ಮಹಾರಾಷ್ಟ್ರ ಬೆಳವಣಿಗೆ: ಸುಬ್ರಮಣಿಯನ್ ಸ್ವಾಮಿ ಬೇಸರದ ಟ್ವೀಟ್
ನವದೆಹಲಿ, ನವೆಂಬರ್ 23: ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, 'ಬೇಸರದಿಂದ' ಟ್ವೀಟ್ ಮಾಡಿದ್ದಾರೆ.
"ನಾನು ಮೊದಲಿನಿಂದಲೂ ಹೇಳುತ್ತ ಬಂದಿದ್ದೆ. ನನ್ನ ಮಾತನ್ನು ಕೇಳಿದ್ದರೆ ಹಿಂದುತ್ವವನ್ನು ಬೆಂಬಲಿಸುವ ಶಕ್ತಿಗಳು ಒಡೆಯುತ್ತಿರಲಿಲ್ಲ. ಹಿಂದುತ್ವಕ್ಕಾಗಿ ಮುಖ್ಯಮಂತ್ರಿ ಹುದ್ದೆಯನ್ನೂ ತ್ಯಾಗ ಮಾಡುವ ಮನಸ್ಥಿತಿ ಇರಬೇಕಿತ್ತು. ಆದರೆ ಈಗ ಬೇರೆ ದಾರಿ ಇಲ್ಲ. ಹಿಂದುತ್ವವನ್ನು ಉಳಿಸಲು ಒಡೆಯುವವರನ್ನೇ ಒಡೆಯುವುದು ಅನಿವಾರ್ಯವಾಗಿದೆ. ಆದರೆ ಬೇಸರವಾಗುತ್ತಿದೆ" ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
LIVE Updates: ಶರದ್ ಪವಾರ್ ಮೇಲೆ ನಂಬಿಕೆ ಇದೆ: ಕಾಂಗ್ರೆಸ್
"ದೇಶಕ್ಕೆ ಸಂದೇಶ: ನೀವು ಹಿಂದುತ್ವವನ್ನು ಒಡೆಯಲು ಮುಂದಾದರೆ ನೀವೇ ಒಡೆಯುತ್ತೀರಿ" ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಬೆಳಗ್ಗಿನ ಜಾವ ನಡೆದ ಸಿನಿಮೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿಯಾಗಿ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದರು.
ಅಂದು ಮುಫ್ತಿ,ಇಂದು ಶರದ್ ಪವಾರ್: ಅಧಿಕಾರಕ್ಕಾಗಿ, ಮುಂದೆ ಓವೈಸಿಯೂ ಬಿಜೆಪಿಗೆ ಓಕೆ?
ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದುಕೊಂಡವರಿಗೆ ಮಹಾರಾಷ್ಟ್ರದ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಅಚ್ಚರಿಯನ್ನುಂಟು ಮಾಡಿತ್ತು.