ಹುತಾತ್ಮ ಯೋಧ ಕರ್ನಲ್ ಸಂತೋಷ್ ಬಾಬು ಕುಟುಂಬಕ್ಕೆ 5 ಕೋಟಿ ಚೆಕ್ ನೀಡಿದ ಕೆಸಿಆರ್
ಹೈದ್ರಾಬಾದ್, ಜೂನ್ 22: ಪೂರ್ವ ಲಡಾಖ್ ನಲ್ಲಿ ಚೀನಾ ಯೋಧರ ದಾಳಿಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರ ಕುಟುಂಬವನ್ನು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಇಂದು ಭೇಟಿ ಮಾಡಿದ್ದಾರೆ. ಜೊತೆಗೆ ಕರ್ನಲ್ ಅವರ ಪತ್ನಿಗೆ 5 ಕೋಟಿ ರುಪಾಯಿ ಎಕ್ಸ್-ಗ್ರೇಟಿಯಾ, ರೆಸಿಡೆನ್ಶಿಯಲ್ ಫ್ಲಾಟ್ ಮತ್ತು ಗ್ರೂಪ್ 1 ಉದ್ಯೋಗ ನೀಡಲಾಗಿದೆ.
Recommended Video
ಈ ಹಿಂದೆಯೇ ಈ ಕುರಿತು ಘೋಷಣೆ ಮಾಡಿದ್ದ ತೆಲಂಗಾಣ ಸಿಎಂ ಕೆಸಿಆರ್ ಹುತಾತ್ಮ ಯೋಧ ಸಂತೋಷ್ ಬಾಬು ಕುಟುಂಬಕ್ಕೆ 5 ಕೋಟಿ ರು. ಪರಿಹಾರ ನೀಡಲಾಗುತ್ತಿದ್ದು, ಉಳಿದ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರು. ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದರು.
ಗಲ್ವಾನ್ ಕಣಿವೆಯಲ್ಲಿನ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ: ವಾಯುಸೇನೆ ಮುಖ್ಯಸ್ಥ
ಸಂತೋಷ್ ಬಾಬು ಕುಟುಂಬಕ್ಕೆ ಐದು ಕೋಟಿ ರುಪಾಯಿ ಪರಿಹಾರದ ಜೊತೆಗೆ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಮತ್ತು ಫ್ಲಾಟ್ ಅನ್ನು ನೀಡಲಾಗಿದೆ. ಸ್ವತಃ ಮುಖ್ಯಮಂತ್ರಿಗಳೇ ಅವರ ಮನೆಗೆ ತೆರಳಿ ಚೆಕ್ ಹಸ್ತಾಂತರಿಸಿದ್ದಾರೆ.
ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಭಾರತೀಯ ಸೈನಿಕರ ಶೌರ್ಯವನ್ನು ಎಂದಿಗೂ ಮರೆಯಲ್ಲ: ಅಮೆರಿಕಾ
ಗಡಿಯಲ್ಲಿ ನಮ್ಮ ದೇಶವನ್ನು ಕಾಯುತ್ತಿರುವ ಯೋಧರೊಂದಿಗೆ ಇಡೀ ದೇಶ ನಿಲ್ಲಲಿದೆ. ಹುತಾತ್ಮ ಯೋಧರ ಕುಟುಂಬಸ್ಥರೊಂದಿಗೆ ನಾವು ನಿಲ್ಲಬೇಕು. ಅವರಿಗೆ ಬೆಂಬಲ ನೀಡಬೇಕು. ಇಡೀ ದೇಶ ನಿಮ್ಮೊಂದಿಗಿದೆ ಎಂಬ ಧೈರ್ಯವನ್ನು ನಾವು ನೀಡಬೇಕು ಎಂದು ಕೆಸಿಆರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.