'ಮನುಸ್ಮೃತಿ ಇರಾನಿ'ಗೆ ಪಾಠ ಕಲಿಸಲು ವೇಮುಲಾ ತಾಯಿ ಕಣಕ್ಕಿಳಿಯಲಿ: ಮೇವಾನಿ
ಹೈದರಾಬಾದ್, ಜನವರಿ 18: 2019ರ ಲೋಕಸಭೆ ಚುನಾವಣೆಯಲ್ಲಿ ರೋಹಿತ್ ವೇಮುಲಾ ತಾಯಿ ರಾಧಿಕಾ ವೇಮುಲಾ ಕಣಕ್ಕಿಳಿಯಬೇಕು ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಿಗ್ನೇಶ್, "2019ರ ಚುನಾವಣೆಯಲ್ಲಿ ಕಣಕ್ಕಿಳಿಯಬೇಕು ಎಂದು ನಮ್ಮ ಸ್ಪೂರ್ಥಿ ರಾಧಿಕಾ ವೆಮುಲಾ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಮತ್ತು ಈ ಮೂಲಕ ಸಂಸತ್ತಿನಲ್ಲಿ ಮನುಸ್ಮೃತಿ ಇರಾನಿಗೆ ಪಾಠ ಕಲಿಸಬೇಕು," ಎಂದು ಅವರು ಕರೆ ನೀಡಿದ್ದಾರೆ.
I strongly appeal to our inspiration Radhika(amma)Vemula to contest in 2019 elections and teach a lesson to Manusmriti Irani in Parliament.
— Jignesh Mevani (@jigneshmevani80) January 18, 2018
28 ವರ್ಷದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಜನವರಿ 17, 2016ರಲ್ಲಿ ಹೈದರಾಬಾದ್ ವಿವಿಯ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದು ರಾಷ್ಟ್ರದಾದ್ಯಂತ ಭಾರೀ ಸಂಚಲನವನ್ನು ಸೃಷ್ಟಿಸಿತ್ತು. ಇದೀಗ ವೇಮುಲಾ ಆತ್ಮಹತ್ಯೆಯನ್ನು 'ಸಂಸ್ಥೆಯ ಕೊಲೆ' ಎಂದು ಮೇವಾನಿ ಆರೋಪಿಸಿದ್ದಾರೆ.
ಮಾತ್ರವಲ್ಲದೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು 'ಮನುಸ್ಮೃತಿ ಇರಾನಿ' ಎಂದು ಕರೆದಿರುವ ಮೇವಾನಿ, ಅವರಿಗೆ ಪಾಠ ಕಲಿಸಬೇಕು ಎಂದು ಒತ್ತಾಯಿಸಿದ್ದಾರೆ.