ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

48000 ನೌಕರರನ್ನು ಕೆಲಸದಿಂದ ವಜಾಗೊಳಿಸಿದ ತೆಲಂಗಾಣ ಸಿಎಂ

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 07: ತೆಲಂಗಾಣ ಸಿಎಂ ಕೆ.ಚಂದ್ರಶೇಕರ್ ರಾವ್ ಅವರು ರಾಜ್ಯ ರಸ್ತೆ ಸಾರಿಗೆಯ ಬರೋಬ್ಬರಿ 48000 ನೌಕರರನ್ನು ಸೇವೆಯಿಂದಲೇ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ 48000 ನೌಕರರನ್ನು ಒಂದೇ ಬಾರಿಗೆ ಕೆಸಿಆರ್ ಸರ್ಕಾರ ವಜಾಗೊಳಿಸಿದ್ದು, ಸಿಎಂ ಅವರ ಈ ಹಿಟ್ಲರ್ ನಡೆಯ ವಿರುದ್ಧ ನೌಕರರು ಬೀದಿಗಿಳಿದಿದ್ದಾರೆ.

ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಶುಕ್ರವಾರದಿಂದಲೂ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಭಾನುವಾರ ಇವರಿಗೆಲ್ಲಾ ಭಾರಿ ಶಾಕ್ ನೀಡಿದ ಸರ್ಕಾರ ಬರೋಬ್ಬರಿ 48000 ಮಂದಿ ನೌಕರರನ್ನು ಕೆಲಸದಿಂದಲೇ ವಜಾಗೊಳಿಸಿದೆ.

ಐಪಿಎಸ್ ಮಧುಕರ್ ಶೆಟ್ಟಿ ನಿಗೂಢ ಸಾವು: ತಿಪ್ಪೆ ಸಾರಿಸಿದ ತಜ್ಞರ ಸಮಿತಿ ವರದಿ ಐಪಿಎಸ್ ಮಧುಕರ್ ಶೆಟ್ಟಿ ನಿಗೂಢ ಸಾವು: ತಿಪ್ಪೆ ಸಾರಿಸಿದ ತಜ್ಞರ ಸಮಿತಿ ವರದಿ

ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ನಿನ್ನೆ ಸಂಜೆ ಘೋಷಣೆ ಮಾಡಿರುವಂತೆ 1200 ಮಂದಿ ಮಾತ್ರವೇ ರಸ್ತೆ ಸಾರಿಗೆ ಇಲಾಖೆಯಲ್ಲಿ ನೌಕರರಿದ್ದು, ಸಂಜೆ 6 ಗಂಟೆ ಒಳಗೆ ಯಾರು ಕೆಲಸಕ್ಕೆ ಹಾಜರಾಗುತ್ತಾರೊ ಅವರನ್ನು ಬಿಟ್ಟು ಉಳಿದೆಲ್ಲವರನ್ನೂ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಹೇಳಿದ್ದರು.

49,340 ನೌಕರರು ಪ್ರತಿಭಟನೆಯಲ್ಲಿದ್ದರು

49,340 ನೌಕರರು ಪ್ರತಿಭಟನೆಯಲ್ಲಿದ್ದರು

ತೆಲಂಗಾಣ ರಸ್ತೆ ಸಾರಿಗೆಯ ನೌಕರರ ಸಂಘದ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ 49,340 ಮಂದಿ ನೌಕರರು ಭಾಗವಹಿಸಿದ್ದರು. ಇದರಲ್ಲಿ 48,000 ನೌಕರರನ್ನು ಸೇವೆಯಿಂದ ಏಕಾ-ಏಕಿ ವಜಾ ಮಾಡಲಾಗಿದೆ.

ಸರ್ಕಾರಿ ನೌಕರರ ದರ್ಜೆಗಾಗಿ ಪ್ರತಿಭಟಿಸಿದ್ದ ನೌಕರರು

ಸರ್ಕಾರಿ ನೌಕರರ ದರ್ಜೆಗಾಗಿ ಪ್ರತಿಭಟಿಸಿದ್ದ ನೌಕರರು

ರಸ್ತೆ ಸಾರಿಗೆಯನ್ನು ಸರ್ಕಾರದ ಅಡಿಗೆ ತೆಗೆದುಕೊಂಡು, ರಸ್ತೆ ಸಾರಿಗೆ ನೌಕರರಿಗೆ ಸರ್ಕಾರಿ ನೌಕರ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದರ ಜೊತೆಗೆ ಏಪ್ರಿಲ್ 2017 ರಿಂದ ಬಾಕಿ ಉಳಿದಿರುವ ಸಂಬಳ ಪರೀಷ್ಕರಣೆಯನ್ನು ಮಾಡುವಂತೆ ಹಾಗೂ ನೌಕರರ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಲೆಂದು ಹೊಸ ನೇಮಕಾತಿ ಮಾಡುವಂತೆ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು.

ತೆಲಂಗಾಣ ಸಂಪುಟ ವಿಸ್ತರಣೆ : 6 ಮಂದಿ ಸಚಿವರ ಸೇರ್ಪಡೆತೆಲಂಗಾಣ ಸಂಪುಟ ವಿಸ್ತರಣೆ : 6 ಮಂದಿ ಸಚಿವರ ಸೇರ್ಪಡೆ

ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ನಿರ್ಧಾರ

ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ನಿರ್ಧಾರ

ಪ್ರತಿಭಟನೆ ಕುರಿತು ಉನ್ನತ ಅಧಿಕಾರಿಗಳು ಮತ್ತು ಮಂತ್ರಿಗಳ ಸಭೆ ನಡೆಸಿದ ಸಿಎಂ ಕೆ.ಚಂದ್ರಶೇಖರ ರಾವ್ ಅವರು, ಯಾರು ಶನಿವಾರದ ಒಳಗೆ ಕೆಲಸಕ್ಕೆ ಹಾಜರಾಗುವುದಿಲ್ಲವೊ ಅವರನ್ನು ಸೇವೆಯಿಂದ ವಜಾಮಾಡುವಂತೆ ಸೂಚನೆ ನೀಡಿದರು ಎಂದು ಸಿಎಂ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್

ಪ್ರತಿಭಟನಾಕಾರರೊಂದಿಗೆ ಮಾತುಕತೆ ಇಲ್ಲ: ಸಿಎಂ

ಪ್ರತಿಭಟನಾಕಾರರೊಂದಿಗೆ ಮಾತುಕತೆ ಇಲ್ಲ: ಸಿಎಂ

ಸಿಎಂ ಸೂಚನೆಯಂತೆ ಭಾನುವಾರ ಬೆಳಿಗ್ಗೆ ಆದೇಶವನ್ನು ಹೊರಡಿಸಲಾಗಿದ್ದು, ಪ್ರತಿಭಟನಾಕಾರರೊಂದಿಗೆ ಯಾವುದೇ ಮಾತುಕತೆಯನ್ನು ಸರ್ಕಾರ ನಡೆಸುವುದಿಲ್ಲವೆಂದು ಸಹ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶೀಘ್ರದಲ್ಲೇ ಹೊಸ ನೇಮಕಾತಿಗೆ ಆದೇಶ: ಸಿಎಂ

ಶೀಘ್ರದಲ್ಲೇ ಹೊಸ ನೇಮಕಾತಿಗೆ ಆದೇಶ: ಸಿಎಂ

ಶೀಘ್ರದಲ್ಲಿಯೇ ರಸ್ತೆ ಸಾರಿಗೆ ಸಂಸ್ಥೆಗೆ ಹೊಸ ನೌಕರರನ್ನು ಸೇರಿಸಿಕೊಳ್ಳುವ ನೇಮಕಾತಿ ಪ್ರತಿಕ್ರಿಯೆ ಪ್ರಾರಂಭ ಮಾಡುತ್ತೇವೆ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ. ಆದರೆ ವಜಾಗೊಂಡಿರುವ ನೌಕರರು ಪ್ರತಿಭಟನೆ ಆರಂಭಿಸಿದ್ದು, ಅವರಿಗೆ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.

English summary
Telangana CM K Chandrashekhar Rao orderd to dismisses 48,000 employees of Telangana RTC who were in protest against state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X