ಕೇರಳದ ವಯನಾಡಿನ ಬಸ್ ನಿಲ್ದಾಣದಲ್ಲಿ ಜನ ಬೆಚ್ಚಿದ್ದೇಕೆ?
ವಯನಾಡು, ಜೂ.18: ದೇವರ ನಾಡು ಕೇರಳ ವಯನಾಡು ಜಿಲ್ಲೆಯ ಪುಟ್ಟ ಊರು ಕಲ್ಪೆಟ್ಟದ ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳ್ಳಗೆ ಪ್ರಸಾರವಾದ ಸಿನಿಮಾ ನೋಡಿ ಅಲ್ಲಿದ್ದ ಮಹಿಳೆಯರು ಬೆಚ್ಚಿ ಓಟಕಿತ್ತಿದ್ದಾರೆ, ಪುರುಷರು ಕಂಗಾಲಾಗಿ ಅತ್ತಿಂದಿತ್ತ ನೋಡಿದ್ದಾರೆ, ಮಕ್ಕಳು ಕುತೂಹಲದಿಂದ ಟಿವಿ ಕಡೆಗೆ ನೋಡತೊಡಿಗಿದ್ದಾರೆ. ಇಷ್ಟಕ್ಕೂ ಸಾರ್ವಜನಿಕರಿಗೆ ಇಷ್ಟೆಲ್ಲ ಸಮಸ್ಯೆ ಏಕೆ ಉಂಟಾಯಿತು? ಇಲ್ಲಿದೆ ಉತ್ತರ.
ಕಲ್ಪೆಟ್ಟದಲ್ಲಿ
ಬಸ್
ನಿಲ್ದಾಣದಲ್ಲಿ
ಎಂದಿನಂತೆ
ಬಸ್
ಗಾಗಿ
ಕಾದಿದ್ದ
ಜನರಿಗೆ
ಬಸ್
ನಿಲ್ದಾಣದಲ್ಲಿದ್ದ
ಟಿವಿಗಳು
ಶಾಕ್
ನೀಡಿವೆ.
ಎರಡು
ದಿನಗಳ
ಹಿಂದೆ
ಎರಡು
ಟಿವಿಗಳಲ್ಲಿ
ಬೆಳಗ್ಗೆ
10.30ರ
ಸುಮಾರಿಗೆ
ವಯಸ್ಕರ
ಸಿನಿಮಾವನ್ನು
ಪ್ರಸಾರ
ಮಾಡಲಾಗಿದೆ.
ಸಾರ್ವಜನಿಕ
ಸ್ಥಳದಲ್ಲಿ
ಇಂಥ
ಪ್ರಮಾದವಾದರೂ
ಎಚ್ಚೆತ್ತುಕೊಳ್ಳದ
ಆಡಳಿತ
ಅಧಿಕಾರಿಗಳು
ಸುಮಾರು
30
ನಿಮಿಷಗಳ
ಕಾಲ
ಚಿತ್ರ
ಓಡಲು
ಬಿಟ್ಟಿದ್ದಾರೆ.
ಬಸ್ ನಿಲ್ದಾಣದಲ್ಲಿದ್ದ ಜನರು ಭಾರಿ ಮುಜುಗರ ಅನುಭವಿಸಿದ್ದಾರೆ. ಕೆಲವರು ಟಿವಿ ಪರದೆ ಮುಚ್ಚಲು ಯತ್ನಿಸಿದರು. ಟಿವಿ ಆಪರೇಟರ್ ರೂಮ್ ಲಾಕ್ ಆಗಿತ್ತು. ಟಿವಿ ಸ್ವಿಚ್ ಸಿಗುತ್ತಿರಲಿಲ್ಲ. ಕೊನೆಗೆ ಕೇಬಲ್ ಕಟ್ ಮಾಡಬೇಕಾಯಿತು. ಮಹಿಳೆಯರಂತೂ ಬಸ್ ಮರೆತು ನಿಲ್ದಾಣದಿಂದ ಕಾಲ್ಕಿತ್ತರು ಎಂದು ಪ್ರತ್ಯಕ್ಷ ದರ್ಶಿಗಳು ತಮ್ಮ ಅನುಭವವನ್ನು ಗುರುವಾರ ಹೇಳಿಕೊಂಡಿದ್ದಾರೆ.
ಕೊನೆಗೂ ಬಸ್ ನಿಲ್ದಾಣದ ನಿರ್ವಾಹಕರು ಎಚ್ಚೆತ್ತುಕೊಂಡು, ಕೇಬಲ್ ಆಪರೇಟರ್ ನನ್ನು ಕಂಡು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳೀಯ ಕೇಬಲ್ ಆಪರೇಟರ್ 38 ವರ್ಷ ವಯಸ್ಸಿನ ಮನ್ಜೂರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಐಪಿಸಿ ಸೆಕ್ಷನ್ 292, ಮಹಿಳೆಯರನ್ನು ಕೆಟ್ಟದಾಗಿ ಪ್ರತಿನಿಧಿಸುವ ನಿಯಂತ್ರಣ ಕಾಯ್ದೆ, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಉಲ್ಲಂಘನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪ ಸಾಬೀತಾದರೆ ಕನಿಷ್ಠ 2 ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.
ವಿಚಾರಣೆ ವೇಳೆ ಈ ಬಗ್ಗೆ ಮಾತನಾಡಿದ ಮನ್ಜೂರ್, ಅವಸರದಲ್ಲಿ ಯಾವುದೋ ಪೆನ್ ಡ್ರೈವ್ ಹಾಕಿಬಿಟ್ಟೆ ಅನ್ಸುತ್ತೆ, ನಾನು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ ಎಂದಿದ್ದಾನೆ.