ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ ಎಂಬುದು ದೇಶದ ಜನರ ಧ್ವನಿ : ರಾಹುಲ್ ಗಾಂಧಿ
ನವದೆಹಲಿ, ಮಾರ್ಚ್ 18 : 'ಬಿಜೆಪಿ ಮತ್ತು ಆರ್ಎಸ್ಎಸ್ ಅಧಿಕಾರಕ್ಕಾಗಿ ಕೌರವರಂತೆ ಹೋರಾಟ ಮಾಡುತ್ತಾರೆ. ಕಾಂಗ್ರೆಸ್ ಪಾಂಡವರಂತೆ ಸತ್ಯಕ್ಕಾಗಿ ಹೋರಾಟ ಮಾಡುತ್ತದೆ' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ಕಾಂಗ್ರೆಸ್ ಪಕ್ಷದ 84ನೇ ಮಹಾಧಿವೇಶನ ನಡೆಯುತ್ತಿದೆ. ಅಧಿವೇಶನದ ಕೊನೆಯ ದಿನವಾದ ಭಾನುವಾರ ರಾಹುಲ್ ಗಾಂಧಿ ಅವರು ಸಮಾರೋಪ ಭಾಷಣ ಮಾಡಿದರು.
ಇದು ಹೊಸ ಅಧ್ಯಾಯದ ಆರಂಭ, ಮಹಾಧಿವೇಶನದಲ್ಲಿ ಸೋನಿಯಾ ರಣಕಹಳೆ
ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ...
Newest FirstOldest First
ಗೌರಿ ಲಂಕೇಶ್, ಎಂ.ಎಂ.ಕಲಬುರಗಿ ಹತ್ಯೆ
They told Gauri Lankesh and Kalburgi, question us and you will die. They tell our honest businessman to shut up and allow corrupt officers to extort their hard earned money. They tell our farmers to work for nothing: Congress President Rahul Gandhi #CongressPlenarySession pic.twitter.com/zlXwBsQmxl
— ANI (@ANI) March 18, 2018
ಜಿಎಸ್ಟಿ ಬಗ್ಗೆ ಸಂಸತ್ನಲ್ಲಿ ಪ್ರಶ್ನಿಸಿದಾಗ ಪ್ರಧಾನಿಗಳು ನಮ್ಮ ಗಮನ ಬೇರೆ ಕಡೆ ಸೆಳೆದರು. ಗಬ್ಬರ್ ಸಿಂಗ್ ಟ್ಯಾಕ್ಸ್ ಬಗ್ಗೆ ಮಾತನಾಡಲು ಅವರು ಸಿದ್ಧರಿಲ್ಲ
ಭಾರತ ದೇಶ ಸುಳ್ಳನ್ನು ನಂಬಲಿದೆಯೇ?, ಅಧಿಕಾರ ಮತ್ತು ಭಯದಿಂದಾಗಿ ಇಂದು ದೇಶದಲ್ಲಿ ಬಲವಂತದ ಮತಾಂತರ ಆಗುತ್ತಿದೆ.
ಬಿಜೆಪಿಯಂತೆ ಕಾಂಗ್ರೆಸ್ ಪಕ್ಷ ಎಂದಿಗೂ ಇರುವುದಿಲ್ಲ.ಕೊಲೆ ಪ್ರಕರಣದಲ್ಲಿ ಆರೋಪಿಯಾದವನನ್ನು ಪಕ್ಷದ ಅಧ್ಯಕ್ಷ ಎಂದು ಮಾಡಲಾಗಿದೆ. ದೇಶದ ಹಲವಾರು ಜನರು ಇದನ್ನು ಒಪ್ಪಿಕೊಂಡಿದ್ದಾರೆ.
ಬಿಜೆಪಿ ದೇಶದಲ್ಲಿ ಭಯವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ನ್ಯಾಯಕ್ಕಾಗಿ ಜನರ ಮುಂದೆ ಬಂದರು.
ಜನರ ಕೈಯಲ್ಲಿ ಉದ್ಯೋಗವಿಲ್ಲ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಮೋದಿ ಜಿ ಯೋಗ ಮಾಡೋಣ ಬನ್ನಿ ಎಂದು ಹೇಳುತ್ತಾರೆ.
ನಾವು ಜನಗತ್ತಿನಲ್ಲಿ ಅತ್ಯಂತವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿದ್ದೇವೆ. ಆದರೆ, ದೇಶದ ಲಕ್ಷಾಂತರ ಯುವಕರು ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
Advertisement
English summary
The All India Congress Committee (AICC) president Rahul Gandhi addressed Congress Plenary Session on Sunday, March 18, 2018. Here are the highlights of the Rahul Gandhi speech.