ತಿರುಪತಿ ದೇವಾಲಯದಲ್ಲಿ ಕೆಲಸ ಕಳೆದುಕೊಂಡ 1,300 ಕಾರ್ಮಿಕರು
ಅಮರಾವತಿ, ಮೇ 2: ಲಾಕ್ಡೌನ್ನಿಂದ ಸಾಕಷ್ಟು ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಕಂಪನಿಗಳು ಮಾತ್ರವಲ್ಲದೆ, ತಿರುಪತಿ ದೇವಲಯದಲ್ಲಿಯೂ 1,300 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.
Recommended Video
ಕೆಲಸ ಕಳೆದುಕೊಂಡ 1,300 ಕಾರ್ಮಿಕರು ತಿರುಪತಿ ದೇವಾಲಯದಲ್ಲಿ ನೈರ್ಮಲ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಒಪ್ಪಂದದ (ಕಾಂಟ್ರಾಕ್ಟ್) ಆಧಾರದಲ್ಲಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ಇವರ ಕಾಂಟ್ರಾಕ್ಟ್ ಏಪ್ರಿಲ್ 30ಕ್ಕೆ ಮುಗಿದಿದೆ. ಈಗ ಈ ಕಾರ್ಮಿಕರ ಕಾಂಟ್ರಾಕ್ಟ್ ರಿನಿವಲ್ ಮಾಡದೆ ಇರಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದೆ.
ಕೊರೊನಾ ಭೀತಿ; ತಿರುಪತಿ ದೇವಾಲಯ ಒಂದು ವಾರ ಬಂದ್
ಏಪ್ರಿಲ್ 30ಕ್ಕೆ ಕಾಂಟ್ರಾಕ್ಟ್ ಮುಗಿದಿದ್ದು, ಮೇ 1 ರಿಂದ ಕೆಲಸಕ್ಕೆ ಬರದೆ ಇರಲು ತಿಳಿಸಲಾಗಿದೆ. ಖಾಯಂ ಕಾರ್ಮಿಕರು ಹಾಗೂ ಸಿಬ್ಬಂದಿಗಳ ಕೆಲಸ ಹಾಗೆ ಉಳಿದುಕೊಂಡಿದೆ. ಮಾರ್ಚ್ 20 ರಂದು ಲಾಕ್ಡೌನ್ ಘೋಷಣೆ ಆಗಿದ್ದು, ಆ ದಿನದಿಂದ ಎಲ್ಲ ಸಿಬ್ಬಂದಿಗಳಿಗೂ ರಜೆ ನೀಡಲಾಗಿದೆ.
ಕಾರ್ಮಿಕರು ಈ ಕಠಿಣ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಕೆಲಸವನ್ನು ಮುಂದುವರಿಸಲು ಅವಕಾಶ ನೀಡುವಂತೆ ಕೇಳುಕೊಂಡಿದ್ದಾರೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿ ಕಾಂಟ್ರಾಕ್ಟ್ ಮುಂದುವರೆಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.
ವರದಿಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಟಿಟಿಡಿಯ ಬಜೆಟ್ 3,309 ಕೋಟಿ ರೂಪಾಯಿ ಆಗಿತ್ತು. ಇದು ಫೆಬ್ರವರಿಯಲ್ಲಿ ಅಂತಿಮಗೊಳಿಸಿತ್ತು. ಆದರೆ, COVID-19 ಪರಿಸ್ಥಿತಿಯ ಕಾರಣದಿಂದಾಗಿ ಇದನ್ನು ಬದಲು ಮಾಡುವ ಸಾಧ್ಯತೆ ಇದೆ.