ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರಾಖಂಡ್ ನಲ್ಲಿ ಕಣಿವೆಗೆ ಉರುಳಿದ ಬಸ್, 47 ಸಾವು
ಡೆಹ್ರಾಡೂನ್, ಜುಲೈ 1: ಉತ್ತರಾಖಂಡ್ ನಲ್ಲಿ ಭಾರೀ ಅಪಘಾತವೊಂದು ನಡೆದಿದೆ. ಕಣಿವೆಗೆ ಬಸ್ ಉರುಳಿದ ಪರಿಣಾಮ ಬರೋಬ್ಬರಿ 47 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 11 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪೌರಿ ಗರ್ವಾಲ್ ಜಿಲ್ಲೆಯ ನನಿಧಂಡ ಪ್ರದೇಶದಲ್ಲಿ ಭಾರೀ ಪ್ರಪಾತಕ್ಕೆ ಪ್ರಯಾಣಿಕರಿಂದ ತುಂಬಿದ್ದ ಬಸ್ ಉರುಳಿ ಬಿದ್ದಿದೆ. ಬಸ್ ಉರುಳಿದ ರಭಸಕ್ಕೆ ಬಸ್ ಎರಡು ಭಾಗವಾಗಿದ್ದು, ಕಣಿವೆ ಮಧ್ಯದಲ್ಲಿ ಇದ್ದ ಹಳ್ಳಕ್ಕೆ ಬಿದ್ದಿದೆ.
ಉತ್ತರಾಖಂಡದಲ್ಲಿ ಭೀಕರ ಅಪಘಾತ: 13 ಜನ ಸಾವು
ಕಣಿವೆಯಿಂದ ಸತ್ತವರ ಹೆಣಗಳನ್ನು ಮೇಲೆತ್ತಲಾಗಿದ್ದು, ಗಾಯಗೊಂಡವರನ್ನು ಇಲ್ಲಿಯ ಸ್ಥಳೀಯ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.
ಸತ್ತವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗರ್ವಾಲ್ ಆಯುಕ್ತ ದಿಲೀಪ್ ಜವಲ್ಕರ್ ಹೇಳಿದ್ದಾರೆ.
Comments
English summary
At least 42 dead,12 injured after a bus fell down a gorge in Pauri Garhwal district's Nanidhanda area of Uttarakhand. Number of casualties expected to rise.