ವೈರಲ್ ವಿಡಿಯೋ: ಪ್ರಾಣಿಗಳ ಜೀವ ಉಳಿಸಿದ ಪೊಲೀಸ್ ಪೇದೆಗಳು
ಹೈದರಾಬಾದ್, ಏಪ್ರಿಲ್ 23 : ಪೊಲೀಸರ ಕೆಲಸ ಎಂದರೆ ಹಾಗೆಯೇ. ತುರ್ತು ಸಂದರ್ಭದಲ್ಲಿ ಸಮಯವನ್ನು ನೋಡದೆ ಅವರು ಕೆಲಸ ಮಾಡಬೇಕಾಗುತ್ತದೆ. ಹೀಗೆ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಮೂಕ ಪ್ರಾಣಿಗಳ ಜೀವ ಉಳಿದಿದೆ.
ತೆಲಂಗಾಣದ ಇಬ್ಬರು ಪೊಲೀಸ್ ಪೇದೆಗಳ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಠಾಣೆಗೆ ವಾಪಸ್ ಹೊರಟಿದ್ದ ಇಬ್ಬರು ಪೇದೆಗಳು ಮಾಡಿದ ಕೆಲಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧಾರವಾಡ; ಪೊಲೀಸ್ ಅಧಿಕಾರಿಯಿಂದ ಸ್ವಂತ ಖರ್ಚಲ್ಲಿ ದಿನಸಿ ವಿತರಣೆ
ರವೀಂದ್ರ ರೆಡ್ಡಿ, ಯಾದಗಿರಿ ಎಂಬ ಇಬ್ಬರು ಪೇದೆಗಳು ರಾಮಣ್ಣ ಪೇಟ್ ಪೊಲೀಸ್ ಠಾಣೆಯ ಸಿಬ್ಬಂದಿಗಳು. ಲಾಕ್ ಡೌನ್ ಸಂದರ್ಭದಲ್ಲಿ ಇಬ್ಬರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ತಮ್ಮ ಡ್ಯೂಟಿ ಮುಗಿಸಿ ಇವರು ಠಾಣೆಗೆ ವಾಪಸ್ ಹೊರಟಿದ್ದರು.
ತರಕಾರಿ ಮಾರುಕಟ್ಟೆಯಲ್ಲಿ ''ಪಾಸ್'' ಕೇಳಿದ ಪೊಲೀಸ್ ಕೈ ಕಟ್
ದಾರಿಯಲ್ಲಿ ಅವರಿಗೆ ಕೊಟ್ಟಿಗೆಗೆ ಬೆಂಕಿ ಬಿದಿದ್ದು ಕಂಡಿದೆ. ಹಸು ಮತ್ತು ಎಮ್ಮೆಗಳನ್ನು ಕಟ್ಟಿ ಹಾಕಿದ್ದ ಕೊಟ್ಟಿಗೆ ಹೊತ್ತಿ ಉರಿಯುತ್ತಿತ್ತು. ತಮ್ಮ ಜೀವ ಲೆಕ್ಕಿಸದೇ ಕೊಟ್ಟಿಗೆಗೆ ನುಗ್ಗಿದ ಇಬ್ಬರು ಅವುಗಳ ಹಗ್ಗವನ್ನು ಬಿಚ್ಚಿದರು.
ಶಿವಮೊಗ್ಗ; ವಾಕಿಂಗ್ ಬಂದವರನ್ನು ಲಾಕ್ ಮಾಡಿ ಕ್ಲಾಸ್ ತೆಗೆದುಕೊಂಡ ಎಸ್ಪಿ, ಡಿಸಿ
ಹಸು, ಎಮ್ಮೆ ಬೆಂಕಿಯ ಕೆನ್ನಾಗಲಿಗೆಗೆ ಸಿಲುಕುವುದು ಬೇಡ ಎಂದು ಅವುಗಳ ಹಗ್ಗ ಬಿಚ್ಚಿ ಓಡಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಪೇದೆಗಳ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ.
#WATCH Telangana: Two police constables, Yadagiri & Ravinder Reddy saved cattle that were stuck amid a fire that broke out in the animal shed where they were tied. The two personnel were on their way to Ramannapet Police Station when the incident took place. (21.04.2020) pic.twitter.com/3FcZHVHjNP
— ANI (@ANI) April 22, 2020