ಮುಜಾಫರ್ ನಗರ ಉದ್ವಿಗ್ನ, ನಾಲ್ಕು ಸಾವು
ಲಕ್ನೋ, ಅ, 31 : ಕೆಲವು ದಿನಗಳ ಹಿಂದೆ ಕೋಮು ಗಲಭೆ ಸಂಭವಿಸಿದ್ದ ಉತ್ತರ ಪ್ರದೇಶದದ ಮುಜಾಫರ್ ನಗರ ಮತ್ತೊಮ್ಮೆ ಉದ್ವಿಗ್ನಗೊಂಡಿದ್ದು, ಬುಧವಾರ ರಾತ್ರಿಯಿಂದ ನಡೆದ ಗುಂಪುಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಬುಧವಾರ
ರಾತ್ರಿ
ಮುಜಾಫರನಗರದ
ವೈದ್ಯರೊಬ್ಬರನ್ನು
ಭೇಟಿ
ಮಾಡಿ
ಹಸನ್ಪುರ-ಲಿಸಾದ್
ರಸ್ತೆಯಲ್ಲಿ
ಮನೆಗೆ
ವಾಪಸಾಗುತ್ತಿದ್ದ
ದಂಪತಿಗಳ
ಮೇಲೆ
ಶಸ್ತ್ರಸಜ್ಜಿತ
ಗುಂಪೊಂದು
ದಾಳಿ
ಮಾಡಿದೆ.
ಈ
ಹಲ್ಲೆ
ಪ್ರಕರಣದ
ನಂತರ
ನಗರದಲ್ಲಿ
ಗುಂಪು
ಘರ್ಷಣೆ
ಉಂಟಾಗಿದ್ದು,
ಇದುವರೆಗೂ
ನಾಲ್ವರು
ಸಾವನ್ನಪ್ಪಿದ್ದಾರೆ.
ದುಷ್ಕರ್ಮಿಗಳ ದಾಳಿಯಿಂದಾಗಿ ರಾಜೇಂದ್ರ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಪತ್ನಿ ರೀನಾ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ರಾಜೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದ್ದು, ಮೃತ ರೀನಾ ಅವರ ಸಂಬಂಧಿಕರು ಶವವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತುರ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಿಯೋ ರಾಜನಗರ ಅವರಿಗೆ ಸೂಚನೆ ನೀಡಿದ್ದಾರೆ. ಪೊಲೀಸ್ ಮಹಾನಿರ್ದೇಶಕರು ಮುಜಾಫರನಗರದಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯ ಕುರಿತು ಕ್ಷಣ-ಕ್ಷಣದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಗಲಭೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿಗಳು, ಬುಧವಾರ ರಾತ್ರಿ ಗುಂಪೊಂದು ದಂಪತಿಗಳ ಮೇಲೆ ಹಲ್ಲೆ ಮಾಡಿದ್ದು, ರಾಜೇಂದ್ರ ಅವರ ಪತ್ನಿ ರೀನಾರನ್ನು ಗುಂಡಿಟ್ಟು ಹತ್ಯೆಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಗಲಭೆಗೆ ಕಾರಣವಾದ ವ್ಯಕ್ತಿಗಳನ್ನು ಶೀಘ್ರವೇ ಅಪರಾಧಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.