ಕಾಶ್ಮೀರ: 11 ಗಂಟೆಗಳ ಗುಂಡಿನ ಚಕಮಕಿಯಲ್ಲಿ 4 ಉಗ್ರರು ಬಲಿ
ಶ್ರೀನಗರ, ಸೆಪ್ಟೆಂಬರ್ 25: ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರವಾದಿಗಳು ಭಾರತದೊಳಕ್ಕೆ ನುಸುಳಲು ಮಾಡುತ್ತಿದ್ದ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು, ಈ ಸಂದರ್ಭ ನಡೆಸಲಾದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರವಾದಿಗಳು ಹತರಾಗಿದ್ದಾರೆ. ಸೋಮವಾರ ಸುದ್ದಿಗೋಷ್ಠಿ ನಡೆಸಿದ ಜಮ್ಮು ಕಾಶ್ಮೀರದ ಉರಿ ಪ್ರಾಂತ್ಯದ ಸೇನಾಧಿಕಾರಿ ಹರ್ಪ್ರೀತ್ ಸಿಂಗ್ ಈ ವಿಚಾರ ತಿಳಿಸಿದ್ದಾರೆ.
ಸೆ. 24ರಂದು ಈ ನುಸುಳುಕೋರರನ್ನು ಪತ್ತೆ ಹಚ್ಚಿದ್ದ ಭಾರತೀಯ ಸೇನೆಯ ಮೇಲೆ ತಿರುಗಿಬಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ನಿರಂತರ 11 ಗಂಟೆಗಳ ಕಾಲ ನಡೆದ ಈ ಗುಂಡಿನ ಚಕಮಕಿ ನಡೆದಿತ್ತು.
ಗುಂಡಿನ ಚಕಮಕಿ ಮುಗಿದಿದ್ದು, ಉಗ್ರರ ಶವಗಳನ್ನು ಸೇನೆ ವಶಕ್ಕೆ ಪಡೆದಿದೆ. ಆದರೂ, ಈ ಪ್ರಾಂತ್ಯದಲ್ಲಿ ಮತ್ತಷ್ಟು ನುಸುಳುಕೋರರು ಅಡಗಿರಬಹುದೆಂಬ ಶಂಕೆ ಇರುವುದರಿಂದ ಈ ಪ್ರಾಂತ್ಯದಲ್ಲಿ ಉಗ್ರರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿದೆ.
#WATCH Press Conference of Deputy Commander, Uri Brigade Harpreet Singh on Uri Encounter (J&K) https://t.co/AteeB79CkM
— ANI (@ANI) September 25, 2017