ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ನ್ಯಾಯಯುತ ತೀರ್ಪಲ್ಲ: ಸುಬ್ರಮಣಿಯನ್ ಸ್ವಾಮಿ

|
Google Oneindia Kannada News

ನವದೆಹಲಿ, ಡಿಸೆಂಬರ್ 21: 'ಇಂದಿನ ತೀರ್ಪು ನಿಜಕ್ಕೂ ನ್ಯಾಯಯುತವಾಗಿಲ್ಲ. ಈ ಕುರಿತು ಉಚ್ಚ ನ್ಯಾಯಾಲಯಕ್ಕೆ ಮೊರೆಹೋಗಬೇಕಿದೆ' ಎಂದು ಬಿಜೆಪಿ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಹೇಳಿದರು.

2ಜಿ ಸ್ಪೆಕ್ಟ್ರಂ ತೀರ್ಪು: ನ್ಯಾಯಾಂಗದ ವಿರುದ್ಧ ಛೂಬಿಟ್ಟ ಟೀಕಾಸ್ತ್ರ!2ಜಿ ಸ್ಪೆಕ್ಟ್ರಂ ತೀರ್ಪು: ನ್ಯಾಯಾಂಗದ ವಿರುದ್ಧ ಛೂಬಿಟ್ಟ ಟೀಕಾಸ್ತ್ರ!

2ಜಿ ಸ್ಪೆಕ್ಟ್ರಂ ತೀರ್ಪು ಹೊರಬೀಳುತ್ತಿದ್ದಂತೆಯೇ ನವದೆಹಲಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು, ಈ ಪ್ರಕರಣ ಹಳಿ ತಪ್ಪಿದೆ, ಆದರೆ ಅದನ್ನು ಮತ್ತೆ ಹಳಿಗೆ ತರಬಹುದು, ಆದರೆ ನಮಗೆ 'ಚಮಚಾಗಿರಿ' ಮಾಡದ ಪ್ರಾಮಾಣಿಕ ಕಾನೂನು ಅಧಿಕಾರಿಗಳು ಮತ್ತ ವಕೀಲರು ಸಿಗಬೇಕಿದೆ' ಎಂದು ಅವರು ವಿಷಾದದಿಂದ ನುಡಿದರು.

2G scam verdict: Subramanian Swamy addresses pressmeet in Delhi

ಇದು ಯಾವುದೇ ಕಾರಣಕ್ಕೂ ಹಿನ್ನಡೆಯಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದಕ್ಕೆ ಕಾನೂನು ಅಧಿಕಾರಿಗಳು ಗಂಭೀರವಾಗಿರಲಿಲ್ಲ. ಇದರಿಂದ ಪ್ರಧಾನಿಯವರು ಪಾಠ ಕಲಿತಿದ್ದಾರೆ ಎಂದು ಸಹ ಇದೇ ಸಂದರ್ಭದಲ್ಲಿ ಅವರು ಹೇಳಿದರು.

2ಜಿ ಸ್ಪೆಕ್ಟ್ರಂ: ಎಲ್ಲಾ ಆರೋಪಿಗಳು ಖುಲಾಸೆ, ಯಾರು, ಏನು ಹೇಳಿದರು?2ಜಿ ಸ್ಪೆಕ್ಟ್ರಂ: ಎಲ್ಲಾ ಆರೋಪಿಗಳು ಖುಲಾಸೆ, ಯಾರು, ಏನು ಹೇಳಿದರು?

2ಜಿ ಸ್ಪೆಕ್ಟ್ರಂ ಹಗರಣದಲ್ಲಿ ವಿಶೇಷ ಆಸ್ಥೆ ವಹಿಸಿದ್ದ ಸುಬ್ರಮಣಿಯನ್ ಸ್ವಾಮಿ ಈ ಹಗರಣದಲ್ಲಿ ಆಗಿನ ಕೇಂದ್ರ ವಿತ್ತ ಸಚಿವ ಪಿಚಿದಂಬರಂ ಅವರ ಕೈವಾಡವೂ ಇದೆ ಎಂದು ಶಂಕಿಸಿ, ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದರು. ಆದರೆ ಸುಪ್ರೀಂ ಕೋರ್ಟ್ ಈ ಆರೋಪವನ್ನು ತಿರಸ್ಕರಿಸಿತ್ತು.

2008 ರಲ್ಲಿ ನಡೆದ 2 ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಇಂದು(ಡಿ.21) ತೀರ್ಪು ನೀಡಿದ ದೆಹಲಿಯ ವಿಶೇಷ ನ್ಯಾಯಾಲಯ 17 ಆರೋಪಿಗಳನ್ನೂ ದೋಷಮುಕ್ತರೆಂದು ಘೋಷಿಸಿದೆ.

English summary
"Today's judgment is a very bad judgement, this must be appealed in higher court" says BJP leader Subramanian Swamy on 2G Spectrum scam verdict. He was addressing a press meet in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X