ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಬ್ಸಿಡಿ ಸೀಮೆಎಣ್ಣೆ , ಅಟಲ್ ಪಿಂಚಣಿ ಸವಲತ್ತುಗಳಿಗೆ ಆಧಾರ್ ಕಡ್ಡಾಯ

|
Google Oneindia Kannada News

ನವದೆಹಲಿ, ಜೂನ್ 04 : ಸಬ್ಸಿಡಿ ಸೀಮೆಎಣ್ಣೆ ಹಾಗೂ ಅಟಲ್ ಪಿಂಚಣಿ ಯೋಜನೆ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ಎರಡೂ ಸೌಲಭ್ಯಗಳನ್ನು ಪಡೆಯಲು ಇನ್ನು ಮುಂದೆ ಆಧಾರ್ ಕಾರ್ಡ್ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೀಮೆಎಣ್ಣೆ ಸಬ್ಸಿಡಿಗಾಗಿ ಕಾರ್ಡ್ ಹೊಂದಲು ಸೆಪ್ಟೆಂಬರ್ 30 ಕೊನೆ ದಿನವಾಗಿದೆ. ಹಾಗೂ ಅಟಲ್ ಪಿಂಚಣಿ ಯೋಜನೆ ಪ್ರಯೋಜನಗಳನ್ನು ಪಡೆಯಲು ಆಧಾರ್ ಹೊಂದಲು ಅಂತಿಮ ದಿನವನ್ನು ಜೂನ್ 15ಕ್ಕೆ ನಿಗದಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಐಟಿ ರಿಟರ್ನ್ಸ್, ಪಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯ]

Aadhaar mandatory for subsidy on kerosene purchase, Atal Pension Yojana

ಸೀಮೆಎಣ್ಣೆ ಸಬ್ಸಿಡಿ ಪಡೆಯಲು ಅಥವಾ ಪಿಂಚಣಿ ಯೋಜನೆಯ ಸವಲತ್ತುಗಳನ್ನು ಹೊಂದಲು ಇನ್ನು ಮುಂದೆ ಆಧಾರ್ ಕಾರ್ಡ್ ಹೊಂದಿರುವುದು ಅಗತ್ಯವಾಗಿರುತ್ತದೆ.

ಕಾರ್ಡ್ ಹೊಂದಿಲ್ಲದವರು ಈ ಮೇಲೆ ನಿಗದಿಗೊಳಿಸಲಾದ ದಿನಾಂಕದೊಳಗೆ ಅವುಗಳನ್ನು ಪಡೆಯಬಹುದು ಅಥವಾ ಹೊಸದಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು ಎಂದು ಸೂಚನೆಯಲ್ಲಿ ತಿಳಿಸಿದೆ.

ಆಧಾರ್ ಕಾರ್ಡ್ ಲಭಿಸುವ ವರೆಗೆ ಪಡಿತರ ಚೀಟಿ, ಡ್ರೈವಿಂಗ್ ಲೈಸನ್ಸ್, ಮತದಾರರ ಗುರುತಿನ ಚೀಟಿ, ಕಿಸಾನ್ ಭಾವಚಿತ್ರದೊಂದಿಗೆ ಪಾಸ್‍ಬುಕ್, ಉದ್ಯೋಗ ಚೀಟಿ ಇವುಗಳನ್ನು ಮಹಾತ್ಮ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್ ಆರ್‍ ಇಜಿಎಸ್) ಅಡಿ ನೀಡಲಾಗುತ್ತದೆ.

ಹಾಗೂ ಪತ್ರಾಂಕಿತ (ಗೆಜೆಟೆಡ್) ಅಧಿಕಾರಿ ಅಥವಾ ತಹಸೀಲ್ದಾರ್ ನೀಡುವ ಪ್ರಮಾಣ ಪತ್ರವನ್ನು ಈ ಸೌಲಭ್ಯಗಳಿಗಾಗಿ ಗುರುತು ದೃಢೀಕರಣವಾಗಿ ಪರಿಗಣಿಸಲಾಗುವುದು.

ಸಹಾಯಧನ ಸೋರಿಕೆಯನ್ನು ತಡೆಗಟ್ಟಲು ಹಾಗೂ ಅರ್ಹ ಫಲಾನುಭವಿಗಳಿಗೆ ಸೌಲಭ್ಯ-ಸವಲತ್ತುಗಳು ದಕ್ಕುವಂತಾಗಲು ಈ ಎರಡು ಯೋಜನೆಗಳಿಗೆ ಆಧಾರ್ ಕಾರ್ಡ್‍ ನ್ನು ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

English summary
The Aadhaar card has now been made mandatory for government subsidy on purchase of kerosene and benefits of Atal Pension Yojana.Those availing kerosene subsidy or contributing for the pension scheme will now be required to furnish proof of possession of Aadhaar number or undergo the enrolment process to get the benefits, officials said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X