ವಾರಂಗಲ್ನ ಭದ್ರಕಾಳಿ ದೇಗುಲವೇ ಕೊಹಿನೂರ್ ವಜ್ರದ ಮೂಲ ನೆಲೆ?
ವಾರಂಗಲ್, ಸೆಪ್ಟೆಂಬರ್ 14: ಕೊಹಿನೂರ್ ವಜ್ರಕ್ಕೆ ಅದರ ಐತಿಹ್ಯದ ಬಗ್ಗೆ ಹಲವು ವಿಶ್ಲೇಷಣೆಗಳು ಭಾರತ ಸೇರಿದಂತೆ ಜಗತ್ತಿನಲ್ಲಿ ಇವೆ. ಅದು ಯಾರಿಗೆ ಸೇರಿದ್ದು ಅದರ ಮೂಲ ಯಾವುದು ಎಂಬುದರ ಗೊಂದಲಗಳು ಇರುವಂತೆ ಈಗ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ನಿಧನದ ನಂತರ ಅದನ್ನು ಭಾರತಕ್ಕೆ ತರುವ ಮಾತುಗಳು ಜೋರಾಗಿವೆ. ಈ ಹಿನ್ನೆಲೆಯಲ್ಲಿ ಈಗ ಕೊಹಿನೂರ್ ವಜ್ರವು ವಾರಂಗಲ್ನ ಭದ್ರಕಾಳಿ ದೇಗುಲಕ್ಕೆ ಸೇರಿದ್ದು ಎಂಬ ವಾದಗಳು ಕೇಳಿಬಂದಿವೆ.
ಕೊಹಿನೂರ್ ವಜ್ರದ ಮೇಲಿರುವ ಅನೇಕ ಕಥೆಗಳಲ್ಲಿ ಒಂದು ಕಥೆಯ ಮೂಲ ತೆಲಂಗಾಣ ರಾಜ್ಯಕ್ಕೂ ಇದೆ. ಚಾಲುಕ್ಯ ರಾಜವಂಶದ ರಾಜ ಇಮ್ಮಡಿ ಪುಲಕೇಶಿ ಕ್ರಿ.ಶ. 625 ರ ಸುಮಾರಿಗೆ ವಾರಂಗಲ್ನಲ್ಲಿ ಸುಂದರವಾದ ಭದ್ರಕಾಳಿ ದೇವಾಲಯವನ್ನು ನಿರ್ಮಿಸಿದನು. ದಂತಕಥೆಗಳ ಪ್ರಕಾರ, ಕಾಕತೀಯ ರಾಜವಂಶವು ವಾರಂಗಲ್ ಪ್ರದೇಶದಲ್ಲಿ ಆಳ್ವಿಕೆ ನಡೆಸುತ್ತಿತ್ತು.
ಕೊಹಿನೂರ್ ವಜ್ರ ಪುರಿ ಜಗನ್ನಾಥನಿಗೆ ಸೇರಿದ್ದು: ಜಗನ್ನಾಥ ಸೇನೆ ವಾದ
ಅವರು ಭದ್ರಕಾಳಿ ದೇವಿಯನ್ನು ತಮ್ಮ ಕುಲದೇವತೆ ಎಂದು ಪರಿಗಣಿಸಿದರು. ಭದ್ರಕಾಳಿ ದೇವತೆಯ ಎಡಗಣ್ಣಿನ ಮೇಲೆ ಈ ಕೊಹಿನೂರು ವಜ್ರವನ್ನು ಅಳವಡಿಸಲಾಗಿತ್ತು ಎನ್ನಲಾಗಿದೆ. ಕಾಕತೀಯರ ಆಳ್ವಿಕೆಯಲ್ಲಿ ಕೊಲ್ಲೂರು ಗಣಿಗಳಿಂದ ವಜ್ರವನ್ನು ಗಣಿಗಾರಿಕೆ ಮಾಡಿದ ನಂತರ ವಜ್ರವು ಪತ್ತೆ ಹಚ್ಚಲಾಯಿತು ಎಂಬ ವಾದಗಳು ಇವೆ.
1849ರಲ್ಲಿ ಬ್ರಿಟಿಷರ ವಶವಾದ ಕೊಹಿನೂರ್ ವಜ್ರ
ಸುಮಾರು ಕ್ರಿ.ಶ. 1310ರಲ್ಲಿ ದೆಹಲಿಯ ಸುಲ್ತಾನನಾಗಿದ್ದ ಅಲ್ಲಾವುದ್ದೀನ್ ಖಲ್ಜಿ ತನ್ನ ಸೇನಾಪತಿ ಮಲಿಕ್ ಕಾಫರ್ನ ಸಹಾಯದಿಂದ ಈ ಕೊಹಿನೂರ್ ವಜ್ರವನ್ನು ಸ್ವಾಧೀನಪಡಿಸಿಕೊಂಡನು ಎನ್ನಲಾಗಿದೆ. ಮೂಲಗಳ ಪ್ರಕಾರ ಇದು ಮೊಘಲ್ ನವಿಲು ಸಿಂಹಾಸನದಲ್ಲಿ ಅಲಂಕೃತಗೊಂಡಿದ್ದ ಬೆಲೆಬಾಳುವ ಕಲ್ಲುಗಳಲ್ಲಿ ಒಂದಾಗಿದೆ. 1849ರಲ್ಲಿ ಬ್ರಿಟಿಷರು ಪಂಜಾಬ್ ಅನ್ನು ವಶಪಡಿಸಿಕೊಂಡರು. ಕೊಹಿನೂರ್ ವಜ್ರವನ್ನು ವಶಪಡಿಸಿಕೊಂಡು ವಿಕ್ಟೋರಿಯಾ ರಾಣಿಗೆ ಉಡುಗೊರೆಯಾಗಿ ನೀಡುವವರೆಗೂ ಇದು ಹಲವಾರು ಕೈಗಳು ಮತ್ತು ರಾಜವಂಶಗಳ ಮೂಲಕ ಕೈಯಿಂದ ಹಾದುಹೋಯಿತು.
ಕೊಹಿನೂರ್ ವಜ್ರ ಭಾರತಕ್ಕೆ ಹಿಂದಿರುಗಿಸಲು ಆಗ್ರಹ
ದೇವಾಲಯದ ಮೇಲೆ ಅನೇಕ ಬಾರಿ ಲೂಟಿ
ದಕ್ಷಿಣದ ಗೋಲ್ಡನ್ ಟೆಂಪಲ್ ಎಂದೂ ಪೂಜಿಸಲ್ಪಡುವ ಭದ್ರಕಾಳಿ ದೇವಸ್ಥಾನವು ದೇವಿಗೆ ಇಲ್ಲಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದ ಗೋಡೆಗಳ ಮೇಲೆ ಕಂಡುಬರುವ ಲಿಪಿಗಳ ಪ್ರಕಾರ, ರಾಜ ಎರಡನೇ ಪುಲಿಕೇಶಿ ವೆಂಗ ಪ್ರದೇಶದ ಮೇಲೆ ತನ್ನ ವಿಜಯವನ್ನು ಆಚರಿಸಲು ಈ ದೇವಾಲಯವನ್ನು ಸ್ಥಾಪಿಸಿದ್ದನು. ಈ ದೇವಾಲಯವು ಭದ್ರಕಾಳಿ ಸರೋವರದ ದಡದಲ್ಲಿ ಹಚ್ಚ ಹಸಿರು ಪ್ರದೇಶದಿಂದ ಸುತ್ತುವರಿಯಲ್ಪಟ್ಟಿದೆ. ಶ್ರೀಗಣೇಶ್ ರಾವ್ ಶಾಸ್ತ್ರಿಯವರು 1950ರ ದಶಕದಲ್ಲಿ ಕೆಲವು ಸ್ಥಳೀಯರೊಂದಿಗೆ ಸೇರಿ ಇದನ್ನು ನವೀಕರಿಸುವವರೆಗೂ ಅನೇಕ ಲೂಟಿಗಳು ಈ ದೇವಾಲಯದ ಮೇಲೆ ನಡೆದು ಐತಿಹ್ಯ ಸಾರುವ ಕುರುಹುಗಳು ನಾಶವಾದವು.
ಕಾಕತೀಯ ವಾಸ್ತುಶಿಲ್ಪ ವೈಭವ
ಭದ್ರಕಾಳಿ ದೇವಾಲಯದ ಐತಿಹಾಸಿಕ ಶೈಲಯ ಆಕರ್ಷಣೆಯು ಅತ್ಯಂತ ಪ್ರಶಾಂತ ತಾಣವಾಗಿದೆ. ದೇವಿ ಭದ್ರಕಾಳಿಯು ಮಹಿಳೆಯರಿಗೆ ಶಕ್ತಿಯ ಪ್ರತೀಕ ಎಂದು ನಂಬಲಾಗಿದೆ. ದೇವಾಲಯವು ಪುರಾತನ ಚಾಲುಕ್ಯ ವಾಸ್ತುಶೈಲಿಯಲ್ಲಿದ್ದು, ನೈಸರ್ಗಿಕ ವೈಭವದಿಂದ ಕೂಡಿದೆ. ದೇವಾಲಯದ ಪ್ರವೇಶದ್ವಾರವು ಕಾಕತೀಯ ವಾಸ್ತುಶಿಲ್ಪವನ್ನು ಹೊಂದಿದೆ. ಚಿನ್ನದ ಬಣ್ಣದ ದೇವಾಲಯವು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಫಳ ಫಳನೆ ಹೊಳೆಯುತ್ತದೆ. ದೇವಾಲಯದಲ್ಲಿರುವ ಭದ್ರಕಾಳಿ ದೇವಿಯ ಏಕಶಿಲೆಯು ಶಕ್ತಿಯುತ ದೇವಿಯ ಕಣ್ಣುಗಳು ಮತ್ತು ವಿವಿಧ ಆಯುಧಗಳೊಂದಿಗೆ ಎಂಟು ತೋಳುಗಳನ್ನು ಹೊಂದಿದೆ.
ವಜ್ರ ತರಲು ಮಧ್ಯಸ್ಥಿಕೆ ವಹಿಸಲು ರಾಷ್ಟ್ರಪತಿಗೆ ಪತ್ರ
ಕೊಹಿನೂರು ವಜ್ರವು ರಾಣಿ ಎಲಿಜಬೆತ್ ನಿಧನದ ಬಳಿಕ ಭಾರತದಲ್ಲಿ ಹಲವರಿಂದ ದೇಶಕ್ಕೆ ವಾಪಸ್ಸು ತರಲು ಆಗ್ರಹಗಳು ಹೆಚ್ಚಾಗಿವೆ. ಕೊಹಿನೂರ್ ವಜ್ರವು ಒಡಿಶಾ ರಾಜ್ಯದ ಪುರಿ ಜಗನ್ನಾಥ ದೇವಾಲಯಕ್ಕೆ ಸೇರಿದ್ದು ಎಂಬ ವಾದಗಳು ಇತ್ತೀಚೆಗೆ ಕೇಳಿಬಂದಿವೆ. ಅದನ್ನು ದೇವಾಲಯದ ಸುಪರ್ದಿಗೆ ತಂದು ಕೊಡಬೇಕು. ಇದಕ್ಕೆ ರಾಷ್ಟ್ರಪತಿ ಮಧ್ಯಸ್ಥಿಕೆ ವಹಿಸಿ ವಜ್ರ ತರಬೇಕು ಎಂದು ಪತ್ರವನ್ನು ಸಹ ಬರೆಲಾಗಿದೆ.