ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಭಾರೀ ಆಘಾತ, TRS ನತ್ತ ಅಜರುದ್ದಿನ್?

|
Google Oneindia Kannada News

ಹೈದರಾಬಾದ್, ಜನವರಿ 02: ತೆಲಂಗಾಣದ ಮುಖ್ಯಮಂತ್ರಿಯಾಗಿ ಡಿ.13 ರಂದೇ ಟಿಆರ್ ಎಸ್ ಮುಖಂಡ ಕೆ. ಚಂದ್ರಶೇಖರ್ ರಾವ್ ಪ್ರಮಾಣವಚನ ಸ್ವೀಕರಿಸಿದ್ದರೂ, ಇದುವರೆಗೂ ಸಂಪುಟ ಮಾತ್ರ ರಚನೆಯಾಗಿಲ್ಲ.

ಕಾಂಗ್ರೆಸ್ ನಿಂದ ಹಲವು ಶಾಸಕರು ಟಿಆರ್ ಎಸ್ ತೆಕ್ಕೆಗೆ ಹಾರಲಿರುವುದರಿಂದ ಸಂಪುಟ ವಿಸ್ತರಣೆಯೂ ವಿಳಂಬವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದರೊಟ್ಟಿಗೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಕ್ರಿಕೆಟಿಗ ಅಜರುದ್ದಿನ್ ಸಹ ಟಿಆರ್ ಎಸ್ ಗೆ ಸೇರಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ತೆಲಂಗಾಣ ಮುಖ್ಯಮಂತ್ರಿಯಾಗಿ ಇಂದು ಕೆಸಿಆರ್ ಪ್ರಮಾಣ ವಚನತೆಲಂಗಾಣ ಮುಖ್ಯಮಂತ್ರಿಯಾಗಿ ಇಂದು ಕೆಸಿಆರ್ ಪ್ರಮಾಣ ವಚನ

ಇತ್ತೀಚೆಗೆ ನಡೆ ತೆಲಂಗಾಣ ಚುನಾವಣೆಗೂ ಮುನ್ನ ಅಜರುದ್ದಿನ್ ಅವರನ್ನು ಟಿಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಅಜರುದ್ದಿನ್ ಅವರನ್ನು ಮಲ್ಕಂಜ್ ಗಿರಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ ಅದಕ್ಕೂ ಮುನ್ನವೇ ಅಜರುದ್ದಿನ್ ಕಾಂಗ್ರೆಸ್ ತೊರೆಯುತ್ತಿರುವುದು ಪಕ್ಷದಲ್ಲಿ ಆಘಾತವನ್ನುಂಟು ಮಾಡಿದೆ.

TRS eyes eight Congress MLAs including Mohammad Azaharuddin

ಗೆಲ್ಲಿಸಿದ ತೆಲಂಗಾಣ ಜನರಿಗೆ ಭಾರಿ ಉಡುಗೊರೆ ನೀಡಿದ ಸಿಎಂ ಕೆಸಿಆರ್‌ಗೆಲ್ಲಿಸಿದ ತೆಲಂಗಾಣ ಜನರಿಗೆ ಭಾರಿ ಉಡುಗೊರೆ ನೀಡಿದ ಸಿಎಂ ಕೆಸಿಆರ್‌

ಟಿಆರ್ ಎಸ್ ಗೆ ಸೇರಿದರೆ ಅಜರುದ್ದಿನ್ ಅವರಿಗೆ ಸಿಕಂದರಾಬಾದ್ ನಿಂದ ಲೋಕಸಭಾ ಟಿಕೆಟ್ ನೀಡಲು ಟಿಆರ್ ಎಸ್ ನಿರ್ಧರಿಸಿದೆ.

ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಮತ್ತು ಅಜರುದ್ದಿನ್ ಉತ್ತಮ ಸ್ನೇಹಿತರು. ಈಗಾಗಲೇ ಓವೈಸಿ ತಮ್ಮ ಬೆಂಬಲವನ್ನು ಕೆ. ಚಂದ್ರಶೇಖರ್ ರಾವ್ ಅವರಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Telangana Pradesh Congress Committee (TPCC) working president and former India cricket captain, Mohammad Azaharuddin, is all set to join the Telangana Rashtra Samiti and is likely to be given the Lok Sabha ticket from Secunderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X