ಸೆ.2: ಸಾರಿಗೆ ಮುಷ್ಕರ, ಸರ್ಕಾರಿ ಬಸ್ ಕೂಡಾ ಸ್ಥಗಿತ
ಬೆಂಗಳೂರು, ಆಗಸ್ಟ್ 29: ಸುಮಾರು 10ಕ್ಕೂ ಅಧಿಕ ಕಾರ್ಮಿಕ ಸಂಘಗಳು ಒಂದು ದಿನ ಸಾರಿಗೆ ಮುಷ್ಕರಕ್ಕೆ ಮುಂದಾಗಿವೆ. ಕೇಂದ್ರ ಸರ್ಕಾರ 12 ಅಂಶಗಳ ಬೇಡಿಕೆಯನ್ನು ಈಡೇರಿಸದ ಕಾರಣ ಸೆಪ್ಟೆಂಬರ್ 2 ರಂದು ಸಾರಿಗೆ ಸಂಪೂರ್ಣ ಬಂದ್ ಆಗಲಿದೆ.
ಸರ್ಕಾರಿ ಬಸ್, ಆಟೋರಿಕ್ಷಾ ಹಾಗೂ ಮೊಬೈಲ್ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿ ಕೂಡಾ ಸ್ಥಗಿತಗೊಳ್ಳಲಿದ್ದು, ಬಸ್ ಬಿಸಿಗೆ ಸಾರ್ವಜನಿಕರು, ಸಂಸ್ಥೆಗಳು ಸಿದ್ಧರಾಗಬೇಕಿದೆ.[ಐಟಿ ಉದ್ಯೋಗಿಗಳಿಗೆ ಕಾರ್ ಪೂಲಿಂಗ್ ವರದಾನ]
ಸೆಪ್ಟೆಂಬರ್ 2 ರಂದು ಒಂದು ದಿನದ ರಾಷ್ಟ್ರವ್ಯಾಪಿ ಸಾಂಕೇತಿಕ ಮುಷ್ಕರ ನಡೆಸಲು ಕಾರ್ಮಿಕ ಸಂಘಟನೆಗಳೂ ನಿರ್ಧರಿಸಿವೆ ಎಂದು ಅಖಿಲ ಭಾರತ ಕಾರ್ಮಿಕರ ಸಂಘದ ಕಾರ್ಯದರ್ಶಿ ಸಚ್ ದೇವ್ ಹೇಳಿದ್ದಾರೆ. ಕಾರ್ಮಿಕರ ಹಕ್ಕುಗಳ ರಕ್ಷಣೆ, ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಹಾಗೂ ಪ್ರಮುಖ 17 ಬೇಡಿಕೆ ಗಳನ್ನು ಆಗ್ರಹಿಸಲಾಗಿದೆ ಎಂದರು. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]
ಸಾರಿಗೆ ಸಂಪೂರ್ಣ ಸ್ಥಗಿತ: ರೈಲ್ವೆ ಸೇವೆಯೂ ಅನುಮಾನವಾಗಿದೆ. ಸರ್ಕಾರಿ ಬಸ್ಗಳ ಜತೆಗೆ ಆಟೋಗಳೂ ರಸ್ತೆಗಿಳಿಯುವುದಿಲ್ಲ. ಮೆಟ್ರೋ ರೈಲಿನ ಸೇವೆಯೂ ಸ್ಥಗಿತಗೊಳ್ಳಲಿದ್ದು, ಮೊಬೈಲ್ ಅಪ್ಲಿಕೆಷನ್ ಆಧಾರಿತ ಟ್ಯಾಕ್ಸಿಗಳೂ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. [ಸೆ. 2 ರಂದು ಮೋದಿ ಸರ್ಕಾರ ವಿರುದ್ಧ ಬ್ಯಾಂಕ್ ಮುಷ್ಕರ]
ಸೆಪ್ಟೆಂಬರ್ 2 ರಂದು ಒಂದು ದಿನದ ದೇಶವ್ಯಾಪ್ತಿ ಮುಷ್ಕರ ನಡೆಸಲು ಬ್ಯಾಂಕುಗಳ ಈಗಾಗಲೇ ಕರೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಈ ಎರಡು ಮುಷ್ಕರದಿಂದ ಆರೆಸ್ಸೆಸ್ ಬೆಂಬಲಿತ ಭಾರತೀಯ ಮಜ್ದೂರ್ ಸಂಘ ಹಿಂದೆ ಸರಿದಿದೆ.