ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಿತನನ್ನು ಹೆಗಲ ಮೇಲೆ ಹೊತ್ತು ಮೆರೆದಾಡಿಸಿದ ಅರ್ಚಕ

By Mahesh
|
Google Oneindia Kannada News

ಹೈದರಾಬಾದ್, ಏಪ್ರಿಲ್ 18: ದೇಶದೆಲ್ಲೆಡೆ ದಲಿತರ ಮೇಲೆ ದೌರ್ಜನ್ಯ, ಮೇಲ್ವರ್ಗದವರಿಂದ ಅನ್ಯಾಯದ ಸುದ್ದಿಗಳು ಬರುತ್ತಿರುವಾಗ, ಹೈದರಾಬಾದಿನಲ್ಲಿ ದಲಿತರೊಬ್ಬರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ ಸುದ್ದಿ ಬಂದಿದೆ.

ಸುಮಾರು 3000 ವರ್ಷಗಳಷ್ಟು ಹಿಂದಿನ ಸಂಪ್ರದಾಯದಂತೆ ಮುನಿ ವಾಹನ ಸೇವೆಯ ಅಂಗವಾಗಿ ಈ ಕಾರ್ಯ ನೆರವೇರಿಸಲಾಗಿದೆ. ಚಿಲ್ಕೂರು ಬಾಲಾಜಿ ದೇಗುಲದ ಅರ್ಚಕ ಸಿಎಸ್ ರಂಗರಾಜನ್ ಅವರು ಆದಿತ್ಯ ಪರಸ್ರಿ ಎಂಬಾತನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ರಾಜಬೀದಿಯಲ್ಲಿ ಮೆರವಣಿಗೆ ಸಮೇತ ದೇವರ ಸನ್ನಿಧಿ ಬಳಿಗೆ ಕರೆ ತಂದರು.

ಮುನಿವಾಹನ ಸೇವೆ: ಸುಮಾರು 2700 ವರ್ಷಗಳಿಗೂ ಅಧಿಕ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ. ಸಮಾಜದಲ್ಲಿ ಸಾಮರಸ್ಯ ನೆಲೆಸಿದೆ ಎಂದು ತೋರಿಸಲು ಈ ಕ್ರಮವನ್ನು ಅನುಸರಿಸಲಾಗುತ್ತದೆ.

Video: Hyderabad priest carries Dalit man on his shoulders to send strong message

ಆದಿತ್ಯ ಅವರಿಗೆ ದಲಿತ ಎಂಬ ಕಾರಣಕ್ಕೆ ದೇಗುಲ ಪ್ರವೇಶ ನಿರಾಕರಿಸಲಾಗಿತ್ತು. ಈ ಪದ್ಧತಿಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿ, ಇನ್ನಾದರೂ ದೇವರ ಮುಂದೆ ನಾವೆಲ್ಲರೂ ಸಮಾನರು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಎಂಬ ಸಂದೇಶ ಸಾರೋಣ ಎಂದಿದ್ದಾರೆ.

English summary
a priest carried a Dalit man into a temple on his shoulders and hugged him as part of a 3000-year-old tradition. CS Rangarajan of Chilkur Balaji Temple carried Aditya Parasri into the sanctum sanctorum as he sent a strong message against discrimination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X