ಹೊಗೇನಕಲ್ ಬಳಿ ಕಂದಕಕ್ಕೆ ಬಸ್ ಉರುಳಿ 7 ಸಾವು
ಧರ್ಮಪುರಿ, ಜ. 20: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಗೇನಕಲ್ ಬಳಿ ಕಂದಕಕ್ಕೆ ಮಂಗಳವಾರ ಮಧ್ಯಾಹ್ನ ಸುಮಾರು 1. 20 ಗಂಟೆ ಸಮಯದಲ್ಲಿ ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ ಉರುಳಿ ಬಿದ್ದಿದೆ. ಈ ಅಪಘಾತದಲ್ಲಿ ಏಳು ಜನ ಮೃತಪಟ್ಟಿದ್ದಾರೆ.
ಬೆಟ್ಟದ ಮೇಲಿನ ರಸ್ತೆಯಲ್ಲಿ ಬರುತ್ತಿದ್ದ ಬಸ್ ಸುಮಾರು 15 ಅಡಿ ಆಳದ ಕಂದಕ್ಕೆ ಉರುಳಿದೆ. ಈ ರಸ್ತೆಯ ತಿರುವಿನಲ್ಲಿಯೇ ಅಪಾಯಕಾರಿ ಕಂದಕ ಇದ್ದ ಕಾರಣ ಬಿದ್ದ ಬಸ್ ಸುಮಾರು 100 ಅಡಿಗಳಷ್ಟು ಕೆಳಗೆ ಉರುಳಿಹೋಗಿದೆ. [ಬೈಕ್ ವ್ಹೀಲಿಂಗ್ ಮಾಡುತ್ತ ಕಾರಿಗೆ ಗುದ್ದಿದ ಯುವಕ]
ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಹೆಚ್ಚಿನ ಅನಾಹುತ ತಡೆದಿದೆ. 108 ಆ್ಯಂಬುಲೆನ್ಸ್ ವಾಹನವು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದೆ. ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. [ಬ್ರೇಕ್ ಫೇಲ್ : ನಾಲ್ವರ ಬಲಿ ಪಡೆದ ಬಿಎಂಟಿಸಿ ಬಸ್]
ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಉಳಿದವರು ಚಿಕಿತ್ಸೆಗಾಗಿ ಸಾಗಿಸುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಸುಮಾರು 44 ಜನ ಗಾಯಗೊಂಡಿದ್ದಾರೆ. ಅವರಿಗೆ ಧರ್ಮಪುರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. [ರೈಲಿಗೆ ಶಾಲಾ ವಾಹನ ಡಿಕ್ಕಿ : 5 ಮಕ್ಕಳ ಸಾವು]