ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ಕೆ.ಶಿವಕುಮಾರ್, ರಾಮುಲು ಮತ್ತೆ ಮುಖಾಮುಖಿ, ಈ ಬಾರಿ ಗೆಲುವು ಯಾರಿಗೆ?

|
Google Oneindia Kannada News

Recommended Video

ಡಿ ಕೆ ಶಿವಕುಮಾರ್ ಹಾಗು ಬಿ ಶ್ರೀರಾಮುಲು ಮತ್ತೆ ಮುಖಾಮುಖಿ | ಈ ಬಾರಿ ಕರ್ನಾಟಕದಲ್ಲಲ್ಲ | Oneindia Kannada

ಹೈದರಾಬಾದ್, ಡಿಸೆಂಬರ್ 03: ತಿಂಗಳ ಹಿಂದಷ್ಟೆ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ರಾಜಕೀಯವಾಗಿ ಮುಖಾ-ಮುಖಿ ಆಗಿದ್ದ ಬಿಜೆಪಿಯ ಶ್ರೀರಾಮುಲು ಮತ್ತು ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಅವರುಗಳು ಈಗ ಮತ್ತೆ ಎದುರುಬದುರಾಗಿದ್ದಾರೆ.

ಹೌದು, ಇಬ್ಬರೂ ಮತ್ತೆ ಚುನಾವಣಾ ರಾಜಕೀಯದಲ್ಲಿಯೇ ಮುಖಾ-ಮುಖಿ ಆಗಿದ್ದಾರೆ, ಆದರೆ ಕರ್ನಾಟಕದಲ್ಲಲ್ಲ, ಬದಲಿಗೆ ನೆರೆಯ ತೆಲಂಗಾಣ ರಾಜ್ಯದಲ್ಲಿ.

ಶ್ರೀರಾಮುಲು ನನ್ನ ಪರ್ಸನಲ್ ಫ್ರೆಂಡ್ ಎಂದ ಡಿ.ಕೆ. ಶಿವಕುಮಾರ್ ಶ್ರೀರಾಮುಲು ನನ್ನ ಪರ್ಸನಲ್ ಫ್ರೆಂಡ್ ಎಂದ ಡಿ.ಕೆ. ಶಿವಕುಮಾರ್

ತೆಲಂಗಾಣದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 7 ರಂದು ಮತದಾನ ಇದೆ. ಹಾಗಾಗಿ ಕಾಂಗ್ರೆಸ್‌ ಪಕ್ಷವು ಡಿ.ಕೆ.ಶಿವಕುಮಾರ್ ಅವರನ್ನು ಪ್ರಚಾರ ಉಸ್ತುವಾರಿ ಮತ್ತು ಅಸಮಾಧಾನ ತಡೆಗೆಂದು ತೆಲಂಗಾಣಕ್ಕೆ ನಿಯೋಜಿಸಿದ್ದರೆ. ಬಿಜೆಪಿಯು ರಾಮುಲು ಅವರನ್ನು ತೆಲಂಗಾಣದಲ್ಲಿ ಪ್ರಚಾರಕ್ಕೆ ಕಳುಹಿಸಿದೆ.

ಇಬ್ಬರೂ ಶಕ್ತಿವಂತ ರಾಜಕಾರಣಿಗಳು

ಇಬ್ಬರೂ ಶಕ್ತಿವಂತ ರಾಜಕಾರಣಿಗಳು

ಕರ್ನಾಟಕದ ಈ ಇಬ್ಬರೂ ಶಕ್ತಿವಂತ ರಾಜಕಾರಣಿಗಳು ಈಗ ನೆರೆಯ ತೆಲಂಗಾಣದಲ್ಲಿ ತಮ್ಮ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಬಳ್ಳಾರಿ ಉಪಚುನಾವಣೆ ರಾಮುಲು ಮತ್ತು ಡಿಕೆ.ಶಿವಕುಮಾರ್ ಅವರ ನಡುವಿನ ಕದನ ಎಂದೇ ಬಿಂಬಿತವಾಗಿತ್ತು, ಆ ಕದನದಲ್ಲಿ ಅಂತಿಮವಾಗಿ ಡಿ.ಕೆ.ಶಿವಕುಮಾರ್ ವಿಜಯ ಸಾಧಿಸಿದ್ದರು.

ನನ್ನನ್ನು 108 ಅಂಬುಲೆನ್ಸ್ ಶ್ರೀರಾಮುಲು ಅಂತಾರೆ: ಸಿದ್ದು Vs ರಾಮುಲು ವಾಕ್ಸಮರ ಜೋರು ನನ್ನನ್ನು 108 ಅಂಬುಲೆನ್ಸ್ ಶ್ರೀರಾಮುಲು ಅಂತಾರೆ: ಸಿದ್ದು Vs ರಾಮುಲು ವಾಕ್ಸಮರ ಜೋರು

ತೆಲಂಗಾಣದಲ್ಲಿ ಮತ್ತೆ ಮುಖಾ-ಮುಖಿ

ತೆಲಂಗಾಣದಲ್ಲಿ ಮತ್ತೆ ಮುಖಾ-ಮುಖಿ

ಈಗ ಮತ್ತೆ ತೆಲಂಗಾಣದಲ್ಲಿ ಇಬ್ಬರೂ ನಾಯಕರು ಎದುರು-ಬದುರಾಗಿದ್ದಾರೆ. ಇಬ್ಬರೂ ಸಹ ತಂತಮ್ಮ ಪಕ್ಷಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಸಂಘಟನೆ ಮಾಡುತ್ತಿದ್ದಾರೆ. ಈ ಬಾರಿ ಯಾರಿಗೆ ಗೆಲುವಾಗುತ್ತದೆ ಎಂಬುದು ಕಾದು ನೋಡಬೇಕಿದೆ.

ನನ್ನ ವಿರುದ್ಧ ಸ್ವಪಕ್ಷೀಯರಿಂದಲೇ ಷಡ್ಯಂತ್ರ: ರಮೇಶ್ ಜಾರಕಿಹೊಳಿ ನನ್ನ ವಿರುದ್ಧ ಸ್ವಪಕ್ಷೀಯರಿಂದಲೇ ಷಡ್ಯಂತ್ರ: ರಮೇಶ್ ಜಾರಕಿಹೊಳಿ

ಚಂದ್ರಬಾಬು ಜೊತೆ ಡಿಕೆಶಿ ಪ್ರಚಾರ

ಚಂದ್ರಬಾಬು ಜೊತೆ ಡಿಕೆಶಿ ಪ್ರಚಾರ

ಡಿ.ಕೆ.ಶಿವಕುಮಾರ್ ಅವರು ಮೊನ್ನೆಯಷ್ಟೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಟ್ಟಿಗೆ ಬಹಿರಂಗ ಪ್ರಚಾರ ಮಾಡಿದರು. ಅಷ್ಟೆ ಅಲ್ಲದೆ ತೆಲಂಗಾಣ ಚುನಾವಣೆ ಸಂಬಂಧಿ ಹಲವು ಪ್ರಮುಖ ಸಭೆಗಳ ಮುಖಂಡತ್ವ ಸಹ ಅವರು ವಹಿಸಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಟಿಡಿಪಿ ಜತೆ ಸೇರಿ ಸ್ಪರ್ಧಿಸುತ್ತಿದೆ.

ಮಹತ್ವದ ಬೆಳವಣಿಗೆ: ಡಿ.ಕೆ.ಶಿವಕುಮಾರ್ ಮನೆಗೆ ಯಡಿಯೂರಪ್ಪ ದಿಢೀರ್ ಭೇಟಿ ಮಹತ್ವದ ಬೆಳವಣಿಗೆ: ಡಿ.ಕೆ.ಶಿವಕುಮಾರ್ ಮನೆಗೆ ಯಡಿಯೂರಪ್ಪ ದಿಢೀರ್ ಭೇಟಿ

ಬಳ್ಳಾರಿ ಗಡಿಯಲ್ಲಿ ರಾಮುಲು ಪ್ರಚಾರ

ಬಳ್ಳಾರಿ ಗಡಿಯಲ್ಲಿ ರಾಮುಲು ಪ್ರಚಾರ

ಶ್ರೀರಾಮುಲು ಅವರು ಕರ್ನೂಲು ಭಾಗದಲ್ಲಿ ಇಂದು ಪ್ರಚಾರ ಮಾಡಿದ್ದಾರೆ. ಇದಕ್ಕೆ ಮುನ್ನಾ ಆಲಂಪುರ, ವನಪಾರ್ತಿ, ಕೊಲ್ಲಾಪುರಗಳಲ್ಲಿ ಪ್ರಚಾರ ಮಾಡಿದ್ದಾರೆ. ಸ್ವತಃ ತೆಲುಗು ಭಾಷಿಕರಾಗಿರುವ ರಾಮುಲು ಅವರು ಕರ್ನಾಟಕದ-ಆಂದ್ರದ ಬಳ್ಳಾರಿ ಗಡಿ ಭಾಗದಲ್ಲಿ ಈಗಾಗಲೇ ಪರಿಚಿತರು ಹಾಗಾಗಿ ಇದೇ ಭಾಗಗಳಲ್ಲಿ ಅವರು ಪ್ರಚಾರ ಮಾಡುತ್ತಿದ್ದಾರೆ.

English summary
BJP MLA Sriramulu and congress minister DK Shivakumar again in a political war in Telangana. Both were campaigning for them parties in Telangana elections. Both were compete politically on each other in recent Bellari Lok Sabha by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X