ಕೇಂದ್ರದ ದಿಟ್ಟ ಹೆಜ್ಜೆ: ಬಾಲಾಪರಾಧ ಕಾನೂನಿನಲ್ಲಿ ತಿದ್ದುಪಡಿ
ನವದೆಹಲಿ, ಮೇ 08: ಬಾಲಾಪರಾಧ ಕಾನೂನಿನಲ್ಲಿ ಕೇಂದ್ರ ಸರ್ಕಾರ ಮಹತ್ತರ ಬದಲಾವಣೆ ಮಾಡಿದ್ದಿ ಇದಕ್ಕೆ ಸಂಬಂಧಿಸಿದ ವಿಧೇಯಕ ತಿದ್ದುಪಡಿ ಮಾಡಲಾಗಿದೆ. ಘೋರ ಅಪರಾಧಗಳನ್ನು ಎಸಗಿದ 16ರಿಂದ 18 ವಯಸ್ಸಿನೊಳಗಿನ ಮಕ್ಕಳನ್ನೂ ವಯಸ್ಕರಂತೆ ಪರಿಗಣಿಸಿ ವಿಚಾರಣೆಗೆ ಒಳಪಡಿಸಬಹುದು ಎಂಬುದು ವಿಧೇಯಕದ ಪ್ರಮುಖ ಅಂಶ.
ಅಮಾಯಕ ಮಕ್ಕಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ವಿಧೇಯಕದ 7ನೇ ಕಲಂ ಅನ್ನು ತೆಗೆದುಹಾಕಲು ಸರ್ಕಾರ ಒಪ್ಪಿದ ಬಳಿಕ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.["ಕುಡಿದು ವಾಹನ ಚಾಲನೆ, ಸೂಸೈಡ್ ಬಾಂಬರ್ ಗೆ ಸಮ"]
ಬದಲಾದ
ವಿಧೇಯಕದ
ಹೈಲೈಟ್ಸ್
ಗಳು?
*
ಬಾಲ
ನ್ಯಾಯ
ಕಾಯ್ದೆ,
2000ರ
ಬದಲಾಗಿ
ಈ
ವಿಧೇಯಕ
ಕಾಣಿಸಿಕೊಳ್ಳಲಿದೆ.
*
ಘೋರ
ಅಪರಾಧ
ಎಸಗಿದರೆ
16
ರಿಂದ
18ರೊಳಗಿನವರನ್ನೂ
ವಯಸ್ಕರಂತೆ
ಪರಿಗಣಿಸಿ
ವಿಚಾರಣೆ
ನಡೆಸಲು
ಅನುಮತಿ
ನೀಡುತ್ತದೆ.
*
ದೇಶದ
ಪ್ರತಿ
ಜಿಲ್ಲೆಯಲ್ಲೂ
ಬಾಲ
ನ್ಯಾಯ
ಮಂಡಳಿ(ಜೆಜೆಬಿ)
ಮತ್ತು
ಮಕ್ಕಳ
ಕ್ಷೇಮಾಭಿವೃದ್ಧಿ
ಸಮಿತಿ
ರಚನೆಗೆ
ಅವಕಾಶ.
*
ಬಾಲಾರೋಪಿಯ
ಪ್ರಾಥಮಿಕ
ತನಿಖೆ
ನಡೆಸುವ
ಜೆಜೆಬಿ,
ವ್ಯಕ್ತಿಯನ್ನು
ಪುನರ್ವಸತಿ
ಕೇಂದ್ರಕ್ಕೆ
ಕಳುಹಿಸಬೇಕೋ,
ವಯಸ್ಕನಂತೆ
ವಿಚಾರಣೆಗೊಳಪಡಿಸಬೇಕೋ
ಎಂಬುದನ್ನು
ನಿರ್ಧರಿಸುತ್ತದೆ.[ಆತ್ಮಹತ್ಯೆಗೆ
ಯತ್ನಿಸುವುದು
ಇನ್ನು
ಅಪರಾಧವಲ್ಲ!]
*
ದತ್ತು
ತೆಗೆದುಕೊಳ್ಳುವ
ಹೆತ್ತವರ
ಅರ್ಹತೆ
ಮತ್ತು
ದತ್ತು
ಪ್ರಕ್ರಿಯೆಯನ್ನು
ಕೂಡ
ವಿಧೇಯಕದಲ್ಲಿ
ವಿವರಿಸಲಾಗಿದೆ.
*
ಮಕ್ಕಳಿಗೆ
ಮಾದಕ
ದ್ರವ್ಯ
ನೀಡುವುದು
ಮತ್ತು
ಮಕ್ಕಳ
ಅಪಹರಣ
ಅಥವಾ
ಮಾರಾಟಕ್ಕೆ
ದಂಡ
ವಿಧಿಸುವ
ಬಗ್ಗೆಯೂ
ವಿಧೇಯಕದಲ್ಲಿದೆ.
ನಿರ್ಭಯಾ
ಪ್ರಕರಣವೇ
ಬದಲಾವಣೆ
ಮೂಲ
2012ರ
ಡಿ.16ರಂದು
ದೆಹಲಿಯಲ್ಲಿ
ನಡೆದ
ವಿದ್ಯಾರ್ಥಿನಿಯ
ಸಾಮೂಹಿಕ
ಅತ್ಯಾಚಾರ
ಮತ್ತು
ಕೊಲೆ
ಪ್ರಕರಣ
ವಿಧೇಯಕ
ಬದಲಾವಣೆಗೆ
ಮುನ್ನುಡಿ
ಬರೆಯಿತು.
ಅಂದು
ನಿರ್ಭಯಾ
ಮೇಲೆ
ಸಾಮೂಹಿಕ
ಅತ್ಯಾಚಾರವೆಸಗಿದವರಲ್ಲಿ
ಒಬ್ಬ
ಬಾಲಕನೂ
ಸೇರಿದ್ದ.
ಉಳಿದ
ಆರೋಪಿಗಳಿಗೆ
ಗಲ್ಲುಶಿಕ್ಷೆಯಾದರೆ,
ಬಾಲಕನನ್ನು
3
ವರ್ಷ
ಪುನರ್ವಸತಿ
ಕೇಂದ್ರಕ್ಕೆ
ಕಳುಹಿಸಲಾಯಿತು.
ಇದು
ದೇಶಾದ್ಯಂತ
ಜನರ
ಆಕ್ರೋಶಕ್ಕೆ
ಕಾರಣವಾಗಿತ್ತು.
ಇಂಥ
ಘೋರ
ಅಪರಾಧವೆಸಗುವ
ಹದಿವಯಸ್ಕರನ್ನೂ
ವಯಸ್ಕರಂತೆ
ಪರಿಗಣಿಸಿ
ವಿಚಾರಣೆ
ನಡೆಸಬೇಕು
ಎಂಬ
ಕೂಗು
ಕೇಳಿಬಂದಿತ್ತು.
ಹೊಸ ಕಾನೂನಿನಿಂದಾಗಿ ಮಕ್ಕಳ ಹಕ್ಕುಗಳ ದುರ್ಬಳಕೆ ಹಾಗೂ ಉಲ್ಲಂಘನೆಯಾಗುವ ಸಾಧ್ಯತೆಯಿದೆ ಎಂದ ಪ್ರತಿಪಕ್ಷಗಳ ಆರೋಪ ಮಾಡಿವೆ. ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ, ಸಂತ್ರಸ್ತರಿಗೆ ನ್ಯಾಯ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ನಡುವೆ ಸಮತೋಲನ ಕಾಪಾಡಿಕೊಳ್ಳಲು ಇಂಥ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.