ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೇರಳದಲ್ಲಿ 20 ಲಕ್ಷ ಕಡು ಬಡ ಕುಟುಂಬಗಳಿಗೆ 'ಇಂಟರ್ನೆಟ್ ಭಾಗ್ಯ'
ಇಂದು ಕೇರಳ ವಿಧಾನಸಭೆಯಲ್ಲಿ 2017-18ನೇ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವ ಥೋಮಸ್ ಐಸಾಕ್ 20 ಲಕ್ಷ ಬಡ ಕುಟಂಬಗಳಿಗೆ ಉಚಿತ ಇಂಟರ್ನೆಟ್ ನೀಡುವುದಾಗಿ ಘೋಷಿಸಿದ್ದಾರೆ.
ತಿರುವನಂತಪುರಂ, ಮಾರ್ಚ್ 3: ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಅನ್ನಭಾಗ್ಯ ನೀಡುತ್ತಿದ್ದರೆ, ಕೇರಳದಲ್ಲಿ ಪಿಣರಾಯಿ ವಿಜಯನ್ ಸರಕಾರ 'ಇಂಟರ್ನೆಟ್ ಭಾಗ್ಯ' ಕೊಡಲು ಹೊರಟಿದೆ.
ಇಂದು ಕೇರಳ ವಿಧಾನಸಭೆಯಲ್ಲಿ 2017-18ನೇ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವ ಥೋಮಸ್ ಐಸಾಕ್ 20 ಲಕ್ಷ ಬಡ ಕುಟಂಬಗಳಿಗೆ ಉಚಿತ ಇಂಟರ್ನೆಟ್ ನೀಡುವುದಾಗಿ ಘೋಷಿಸಿದ್ದಾರೆ.[ಕೇರಳ ರಾಜಕೀಯ ಸಂಘರ್ಷ: ಡಿವೈಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆ]
"ಇವತ್ತು ಇಂಟರ್ನೆಟ್ ಜನರ ಹಕ್ಕಾಗಿದೆ. ಮುಂದಿನ 18 ತಿಂಗಳಲ್ಲಿ 'ಕೆ ಫೋನ್' ನೆಟ್ವರ್ಕ್ ಮೂಲಕ 20 ಲಕ್ಷ ಜನರಿಗೆ ಇಂಟರ್ನೆಟ್ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕೆ 1,000 ಕೋಟಿ ಖರ್ಚಾಗಲಿದೆ," ಎಂದು ಹೇಳಿದ್ದಾರೆ.[ಪಿಣರಾಯಿ ತಲೆಗೆ 1 ಕೋಟಿ ಬಹುಮಾನ ಘೋಷಿಸಿದ ಆರ್.ಎಸ್.ಎಸ್ ನಾಯಕ!]
20 ಲಕ್ಷ ಕುಟುಂಬಗಳಿಗೆ ಉಚಿತ ದರದಲ್ಲಿ ಇಂಟರ್ನೆಟ್ ಸಿಗಲಿದೆ, ಉಳಿದವರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲಾಗುವುದು ಎಂದು ಅವರ ಘೋಷಿಸಿದ್ದಾರೆ.
Comments
English summary
Internet would be made the right of the people and two million "poor families" will get free access to the web, Kerala Finance Minister Thomas Issac said while presenting the budget for 2017-18 in the state assembly on Friday.
Story first published: Friday, March 3, 2017, 14:01 [IST]