊದಲು https://tnepass.tnega.org ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಎಟಿಎನ್ ಇ-ಪಾಸ್ ಹೊಂದಿರುವುದು ಕಡ್ಡಾಯ.

ಮಹಾರಾಷ್ಟ್ರ

ಮಹಾರಾಷ್ಟ್ರ

* ಮಹಾರಾಷ್ಟ್ರ ಪ್ರವೇಶಿಸುವ ಪ್ರಯಾಣಿಕರು 72 ಗಂಟೆಗಳ ಹಿಂದೆ ನಡೆಸಿದ RT-PCR ಪರೀಕ್ಷೆಯ ನೆಗೆಟಿವ್ ವರದಿ ಹೊಂದುವುದು ಕಡ್ಡಾಯ. ಇದರ ಜೊತೆಗೆ ನೆಗೆಟಿವ್ ವರದಿ ಇಲ್ಲದವರ ವಿಮಾನ ಪ್ರಯಾಣಕ್ಕೆ ಯಾವುದೇ ಅನುಮತಿ ಇರುವುದಿಲ್ಲ.

* ಮಹಾರಾಷ್ಟ್ರದಲ್ಲಿ 7 ದಿನ ಅಥವಾ ಅದಕ್ಕಿಂತ ಕಡಿಮೆ ಅವಧಿಯವರೆಗೆ ಉಳಿಯಲು ಇಚ್ಛಿಸುವ ಎಲ್ಲ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ ನಿಂದ ವಿನಾಯಿತಿ ನೀಡಲಾಗುತ್ತದೆ.

ಕರ್ನಾಟಕ

ಕರ್ನಾಟಕ

* ಕೊವಿಡ್-19 ಲಸಿಕೆ ಪಡೆದಿರುವುದರ ಹೊರತಾಗಿಯೂ ಮಹಾರಾಷ್ಟ್ರ ಮತ್ತು ಕೇರಳದಿಂದ ಆಗಮಿಸುವ ಎಲ್ಲ ಪ್ರಯಾಣಿಕರು 72 ಗಂಟೆಗಳ ಹಿಂದೆ ನಡೆಸಿದ RT-PCR ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ.

* ಬೇರೆ ಯಾವುದೇ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು RT-PCR ನೆಗೆಟಿವ್ ವರದಿ ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.

* ಕೇರಳ ಮತ್ತು ಮಹಾರಾಷ್ಟ್ರದಿಂದ ಪ್ರಯಾಣಿಸುವ ಈ ವರ್ಗದವರಿಗೆ ನೆಗೆಟಿವ್ ವರದಿಯಿಂದ ವಿನಾಯಿತಿ ನೀಡಲಾಗಿದೆ:

1. ಸಾಂವಿಧಾನಿಕ ಹುದ್ದೆಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ವಿನಾಯಿತಿ

2. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು

3. ವೈದ್ಯಕೀಯ ಚಿಕಿತ್ಸೆ ಮತ್ತು ಸಾವಿನಂತಹ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ಪ್ರವೇಶಿಸಿದ ವೇಳೆಯೇ RT-PCR ಪರೀಕ್ಷೆ ನಡೆಸಲಾಗುವುದು

* ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಬ್ಬ ಪ್ರಯಾಣಿಕನ RT-PCR ಪರೀಕ್ಷೆಗೆ 800 ರೂಪಾಯಿ ನಿಗದಿಗೊಳಿಸಲಾಗಿದೆ

ಕೇರಳ

ಕೇರಳ

* ರಾಜ್ಯಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕು 72 ಗಂಟೆಗಳ ಹಿಂದೆ ನಡೆಸಿದ RT-PCR ಪರೀಕ್ಷೆಯ ನೆಗೆಟಿವ್ ವರದಿ ತೆಗೆದುಕೊಂಡು ಹೋಗುವುದು ಕಡ್ಡಾಯ.

* ಕೇರಳದಲ್ಲಿ ಆಂತರಿಕವಾಗಿ ಪ್ರಯಾಣಿಸುವ ಜನರಿಗೆ ಯಾವುದೇ ನೆಗೆಟಿವ್ ವರದಿಯ ಅಗತ್ಯವಿರುವುದಿಲ್ಲ

* ಎಲ್ಲಾ ಲಕ್ಷಣರಹಿತ ಪ್ರಯಾಣಿಕರು 14 ದಿನಗಳ ಕಾಲ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕು. 7 ದಿನಗಳಿಗಿಂತ ಕಡಿಮೆ ಅವಧಿಗೆ ಕೇರಳಕ್ಕೆ ಭೇಟಿ ನೀಡುವ ಪ್ರಯಾಣಿಕರು ಅಲ್ಪಾವಧಿ ಭೇಟಿಯ ಪ್ರವೇಶ ಪಾಸ್ ಪಡೆದರೆ ಹೋಮ್ ಕ್ವಾರೆಂಟೈನ್ ನಿಂದ ವಿನಾಯಿತಿ ನೀಡಲಾಗುತ್ತದೆ.

* ಒಂದು ವೇಳೆ ಯಾವುದೇ ಪ್ರಯಾಣಿಕರು ಆರ್‌ಟಿ-ಪಿಸಿಆರ್ ವರದಿಯಿಲ್ಲದೇ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದರೆ ಏರ್‌ಪೋರ್ಟ್‌ನಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಯ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಪರೀಕ್ಷೆಯ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು.

* ಕೇರಳಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರು ತಮ್ಮ ವಿವರಗಳನ್ನು ರಾಜ್ಯದ ಕೊವಿಡ್ ಜಾಗ್ರತಾ ಪೋರ್ಟಲ್ https://covid19jagratha.kerala.nic.in/home/ ನಲ್ಲಿ ನೋಂದಾಯಿಸಿದ ನಂತರ ಮಾನ್ಯವಾದ ಇ-ಪಾಸ್ ಹೊಂದಿರಬೇಕು. ಅದಿಲ್ಲದೆ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ಅನುಮತಿ ಇರುವುದಿಲ್ಲ.

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ

* ಎಲ್ಲಾ ರಾಜ್ಯಗಳಿಂದ ಆಗಮಿಸುವ ಎಲ್ಲಾ ಲಕ್ಷಣರಹಿತ ಪ್ರಯಾಣಿಕರಿಗೆ ಕ್ಯಾರೆಂಟೈನ್‌ನಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ ಅವರು 96 ಗಂಟೆಗಳ ಹಿಂದೆ ಐಸಿಎಂಆರ್ ಮಾನ್ಯತೆ ಪಡೆದಿರುವ ಪ್ರಯೋಗಾಲಯದಿಂದ ಆರ್‌ಟಿ-ಪಿಸಿಆರ್ ಪರೀಕ್ಷೆ, ಟ್ರೂನಾಟ್ ಟಿ/ಸಿಬಿ ನ್ಯಾಟ್ ಪರೀಕ್ಷೆಯ ನೆಗೆಟಿವ್ ವರದಿ ಪಡೆಯುವುದು ಕಡ್ಡಾಯವಾಗಿದೆ.

* ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳಿರುವ ನಗರದಿಂದ ಆಗಮಿಸಿದ ಪ್ರಯಾಣಿಕರು 7 ದಿನ ಗೃಹ ದಿಗ್ಬಂಧನ ಮತ್ತು 7 ಸಾಂಸ್ಥಿಕ ದಿಗ್ಬಂಧನಕ್ಕೆ ಒಳಗಾಗುವುದು ಕಡ್ಡಾಯ.

* ಹಿಮಾಚಲ ಪ್ರದೇಶದ ಪ್ರಜೆಗಳು ವ್ಯಾಪಾರ, ಉದ್ಯೋಗ ಹಾಗೂ ವೈದ್ಯಕೀಯ ಕಾರಣಗಳಿಂದ ಬೇರೆ ರಾಜ್ಯಗಳಿಗೆ ಪ್ರಯಾಣಿಸಿದರೆ ಹಾಗೂ 48 ಗಂಟೆಯೊಳಗೆ ವಾಪಸ್ಸಾದರೆ ಅಂಥವರಿಗೆ ವಿನಾಯಿತಿ ನೀಡಲಾಗುತ್ತಿದೆ.

* ಹೆಚ್ಚಿನ ಕೋವಿಡ್ -19 ಹರಡುವ ನಗರಗಳಿಂದ ಬರುವ ಪ್ರಯಾಣಿಕರು ಅಸಾಧಾರಣ ಮತ್ತು ಬಲವಾದ ಕಾರಣಗಳಾದ ಮಾನವ ಸಂಕಷ್ಟ, ಗರ್ಭಧಾರಣೆ, ಕುಟುಂಬದಲ್ಲಿ ಸಾವು, ಗಂಭೀರ ಅನಾರೋಗ್ಯ ಮತ್ತು 10 ವರ್ಷದೊಳಗಿನ ಮಕ್ಕಳೊಂದಿಗೆ ಪೋಷಕರು ಪ್ರಯಾಣಿಸುತ್ತಿದ್ದರೆ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ನಿಂದ ವಿನಾಯಿತಿ ಪಡೆಯಬಹುದು. ಆದಾಗ್ಯೂ, ಈ ಪ್ರಯಾಣಿಕರು 14 ದಿನಗಳ ಕಾಲ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ.

* ಎಲ್ಲಾ ಪ್ರಯಾಣಿಕರು ಆರೋಗ್ಯ ಸೇತು ಆಪ್ ಅನ್ನು ಇನ್‌ಸ್ಟಾಲ್ ಮಾಡುವುದು ಕಡ್ಡಾಯವಾಗಿದೆ. ಕೋವಿಡ್ ಇ-ಪಾಸ್ ಪೋರ್ಟಲ್‌ನಲ್ಲಿ ಅವರ ಆಗಮನಕ್ಕೆ ಕನಿಷ್ಠ 48 ಗಂಟೆಗಳ ಮೊದಲು ನೋಂದಾಯಿಸಿಕೊಳ್ಳಬೇಕು http://covid19epass.hp.gov.in

* ಸೇನೆ/ಸಿಎಪಿಎಫ್ ಸಿಬ್ಬಂದಿ ತಮ್ಮ ಅಧಿಕೃತ ಕರ್ತವ್ಯಕ್ಕೆ ಮರಳಿ ಸೇರಲು ಬಂದಿದ್ದರೆ ಇ -ಪಾಸ್‌ನಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ

* ರಾಜ್ಯಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕರು ಕೊವಿಡ್-19 ಸೋಂಕು ಪತ್ತೆಗೆ ರಾಪಿಡ್ ಆಂಟಿಜೆನಿಕ್ ಪರೀಕ್ಷೆ ಹಾಗೂ RT-PCR ಪರೀಕ್ಷೆಗೆ ಒಳಗಾಗುವುದು ಕಡ್ಡಾಯ.

* ಕೊರೊನಾವೈರಸ್ ಪರೀಕ್ಷಾ ವರದಿ ನಗೆಟಿವ್ ಬಂದ ಹೊರತಾಗಿಯೂ 14 ದಿನಗಳವರೆಗೂ ಕ್ವಾರೆಂಟೈನ್ ಆಗುವುದು.

* ನವೀಕರಿಸಿದ ಆರೋಗ್ಯ ಸೇತು ಆಪ್‌ನೊಂದಿಗೆ ಸಂಪರ್ಕಿಸಬಹುದಾದ ಫೋನ್ ಸಂಖ್ಯೆಗಳಿಲ್ಲದ ಪ್ರಯಾಣಿಕರು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ

* ಕೊವಿಡ್-19 ಸೋಂಕಿನ ಲಕ್ಷಣವಿಲ್ಲದ ವ್ಯಾಪಾರಿ ಅಥವಾ ಉದ್ಯೋಗಿಯು ತನ್ನ ಹಿಂತಿರುಗುವ ಟಿಕೆಟ್, ಅಲ್ಲಿ ಬುಕ್ ಮಾಡಿರುವ ಹೋಟೆಲ್ ಮತ್ತು ವ್ಯಾಪಾರಿ ಗುರುತಿನ ಚೀಟಿಯನ್ನು ಹೊಂದಿದ್ದರೆ ಕ್ವಾರೆಂಟೈನ್ ಆಗುವ ಅಗತ್ಯವಿಲ್ಲ.

* ಪ್ರಯಾಣಿಕರು ಐಸಿಎಂಆರ್ ಅರ್ಜಿಯನ್ನು ತುಂಬುವುದು.

English summary
Air India Shares State-Wise Coronavirus guidelines For Passengers: Look Here For More Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X