ಆತ್ಮ ನಿರ್ಭರ ಭಾರತ; ರಾಜನಾಥ್ ಸಿಂಗ್ ಮಹತ್ವದ ಘೋಷಣೆ
ನವದೆಹಲಿ, ಆಗಸ್ಟ್ 09 : ಭಾರತೀಯ ರಕ್ಷಣಾ ಇಲಾಖೆಯಲ್ಲಿ ಆತ್ಮ ನಿರ್ಭರ ಭಾರತ ಘೋಷಣೆಯಡಿ ಮಹತ್ವದ ಬದಲಾವಣೆಯಾಗಲಿದೆ. 101 ಮಿಲಿಟರಿ ಉತ್ಪನ್ನಗಳ ಆಮದನ್ನು ನಿಷೇಧಿಸಲಾಗಿದೆ.
ಭಾನುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ ಭಾರತದ ಘೋಷಣೆ ಮಾಡಿದ್ದಾರೆ. ರಕ್ಷಣಾ ಇಲಾಖೆ ಈಗ ಇದಕ್ಕೆ ಸಿದ್ಧವಾಗುತ್ತಿದೆ" ಎಂದರು.
ಬಿತ್ತನೆ ಬೀಜ-ಆತ್ಮ ನಿರ್ಭರ್ ಮತ್ತು ರಫ್ತು ಅವಕಾಶಗಳು...
"101 ಮಿಲಿಟರಿ ಉತ್ಪನ್ನಗಳ ಆಮದನ್ನು ನಾವು ನಿಷೇಧಿಸಲಿದ್ದೇವೆ. ಇದರಿಂದಾಗಿ ದೇಶದಲ್ಲಿಯೇ ಇವುಗಳ ಉತ್ಪಾದನೆ ಮಾಡಲು ಸಾಧ್ಯವಾಗಲಿದೆ" ಎಂದು ರಕ್ಷಣಾ ಸಚಿವರು ಹೇಳಿದರು.
'ಆತ್ಮನಿರ್ಭರ್ ಭಾರತ್ ಆ್ಯಪ್ ಇನ್ನೋವೇಶನ್ ಚಾಲೆಂಜ್' ನೀಡಿದ ಪ್ರಧಾನಿ ಮೋದಿ
"ಆಮದು ರದ್ದು ಮಾಡಿರುವ 101 ಉತ್ಪನ್ನಗಳಲ್ಲಿ ಕೆಲವು ಸಾಮಾನ್ಯ ಉತ್ಪನ್ನಗಳು ಸೇರಿಲ್ಲ. ಕೆಲವು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಿಡಿ ಭಾಗಗಳು ಸೇರಿವೆ" ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಕೇಂದ್ರ ಗೃಹ ಸಚಿವರೇ ’ಆತ್ಮನಿರ್ಭರ ಭಾರತ್’ ಉಚ್ಚಾರಣೆ ಮಾಡಲು ತಡಬಡಾಯಿಸುತ್ತಾರೆ, ಇನ್ನು..
"ರಕ್ಷಣಾ ಇಲಾಖೆಯ ಈ ತೀರ್ಮಾನದಿಂದ 1,30,000 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ವಾಯುಪಡೆಯ 1,40,000 ಕೋಟಿ ಉತ್ಪನ್ನಗಳು ಸೇರಿವೆ" ಎಂದು ರಕ್ಷಣಾ ಸಚಿವರು ತಿಳಿಸಿದರು.
"ಆರ್ಥಿಕತೆ, ಮೂಲ ಸೌಕರ್ಯ, ವ್ಯವಸ್ಥೆ, ಜನಸಂಖ್ಯಾಶಾಸ್ತ್ರ ಮತ್ತು ಬೇಡಿಕೆ ಎಂಬ ಆರ್ಥಿಕತೆಯ 5 ಸ್ತಂಭಗಳ ಆಧಾರದಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಧಾನಿಯವರು ಕರೆ ನೀಡಿದ್ದಾರೆ. ಅದಕ್ಕಾಗಿ ವಿಶೇಷ ಪ್ಯಾಕೇಜ್ ಸಹ ಘೋಷಣೆ ಮಾಡಿದ್ದಾರೆ. ರಕ್ಷಣಾ ಸಚಿವಾಲಯ ಇದಕ್ಕೆ ಬದ್ಧವಾಗಿದೆ" ಎಂದು ರಾಜನಾಥ್ ಸಿಂಗ್ ಹೇಳಿದರು.
MoD has also bifurcated the capital procurement budget for 2020-21 between domestic and foreign capital procurement routes. A separate budget head has been created with an outlay of nearly Rs 52,000 crore for domestic capital procurement in the current financial year.
— Rajnath Singh (@rajnathsingh) August 9, 2020