"ಭದ್ರತಾ ಲೋಪವಿಲ್ಲದೆ ಇಂಥ ಘಟನೆ ನಡೆಯಲು ಸಾಧ್ಯವೇ ಇಲ್ಲ"
ಹೈದರಾಬಾದ್, ಫೆಬ್ರವರಿ 18: 'ಭದ್ರತಾ ಲೋಪವಿಲ್ಲದೆ ಪುಲ್ವಾಮಾದಂಥ ಘಟನೆ ನಡೆಯುವುದಕ್ಕೆ ಸಾಧ್ಯವೇ ಇಲ್ಲ' ಎಂದು ಸಂಶೋದನೆ ಮತ್ತು ವಿಶ್ಲೇಷಣಾ ಘಟಕ(RAW)ದ ಮಾಜಿ ಮುಖ್ಯಸ್ಥ ವಿಕ್ರಂ ಸೂದ್ ಹೇಳಿದ್ದಾರೆ.
ಉಗ್ರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಈಗಲೂ ಪುಲ್ವಾಮಾದಲ್ಲಿ
"ಎಲ್ಲೋ ಏನೋ ತಪ್ಪಾಗಿದೆ. ಆದರೆ ಎಲ್ಲಿ ಎಂಬುದು ನನಗೂ ಗೊತ್ತಿಲ್ಲ. ಭದ್ರತಾ ಲೋಪವಿಲ್ಲದೆ ಈ ಘಟನೆ ನಡೆಯುವುದಕ್ಕೆ ಸಾಧ್ಯವೇ ಇಲ್ಲ. ಘಟನೆಯಲ್ಲಿ ಸಾಕಷ್ಟು ಜನರು ಭಾಗಿಯಾಗಿದ್ದಾರೆ. ಯಾರೋ ಒಬ್ಬ ಸ್ಫೋಟಕವನ್ನು ತಂದಿದ್ದಿರಬಹುದು, ಇನ್ನೊಬ್ಬ ಅವನ್ನು ಕಾರಿನಲ್ಲಿ ಜೋಡಿಸಿರಬಹುದು, ಸಿಆರ್ ಪಿಎಫ್ ಯೋಧರಿರುವ ವಾಹನ ಅಂದು ಆ ಪ್ರದೇಶದಲ್ಲಿ ಹೋಗುತ್ತದೆ ಎಂಬುದು ಅವರಿಗೆ ಮೊದಲೇ ಗೊತ್ತಿದ್ದಿರಬೇಕು" ಎಂದು ಸೂದ್ ಹೇಳಿದರು.
ಗಡಿಯಲ್ಲಿ ಆದೇಶಕ್ಕಾಗಿ ಕಾದಿರುವ ಭಾರತದ 140 ಯುದ್ಧ ವಿಮಾನಗಳು
ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದು ಸರ್ಕಾರಕ್ಕೆ ಬಿಟ್ಟಿದ್ದು, ಇದು ಬಾಕ್ಸಿಂಗ್ ಮ್ಯಾಚ್ ಅಲ್ಲ ತಕ್ಷಣವೇ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ. ಅದಕ್ಕೆ ಸಮಯ ಬೇಕು, ಜಾಗ ನಿಗದಿಯಾಗಬೇಕು. ಅದು ಇಂದೇ ಅಥವಾ ನಾಳೆಯೇ ಆಗಬೇಕು ಎಂದರೆ ಆಗುವುದಿಲ್ಲ ಎಂದು ಸೂದ್ ಅಭಿಪ್ರಾಯಪಟ್ಟರು.
ಈ ಘಟನೆಗೆ ತಕ್ಕ ಪ್ರತ್ಯುತ್ತರ ನೀಡುವುದು ಇಡೀ ಭಾರತದ ಪ್ರಯತ್ನವಾಗಬೇಕೆ ಹೊರತು ಯಾವೊಂದು ಪಕ್ಷದ ಪ್ರತ್ಯುತ್ತರವಾಗಬಾರದು ಎಂದು ಸೂದ್ ಹೇಳಿದಿರು.