ಕೊರೊನಾ ಭೀತಿ: ತಿರುಪತಿ ಬರುವ ಭಕ್ತಾದಿಗಳಿಗೆ ಸೂಚನೆ
ತಿರುಪತಿ, ಮಾರ್ಚ್ 9: ಕೊರೊನಾ ವೈರಸ್ ಭೀತಿಯಿಂದ ತಿರುಪತಿಗೆ ಬರುವ ಭಕ್ತಾದಿಗಳಿಗೆ ಸೂಚನೆ ನೀಡಲಾಗಿದೆ. ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ.
Recommended Video
ಜ್ವರ, ನೆಗಡಿ, ಕೆಮ್ಮು ಇರುವ ಭಕ್ತಾದಿಗಳು ಸದ್ಯಕ್ಕೆ ದೇವಸ್ಥಾನಕ್ಕೆ ಬರುವುದು ಬೇಡ ಎಂದು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ತಿಳಿಸಿದೆ. ತಿರುಪತಿಯಲ್ಲಿ ಪ್ರತಿ ದಿನ ಸಾವಿರಾರೂ ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಾರೆ. ಹೀಗಾಗಿ, ಒಬ್ಬರಿಂದ ಒಬ್ಬರಿಗೆ ವೈರಸ್ ಹರಡಿದರೆ ಕಷ್ಟ ಎಂದು ಈ ನಿಯಮ ಪಾಲಿಸಲಾಗುತ್ತಿದೆ.
LKG, UKG ಮಕ್ಕಳಿಗೆ ರಜೆ: ಗೊಂದಲ ಬೇಡ ಎಂದ ಸುರೇಶ್ ಕುಮಾರ್
ದೇವಸ್ಥಾನಕ್ಕೆ ಬರುವ ಭಕ್ತಾಧಿಗಳ ಮೇಲೆ ನಿಗಾ ವಹಿಸಿಲಾಗಿದೆ. ಭಕ್ತಾಧಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕೆಮ್ಮ, ನೆಗಡಿ, ಜ್ವರ ಇರುವ ಭಕ್ತಾಧಿಗಳಿಗೆ ಹೆಚ್ಚಿನ ಪರೀಕ್ಷೆ ಮಾಡಲಾಗುತ್ತಿದೆ. ಭಕ್ತಾದಿಗಳಿಗೆ ಮಾಸ್ಕ್ ಧರಿಸಿ ಬರುವಂತೆ ಟಿಟಿಡಿ ತಿಳಿಸಲಾಗಿದೆ.
ಪ್ರತಿ ಎರಡು ಗಂಟೆಗೊಮ್ಮೆ ಕ್ರಿಮಿನಾಶಕ ಸಿಂಪಡಿಸಿ, ದೇವಸ್ಥಾನದ ಆವರಣವನ್ನು ಸ್ವಚ್ಚ ಮಾಡಲಾಗುತ್ತಿದೆ. ಅನ್ನ ಪ್ರಸಾದ ಭವನದಲ್ಲಿ ಹೆಚ್ಚಿನ ಸ್ವಚ್ಚತೆ ಕಾಪಾಡಿಕೊಳ್ಳಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಬರುವ ಭಕ್ತಾಧಿಗಳ ಮೇಲೆಯೂ ಗಮನ ಇಟ್ಟಿದ್ದಾರೆ.
ಬೆಂಗಳೂರು 5 ಸ್ಟಾರ್ ಹೋಟೆಲ್ಗಳಲ್ಲಿ ಗ್ರಾಹಕರ ಕೊರತೆ
ಬೆಂಗಳೂರಿನಿಂದ ತೆಲಂಗಾಣಕ್ಕೆ ಪ್ರಯಾಣ ಮಾಡಿದ್ದ ವ್ಯಕ್ತಿ ಕೊರೊನಾ ವೈರಸ್ ಇರುವ ಶಂಕೆ ವ್ಯಕ್ತವಾಗಿತ್ತು. ಇದು ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೊದಲ ಕೊರೊನಾ ವೈರಸ್ ಪ್ರಕರಣವಾಗಿತ್ತು.