ವೈಎಸ್ಆರ್ ಕಾಂಗ್ರೆಸ್ ತೆಲಂಗಾಣ ಚುನಾವಣೆಗೆ ಸ್ಪರ್ಧಿಸಲ್ಲ
ಹೈದರಾಬಾದ್, ನವೆಂಬರ್ 11: ಸನಿಹದಲ್ಲೇ ಇರುವ ತೆಲಂಗಾಣ ಚುನಾವಣೆಯಲ್ಲಿ ಜಗನ್ಮೋಹನ ರೆಡ್ಡಿ ಅವರ ವೈಎಸ್ಆರ್ ಪಕ್ಷವು ಸ್ಪರ್ಧಿಸುತ್ತಿಲ್ಲ ಇದು ಕಾಂಗ್ರೆಸ್ಗೆ ನೆರವಾಗಲಿದೆ.
ತಮ್ಮ ಪಕ್ಷವು ತೆಲಂಗಾಣದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದನ್ನು ಪಕ್ಷವು ಅಧಿಕೃತಕವಾಗಿ ಪ್ರಕಟಣೆ ನೀಡಿದ್ದು, ಆಂಧ್ರ ಪ್ರದೇಶದಲ್ಲಿ 2019ರಲ್ಲಿ ನಡೆವ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷವು. ಹೇಳಿದೆ.
ತೆಲಂಗಾಣದಲ್ಲಿ ಮತ್ತೆ ಕೆಸಿಆರ್ ಹವಾ : ಸಮೀಕ್ಷೆ ಫಲಿತಾಂಶ
ತೆಲಂಗಾಣದಲ್ಲಿ ಡಿಸೆಂಬರ್ 9 ರಂದು ಚುನಾವಣೆ ನಡೆಯಲಿದ್ದು, ಕೆಸಿಆರ್ ಅವರ ಟಿಆರ್ಎಸ್, ಚಂದ್ರಬಾಬು ನಾಯ್ಡು ಅವರ ಟಿಡಿಪಿ, ಕಾಂಗ್ರೆಸ್ ನಡುವೆ ಚುನಾವಣೆಯಲ್ಲಿ ಸ್ಪರ್ಧೆ ನಡೆಯಲಿದೆ. ಪವನ್ ಕಲ್ಯಾಣ್ ಅವರ ಜನಸೇನಾ ಮತ್ತು ಬಿಜೆಪಿ ಸಹ ಈ ಬಾರಿ ಉತ್ತಮ ಪೈಪೋಟಿ ತೋರುವ ನಿರೀಕ್ಷೆ ಇದೆ.
'ತೆಲಂಗಾಣದಲ್ಲಿ ಟಿಆರ್ ಎಸ್ 100 ಸೀಟು ಗೆಲ್ಲೋದು ಗ್ಯಾರಂಟಿ!'
ತೆಲಂಗಾಣ ಚುನಾವಣೆಯಿಂದ ವೈಎಸ್ಆರ್ ಕಾಂಗ್ರೆಸ್ ಹಿಂದೆ ಸರಿದಿರುವುದು ಕಾಂಗ್ರೆಸ್ಗೆ ಉಪಯೋಗವಾಗುತ್ತದೆ ಎನ್ನಲಾಗಿದೆ. ಆದರೆ ತೆಲಂಗಾಣದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಹಲವು ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು ಭಾಗ್ಯನಗರ್
ತೆಲಂಗಾಣದ 2024ನೇ ಚುನಾವಣೆಗೆ ಪಕ್ಷವನ್ನು ಬಲಪಡಿಸಲಾಗುವುದು ಎಂದು ವೈಎಸ್ಆರ್ ಕಾಂಗ್ರೆಸ್ ಹೇಳಿದೆ.