ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಮರನಾಥ ಯಾತ್ರಿಗಳ ಮೇಲೆ ದಾಳಿಯ ಮಾಸ್ಟರ್ ಮೈಂಡ್ ಉಗ್ರನ ಹತ್ಯೆ
ಶ್ರೀನಗರ, ಸೆಪ್ಟೆಂಬರ್ 14 : ಅಮರನಾಥ ಯಾತ್ರಿಕರ ಮೇಲಿನ ಗುಂಡಿನ ದಾಳಿಯ ಮಾಸ್ಟರ್ ಮೈಂಡ್ ಉಗ್ರನನ್ನು ಭಾರತೀಯ ಸೇನೆ ಪಡೆ ಹತ್ಯೆ ಮಾಡಿದೆ.
ಅಮರನಾಥ ಯಾತ್ರಿಗಳ ಮೇಲೆ ದಾಳಿ: ಮೂವರು ಶಂಕಿತ ಉಗ್ರರ ಬಂಧನ
ಜಮ್ಮು ಕಾಶ್ಮೀರದ ನೌಗಮ್ ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಯ ಕಮಾಂಡರ್ ಅಬು ಇಸ್ಮಾಯಿಲ್ ನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
26 ವರ್ಷ ವಯಸ್ಸಿನ ಅಬು ಪಾಕಿಸ್ತಾನಿಯವನಾಗಿದ್ದು, ಎರಡು ವರ್ಷಗಳ ಹಿಂದೆ ಭಾರತದೊಳಗೆ ಪ್ರವೇಶಿಸಿ ಇತ್ತೀಚೆಗೆ ಕಾಶ್ಮೀರ ಕಣಿವೆಯಲ್ಲಿ ಅವರ ಗುಂಪಿನ ಭಯೋತ್ಪಾದನಾ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಂಡಿದ್ದನು.
ಅನಂತ್ ನಾಗ್ ಜಿಲ್ಲೆಯ ಬಂಟಿಗು ಬಳಿ ಉಗ್ರರು ನಡೆಸಿದ ದಾಳಿಯಲ್ಲಿ 8 ಮಂದಿ ಅಮರನಾಥ್ ಯಾತ್ರಿಕರು ಬಲಿಯಾಗಿದ್ದರು. ಇಬ್ಬರು ಪೊಲೀಸರು ಸೇರಿ ಒಟ್ಟು 19 ಮಂದಿ ಗಾಯಗೊಂಡಿದ್ದರು
Comments
English summary
Abu Ismail, a Lashkar-e-Taiba terrorist who is believed to have planned the attack in July on Amarnath pilgrims, has been killed in a brief encounter with the police in Nowgam in Srinagar.
Story first published: Thursday, September 14, 2017, 18:17 [IST]