ಅಗ್ನಿಪಥ್ ಪ್ರತಿಭಟನೆ; ಎಚ್ಚರಿಕೆ ನೀಡಿದ ಏರ್ ಚೀಫ್ ಮಾರ್ಷಲ್
ನವದೆಹಲಿ, ಜೂ.18: ಅಗ್ನಿಪಥ್ ನೇಮಕಾತಿ ಯೋಜನೆಯ ವಿರುದ್ಧ ಯುವಕರು ಬೀದಿಗಿಳಿದಿದ್ದಾರೆ. ದೇಶದ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. "ಇಂತಹ ಹಿಂಸಾತ್ಮಕ ಹಿನ್ನಡೆಯನ್ನು ನಿರೀಕ್ಷಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನಂತರದ ದಿನಗಳಲ್ಲಿ ತಾವು ಹೆಚ್ಚಿನ ಬೆಲೆ ತೆರಬೇಕಾಗಬಹುದು" ಎಂದು ಉದ್ಯೋಗ ಆಕಾಂಕ್ಷಿಗಳಿಗೆ ಏರ್ ಚೀಫ್ ಮಾರ್ಷಲ್ ವಿ. ಆರ್. ಚೌಧರಿ ಎಚ್ಚರಿಕೆ ನೀಡಿದ್ದಾರೆ.
"ನಾವು ಈ ರೀತಿಯ ಹಿಂಸಾಚಾರವನ್ನು ಖಂಡಿಸುತ್ತೇವೆ. ಇದು ಪರಿಹಾರವಲ್ಲ. ಕೊನೆಯ ಹಂತವೆಂದರೆ ಪೊಲೀಸ್ ಪರಿಶೀಲನೆಯಾಗಿರುತ್ತದೆ. ಯಾರಾದರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರೆ ಅವರು ಪೊಲೀಸರಿಂದ ಕ್ಲಿಯರೆನ್ಸ್ ಪಡೆಯುವುದಿಲ್ಲ" ಎಂದು ವಾಯುಪಡೆಯ ಮುಖ್ಯಸ್ಥ (ಸಿಎಎಸ್) ವಿ. ಆರ್. ಚೌಧರಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
#EXCLUSIVE | Did the security and defence establishments expect this kind of backlash with the announcement of Agnipath scheme? IAF Chief Air Chief Marshal VR Chaudhari responds#AgnipathRecruitmentScheme #Agnipath #AgnipathScheme | @AbhishekBhalla7 pic.twitter.com/8nlDmcjJ73
— IndiaToday (@IndiaToday) June 18, 2022
Explainer: ಅಗ್ನಿಪಥ್ ಯೋಜನೆಗೆ ವಿರೋಧವೇಕೆ? ಪ್ರತಿಭಟನಾಕಾರರ ಬೇಡಿಕೆಗಳೇನು?
ಅಗ್ನಿಪಥ್ ಯೋಜನೆಯನ್ನು ಸಕಾರಾತ್ಮಕ ಹೆಜ್ಜೆ ಎಂದು ಶ್ಲಾಘಿಸಿದ ಏರ್ ಚೀಫ್ ಮಾರ್ಷಲ್ ಚೌಧರಿ, "ಯೋಜನೆ ಬಗ್ಗೆ ಕಾಳಜಿ ಇರುವವರು ಹತ್ತಿರದ ಸೇನಾ ಕೇಂದ್ರಗಳು, ವಾಯುಪಡೆ ಅಥವಾ ನೌಕಾ ನೆಲೆಗಳನ್ನು ಸಂಪರ್ಕಿಸಿ ತಮ್ಮ ಅನುಮಾನಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದು" ಎಂದರು.
"ಪ್ರತಿಭಟನಕಾರರು ಈಗ ಮಾಡಬೇಕಾಗಿರುವುದು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವುದು. ಯೋಜನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು. ನಂತರ ಯೋಜನೆಯ ಪ್ರಯೋಜನಗಳನ್ನು ಅವರೇ ನೋಡುತ್ತಾರೆ. ಇದು ಅವರ ಮನಸ್ಸಿನಲ್ಲಿರುವ ಎಲ್ಲಾ ಅನುಮಾನಗಳನ್ನು ನಿವಾರಿಸುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ಹೇಳಿದರು.
ಅಗ್ನಿಪಥ್ ಯೋಜನೆ: ವಯೋಮಿತಿ ಹೆಚ್ಚಿಸಿದ್ದೂ ತೊಂದರೆಯೇ, ಕಾರಣ?
"ಅಗ್ನಿಪಥ್ ಅಲ್ಪಾವಧಿಯ ನೇಮಕಾತಿ ಯೋಜನೆಯು ಕಳೆದ ಎರಡು ವರ್ಷಗಳಿಂದ ತಯಾರಿಕೆ ಹಂತದಲ್ಲಿದೆ. ಸಶಸ್ತ್ರ ಪಡೆಗಳ ನೇಮಕಾತಿ ವಯೋಮಿತಿಯನ್ನು 30 ರಿಂದ 25 ವರ್ಷಗಳಿಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ" ಎಂದು ಸಿಎಎಸ್ ವಿವರಿಸಿದ್ದಾರೆ.
#EXCLUSIVE | After four years what do these youth do? IAF Chief Air Chief Marshal VR Chaudhari responds#AgnipathRecruitmentScheme #Agnipath #AgnipathScheme | @AbhishekBhalla7 pic.twitter.com/BccTsMzQ9A
— IndiaToday (@IndiaToday) June 18, 2022
"ನಾಲ್ಕು ವರ್ಷಗಳ ಅಧಿಕಾರಾವಧಿಯ ನಂತರ ಬಿಡುಗಡೆಯಾದವರು ರಾಷ್ಟ್ರಕ್ಕೆ ಸೇವೆ ಸಲ್ಲಿಸಿರುತ್ತಾರೆ ಮಾತ್ರವಲ್ಲ. ಶಿಸ್ತು, ಪ್ರೇರಣೆ ಮತ್ತು ಸೇವೆಗಳ ತತ್ವಗಳನ್ನು ಅಳವಡಿಸಿಕೊಳ್ಳುತ್ತಾರೆ. ಸರ್ಕಾರ ಮತ್ತು ರಕ್ಷಣಾ ಸಂಸ್ಥೆಯು ಉದ್ಯೋಗಾಕಾಂಕ್ಷಿಗಳ ಆತಂಕವನ್ನು ನಿವಾರಿಸಲು ಮತ್ತು ವಿಶೇಷವಾಗಿ ಭವಿಷ್ಯದ ಬಗ್ಗೆ ಅವರ ಅಭದ್ರತೆಗೆ ಸಂಬಂಧಿಸಿದಂತೆ ಅವರ ಭಯವನ್ನು ಹೋಗಲಾಡಿಸಲು ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ" ಎಂದು ತಿಳಿಸಿದರು.
ಆದಾಗ್ಯೂ, ಯೋಜನೆಯನ್ನು ಹಿಂಪಡೆಯುವ ಪ್ರಯತ್ನವಿಲ್ಲ ಎಂದು ಅವರು ನೇರವಾಗಿ ಹೇಳದೆ ಸುಳಿವು ನೀಡಿದರು. ಅದನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿದ ನಂತರ ಬದಲಾವಣೆಗಳು ಅಗತ್ಯವಿದೆಯೇ ಅಥವಾ ಸುಧಾರಣೆ ಅಗತ್ಯವಿದೆಯೇ ಎಂದು ನಾವು ನೋಡುತ್ತೇವೆ ಎಂದು ಅವರು ಹೇಳಿದರು.
ಶುಕ್ರವಾರ ಚೌಧರಿ ಮಾತನಾಡಿ, "ಅಗ್ನಿಪಥ್ ಯೋಜನೆಯಡಿ ನೇಮಕಾತಿಗಾಗಿ ಭಾರತೀಯ ವಾಯುಪಡೆಯ ಆಯ್ಕೆ ಪ್ರಕ್ರಿಯೆಯು ಜೂನ್ 24 ರಿಂದ ಪ್ರಾರಂಭವಾಗಲಿದೆ" ಎಂದು ಹೇಳಿದ್ದರು. ಈ ವರ್ಷದ ಯೋಜನೆಯಡಿ ಸೇರ್ಪಡೆಗೊಳ್ಳಲು ಗರಿಷ್ಠ ವಯಸ್ಸಿನ ಮಿತಿಯನ್ನು 23ಕ್ಕೆ ಏರಿಸಿರುವುದನ್ನು ಸ್ವಾಗತಿಸಿದರು. ಈ ಕ್ರಮವು ಹೊಸ ಮಾದರಿಯ ನೇಮಕಾತಿಯಡಿಯಲ್ಲಿ ಹೆಚ್ಚಿನ ಸಂಖ್ಯೆಯ ಯುವಕರನ್ನು ನೋಂದಾಯಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದರು.
ಮಂಗಳವಾರ ಅಗ್ನಿಪಥ್ ಯೋಜನೆಯನ್ನು ಘೋಷಿಸಿದ ಸರ್ಕಾರ, 17.5 ಮತ್ತು 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇರಿಸಲಾಗುವುದು ಮತ್ತು ಅವರಲ್ಲಿ ಶೇಕಡ 25ರಷ್ಟು ಮಾತ್ರವೆ ಸೇವೆಗೆ ಮುಂದುವರಿಸಲಾಗುವುದು ಎಂದು ಹೇಳಿದ್ದರು.
ಯೋಜನೆಯ ವಿರುದ್ಧ ಪ್ರತಿಭಟಿಸುತ್ತಿರುವವರು ಸೇವೆಯ ಭದ್ರತೆ ಬಗ್ಗೆ ಅತೃಪ್ತಿ ಹೊಂದಿರುವುದರಿಂದ ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ಮುಂಚಿತವಾಗಿ ಬಿಡುಗಡೆಯಾದವರಿಗೆ ಯಾವುದೇ ಪಿಂಚಣಿ ನಿಬಂಧನೆಗಳಿಲ್ಲ ಮತ್ತು ಈಗ ಅವರಲ್ಲಿ ಅನೇಕರನ್ನು ಅನರ್ಹರನ್ನಾಗಿ ಮಾಡುವ ಅಪಾಯವನ್ನು ಹೊರಹಾಕಿದ್ದಾರೆ.