ವೈರಸ್ ವಿರುದ್ಧ ಹೋರಾಡಲು ಮೋದಿ ನೆರವು ಕೇಳಿದ ಇರಾನ್
ನವದೆಹಲಿ, ಮಾರ್ಚ್ 15: ಕೊರೊನಾವೈರಸ್ ಭೀತಿಯಿಂದ ಚೀನಾ ನಂತರ ಇಟಲಿ, ಇರಾನ್ ಹೆಚ್ಚು ತತ್ತರಿಸಿವೆ. ಕೊವಿಡ್19 ವಿರುದ್ಧ ಹೋರಾಡಲು ನೆರವು ನೀಡಬೇಕೆಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಮನವಿ ಮಾಡಿಕೊಂಡಿದ್ದಾರೆ. ಈ ನಡುವೆ ಇರಾನ್ನಿನಲ್ಲಿ ಸಿಲುಕಿದ್ದ 234 ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.
ಕೊರೊನಾವೈರಸ್ ಗೆ ಯಾವುದೇ ಗಡಿ, ರಾಜಕೀಯ, ಮತ, ಪಂಥದ ಮಿತಿಯಿಲ್ಲ, ಇದರ ವಿರುದ್ಧ ಹೋರಾಡಲು ಭಾರತದ ನೆರವು ಅತ್ಯಗತ್ಯ ಎಂದು ಹಸನ್ ಹೇಳಿದ್ದಾರೆ. ಈ ನಡುವೆ ಇರಾನ್ ಮೇಲೆ ಅಮೆರಿಕ ಹೇರಿರುವ ನಿರ್ಬಂಧ ತೆರವುಗೊಳಿಸಲು ಸೂಚಿಸುವಂತೆ ವಿಶ್ವಸಂಸ್ಥೆಗೆ ಇರಾನ್ ಮನವಿ ಮಾಡಿಕೊಂಡಿದೆ.
ಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲ
ಕೊರೊನಾ ವೈರಸ್ನಿಂದ ಇರಾನ್ ತತ್ತರಿಸಿದೆ. ಇರಾನ್ ನಲ್ಲಿದ್ದ 234 ಭಾರತೀಯರು ಭಾನುವಾರ ಸ್ವದೇಶಕ್ಕೆ ಮರಳಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.
234 Indians stranded in #Iran have arrived in India; including 131 students and 103 pilgrims.
— Dr. S. Jaishankar (@DrSJaishankar) March 14, 2020
Thank you Ambassador @dhamugaddam and @India_in_Iran team for your efforts. Thank Iranian authorities.
ಮುಂಜಾನೆ ಟ್ವೀಟ್ ಮಾಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, 234 ಮಂದಿ ಪೈಕಿ 131 ವಿದ್ಯಾರ್ಥಿಗಳು ಹಾಗೂ 103 ಯಾತ್ರಿಕರು ಇದ್ದಾರೆ. ಎಲ್ಲರನ್ನು ರಾಜಸ್ಥಾನದ ಜೇಸ್ಮಲೇರ್ ನಲ್ಲಿರುವ ಮಿಲಿಟರಿ ಆರೋಗ್ಯ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಭಾನುವಾರದಂದು ವಿಶೇಷ ವಿಮಾನ ಮೂಲಕ ಇರಾನ್ನಿನಿಂದ ಮೂರನೇ ಹಾಗೂ ಕೊನೆಯ ತಂಡ ಬಂದಿದೆ
218 Indians including 211 students from Milan landed in Delhi. All will be quarantined for 14 days. GoI is committed to reach out to Indians in distress, wherever they are!
— V. Muraleedharan (@MOS_MEA) March 15, 2020
Appreciate Govt. of Italy for their support and team @IndiainItaly @cgmilan1 @airindiain .@DrSJaishankar
ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?
ಈ ನಡುವೆ ರಾಯಭಾರಿ ಧಾಮು ಗದ್ದಾಮ್ ಹಾಗೂ ಇರಾನ್ನ ಅಧಿಕಾರಿಗಳಿಗೆ ಜೈಶಂಕರ್ ಧನ್ಯವಾದ ತಿಳಿಸಿದ್ದಾರೆ. ಇದೇ ರೀತಿ ಇಟಲಿಯ ಮಿಲಾನ್ನಿಂದ ಹೊರಟಿರುವ ವಿಮಾನದಲ್ಲಿ 211 ಭಾರತೀಯ ವಿದ್ಯಾರ್ಥಿಗಳಿದ್ದು, ಭಾರತಕ್ಕೆ ಮರಳಲು ವ್ಯವಸ್ಥೆ ಮಾಡಲಾಗಿದೆ.