ಪಾಕಿಸ್ತಾನದ ಜೈಲಿನಲ್ಲಿ 6 ಭಾರತೀಯ ಕೈದಿಗಳು ಸಾವು
ನವದೆಹಲಿ, ಅಕ್ಟೋಬರ್ 07: ಪಾಕಿಸ್ತಾನದ ವಶದಲ್ಲಿದ್ದ ಐವರು ಮೀನುಗಾರರು ಸೇರಿದಂತೆ ಒಟ್ಟು ಆರು ಮಂದಿ ಭಾರತೀಯ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಶುಕ್ರವಾರ ಹೇಳಿದೆ. ಕಳೆದ ಒಂಬತ್ತು ತಿಂಗಳಿನಲ್ಲಿ ಆರು ಕೈದಿಗಳ ಸಾವಿನ ಘಟನೆಯು ಆತಂಕಕಾರಿ ಎಂದು ವಿವರಿಸಿದೆ.
"ಇತ್ತೀಚಿನ ದಿನಗಳಲ್ಲಿ ಮೀನುಗಾರರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಆರು ಭಾರತೀಯ ಕೈದಿಗಳ ಪೈಕಿ ಐವರು ಮೀನುಗಾರರು ಪಾಕಿಸ್ತಾನದ ವಶದಲ್ಲಿ ಸಾವನ್ನಪ್ಪಿದ್ದಾರೆ. ಅವರು ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದರು, ಆದರೆ ಪಾಕಿಸ್ತಾನವು ಅಕ್ರಮವಾಗಿ ಬಂಧಿಸಲ್ಪಟ್ಟಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಪಾಕ್ ಸೇನಾ ಮುಖ್ಯಸ್ಥರಿಗೆ ಅಮೆರಿಕ ಭವ್ಯ ಸ್ವಾಗತ- ಭಾರತಕ್ಕೆ ಎಚ್ಚರಿಕೆಯಾ?
"ಇಸ್ಲಾಮಾಬಾದ್ನಲ್ಲಿರುವ ನಮ್ಮ ಹೈಕಮಿಷನ್ ಈ ವಿಷಯವನ್ನು ಎತ್ತಿದೆ. ಈ ಘಟನೆಗಳು ಆತಂಕಕಾರಿಯಾಗಿದೆ. ಭಾರತೀಯ ಕೈದಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡುವುದು ಪಾಕಿಸ್ತಾನದ ಕರ್ತವ್ಯವಾಗಿದೆ ಎಂದು ಬಾಗ್ಚಿ ಹೇಳಿದ್ದಾರೆ.
ಎರಡು ನೆರೆಯ ದೇಶಗಳ ನಡುವಿನ ಅಂತರಾಷ್ಟ್ರೀಯ ಕಡಲ ಗಡಿರೇಖೆಯ ಸಮೀಪದಲ್ಲಿ ಮುಳುಗುತ್ತಿದ್ದ ಆರು ಭಾರತೀಯ ಮೀನುಗಾರರ ಪ್ರಾಣವನ್ನು ಪಾಕಿಸ್ತಾನದ ಅಧಿಕಾರಿಗಳು ರಕ್ಷಿಸಿದ್ದಾರೆ ಎಂದು ಹೇಳಿಕೊಂಡ ದಿನವೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯು ಹೊರ ಬಂದಿದೆ.
ಭಾರತೀಯ ಮೀನುಗಾರರ ರಕ್ಷಣೆ ಬಗ್ಗೆ ಉಲ್ಲೇಖ:
ಪಾಕಿಸ್ತಾನದ ಕಡಲ ಭದ್ರತಾ ಏಜೆನ್ಸಿಯ (ಪಿಎಂಎಸ್ಎ) ಹಡಗು ಪೂರ್ವ ಸಮುದ್ರ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಆರು ಭಾರತೀಯ ಮೀನುಗಾರರನ್ನು ಪತ್ತೆ ಹಚ್ಚಿದ ಘಟನೆ ಗುರುವಾರ ನಡೆೆದಿದೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಭಾರತೀಯ ಮೀನುಗಾರಿಕಾ ದೋಣಿಯ ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿದ್ದಾರೆ. ಸದ್ಯ ರಕ್ಷಿಸಲಾದ ಮೀನುಗಾರರನ್ನು ಆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕೋಸ್ಟ್ ಗಾರ್ಡ್ ಹಡಗಿಗೆ ಹಸ್ತಾಂತರಿಸಲಾಗಿದೆ,"ಎಂದು ಪಿಎಂಎಸ್ಎ ತಿಳಿಸಿದೆ.
ಪಾಕಿಸ್ತಾನದ ಜೈಲಿನಲ್ಲಿ ಗುಜರಾತ್ ಮೀನುಗಾರ ಸಾವು:
ಕಳೆದ ಜನವರಿಯಲ್ಲಿ ಗುಜರಾತ್ನ 50 ವರ್ಷದ ಮೀನುಗಾರ ಒಂದು ವರ್ಷದ ಹಿಂದೆ ಹೆಚ್ಚಿನ ಸಮುದ್ರದಲ್ಲಿ ಪಾಕಿಸ್ತಾನಿ ಅಧಿಕಾರಿಗಳಿಂದ ಸೆರೆಹಿಡಿಯಲ್ಪಟ್ಟರು. ತದನಂತರದಲ್ಲಿ ಅದೇ ದೇಶದ ಜೈಲಿನಲ್ಲಿ ಅವರು ಸಾವನ್ನಪ್ಪಿದ್ದು, ಕಾರಣ ಮಾತ್ರ ನಿಗೂಢವಾಗಿದೆ. ಮೃತ ಮೀನುಗಾರನನ್ನು ಜಯಂತ್ ಸೋಲಂಕಿ ಎಂದು ಗುರುತಿಸಲಾಗಿದ್ದು, ಅವರು ಗಿರ್-ಸೋಮನಾಥ್ ಜಿಲ್ಲೆಯ ಸೂತ್ರಪದ ಗ್ರಾಮದ ನಿವಾಸಿ ಎಂದು ಗೊತ್ತಾಗಿದೆ.
ಜುಲೈನಲ್ಲಿ ಗಿರ್ ಸೋಮನಾಥ್ ಜಿಲ್ಲೆಯ ಉನಾ ತಾಲೂಕಿನ ಗರಲ್ನ ಮೀನುಗಾರ ಕಾಲು ಶಿಯಾಲ್ ಪಾಕಿಸ್ತಾನದ ಜೈಲಿನಲ್ಲಿ ಸಾವನ್ನಪ್ಪಿದ್ದರು. 38 ವರ್ಷದ ಶಿಯಾಲ್ ಪಾರ್ಥಿವ ಶರೀರವನ್ನು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಪೋರಬಂದರ್ನ ನೀಲೇಶ್ ಪಂಜಾರಿ ಎಂಬುವರಿಗೆ ಸೇರಿದ ಮೀನುಗಾರಿಕಾ ಟ್ರಾಲರ್ ಗಂಗಾ ಸಾಗರ್ ಹಡಗಿನಲ್ಲಿ ಶಿಯಾಲ್ ಮೀನುಗಾರಿಕೆ ನಡೆಸುತ್ತಿದ್ದರು. ಕಚ್ ಕರಾವಳಿಯ ಕಾಲ್ಪನಿಕ ಅಂತರಾಷ್ಟ್ರೀಯ ಸಮುದ್ರ ಗಡಿರೇಖೆಯ ಪಾಕಿಸ್ತಾನದ ಕಡೆಗೆ ದಾಟಿದ ಆರೋಪದ ಮೇಲೆ ಜೂನ್ 2018ರಲ್ಲಿ ಪಾಕಿಸ್ತಾನ್ ಮೆರೈನ್ ಸೆಕ್ಯುರಿಟಿ ಏಜೆನ್ಸಿಯಿಂದ ಶಿಯಾಲ್ ಸಿಕ್ಕಿ ಬಿದ್ದಿದ್ದರು. ಅಂದಿನಿಂದ ಕರಾಚಿ ಜೈಲಿನಲ್ಲಿದ್ದ ಅವರು ಅನಾರೋಗ್ಯದ ಕಾರಣ ಜುಲೈ 6ರಂದು ನಿಧನರಾಗಿದ್ದರು.