ಬತ್ತುತ್ತಿವೆ ನದಿಗಳು, ಪ್ರವಾಹದ ಹೊಸ ಸಂಕಷ್ಟದಲ್ಲಿ ಕೇರಳ
ತಿರುವನಂತಪುರ, ಸೆಪ್ಟೆಂಬರ್ 13: ಭಾರಿ ಪ್ರವಾಹದಿಂದ ತತ್ತರಿಸಿಹೋದ ಕೇರಳದಲ್ಲಿ ಈಗ ಹೊಸ ಸಂಕಟ ಎದುರಾಗಿದೆ. ಇದ್ದಕ್ಕಿಂದ್ದಂತೆ ನದಿ, ಹಳ್ಳ, ಬಾವಿಗಳು ಇಂಗಿಹೋಗುತ್ತಿವೆ.
ಭಾರಿ ಮಳೆಯಿಂದ ಪ್ರವಾಹಬಂದು, ವರ್ಷಾನುಗಟ್ಟಲೆ ಹರಿಯದ, ನದಿ, ತೊರೆ, ಹಳ್ಳಗಳೆಲ್ಲಾ ತುಂಬು ಹರಿದಿದ್ದ ಕೇರಳದಲ್ಲಿ ಪ್ರವಾಹ ಇಳಿದ ಕೆಲವೇ ದಿನಗಳಲ್ಲಿ ಈ ಹೊಸ ಸಂಕಷ್ಟ ಎದುರಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ನೀರಿನಿಂದ ತುಂಬಿ ತುಳುಕುತ್ತಿದ್ದ ನದಿ, ಹಳ್ಳಗಳು ಬತ್ತಿಹೋಗುತ್ತಿವೆ.
ಕೇರಳ ಪ್ರವಾಹ: ಎಂಟು ದಿನ ಜತೆಗಿದ್ದರೂ ಇವರ ಗುರುತು ಯಾರಿಗೂ ಸಿಗಲಿಲ್ಲ!
ಭೂಮಿಯಲ್ಲಿ ಪಾದರಸ ಪ್ರಮಾಣ ಏಕಾಏಕಿ ಹೆಚ್ಚಾಗಿದೆ ಹಾಗಾಗಿ ನದಿಗಳು, ಬಾವಿ, ಹಳ್ಳಗಳೆಲ್ಲಾ ಬತ್ತಿ ಹೋಗುತ್ತಿವೆ ಎಂದು ಅಂದಾಜಿಸಲಾಗಿದ್ದು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ ತನಿಖೆಯ ಜವಾಬ್ದಾರಿಯನ್ನು ರಾಜ್ಯ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಹವಾಮಾನ ಇಲಾಖೆಗೆ ವಹಿಸಿದೆ.
ಕೇರಳದಂತೆ ರಾಜ್ಯದಲ್ಲಿ ಇಲಿಜ್ವರ ಭೀತಿ ಇಲ್ಲ : ಆರೋಗ್ಯ ಇಲಾಖೆ
ಅತಿವೃಷ್ಠಿಯ ನಂತರ ಏಕಾ-ಏಕಿ ಹೀಗೆ ನೀರು ಬತ್ತಿಹೋಗುತ್ತಿರುವ ಕಾರಣ ವಿಚಿತ್ರ ಹುಳ್ಳುಗಳು ಭಾರಿ ಸಂಖ್ಯೆಯಲ್ಲಿ ಎಲ್ಲ ಹಳ್ಳ, ಬಾವಿಗಳಲ್ಲಿ ಕಂಡುಬರುತ್ತಿದ್ದು, ಸ್ಥಳೀಯರನ್ನು ಗಾಬರಿಗೊಳಿಸಿವೆ. ಆದರೆ ಕೆಲವುಕಡೆ ಪ್ರವಾಹದ ನಂತರ ಮಣ್ಣಿನ ಹುಳಗಳು ನಾಪತ್ತೆಯೇ ಆಗಿಬಿಟ್ಟಿವೆ.
ಪ್ರವಾಹದ ಲಾಭ ಪಡೆದ ಮಿಷನರಿಗಳು: ಎಗ್ಗಿಲ್ಲದೆ ಸಾಗಿದೆ ಮತಾಂತರದ ಹಾವಳಿ
ಕೇರಳದ ಪೆರಿಯಾರ್, ಭಾರತ್ಪೂಜಾ, ಪಂಪಾ, ಕಬನಿ ಸೇರಿದಂತೆ ಹಲವು ನದಿಗಳು ಅತಿಯಾದ ಮಳೆಯಿಂದಾಗಿ ಕೆಲವು ದಿನಗಳ ಹಿಂದೆಯಷ್ಟೆ ರೌದ್ರಾವತಾರವಾಗಿ ಹರಿದಿದ್ದವು. ಆದರೆ ಏಕಾ-ಏಕಿ ಈಗ ಬತ್ತಿಹೋಗುತ್ತಿವೆ. ಇದು ಸರ್ಕಾರವನ್ನೇ ಗಾಬರಿಗೊಳಿಸಿದೆ.